ಕಾಡಾನೆ ರಕ್ಷಣೆ TNIE
ರಾಜ್ಯ

ರೈಲ್ವೇ ಬ್ಯಾರಿಕೇಡ್ ಕೆಳಗೆ ಸಿಲುಕಿ ಕಾಡಾನೆ ನರಳಾಟ: 10 ನಿಮಿಷದಲ್ಲೇ ರಕ್ಷಿಸಿದ ಅರಣ್ಯಾಧಿಕಾರಿಗಳು!

ಅರಣ್ಯದ ಅಂಚಿನಲ್ಲಿ ರೈಲ್ವೇ ಬ್ಯಾರಿಕೇಡ್‌ಗಳನ್ನು ಹಾಕಿದ್ದರೆ, ಆನೆಗಳು ಬ್ಯಾರಿಕೇಡ್‌ಗಳನ್ನು ದಾಟಿ ಎಸ್ಟೇಟ್‌ಗಳ ಮೂಲಕ ಗ್ರಾಮಗಳಿಗೆ ಎಂಟ್ರಿಕೊಡುತ್ತಿವೆ.

ಮಡಿಕೇರಿ: ಕುಶಾಲನಗರ ತಾಲೂಕಿನ ವಾಲ್ನೂರು-ತ್ಯಾಗತ್ತೂರು ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಡುವೆ ಸಿಲುಕಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.

ಸುಮಾರು 25 ವರ್ಷ ಪ್ರಾಯದ ಹೆಣ್ಣಾನೆಯೊಂದು ವಾಲ್ನೂರು-ತ್ಯಾಗತ್ತೂರು ಎಸ್ಟೇಟ್‌ಗೆ ನುಗ್ಗಿತ್ತು. ಆನೆ ಗ್ರಾಮಕ್ಕೆ ತಲುಪದಂತೆ ಅಳವಡಿಸಲಾಗಿದ್ದ ರೈಲ್ವೆ ಬ್ಯಾರಿಕೇಡ್ ಅನ್ನು ಯಶಸ್ವಿಯಾಗಿ ದಾಟಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಆನೆಯು ರೈಲ್ವೇ ಬ್ಯಾರಿಕೇಡ್ ದಾಟಲು ಯತ್ನಿಸುತ್ತಿದ್ದಾಗ ಬ್ಯಾರಿಕೇಡ್ ನಡುವೆ ಸಿಲುಕಿಕೊಂಡಿದೆ. ಆನೆಯ ಕೂಗು ಕೇಳಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬ್ಯಾರಿಕೇಡ್ ಬಿಚ್ಚಿ ಆನೆಯನ್ನು ರಕ್ಷಿಸಿದ್ದಾರೆ.

ಎಸ್ಟೇಟ್‌ಗಳಿಂದ ಕಾಡಿಗೆ ಆನೆ ಮರಳುತ್ತಿತ್ತು. ಆದರೆ ಅದು ರೈಲ್ವೆ ಬ್ಯಾರಿಕೇಡ್‌ನ ಕಳೆಗೆ ಸಿಲುಕಿಕೊಂಡಿತು. ಈ ವೇಳೆ ರಕ್ಷಣಾ ಕಾರ್ಯಾಚರಣೆ ಕೈಗೊಂಡ ಅರಣ್ಯಾಧಿಕಾರಿಗಳು ಸುಮಾರು 10 ನಿಮಿಷದಲ್ಲೇ ಬ್ಯಾರಿಕೇಡ್ ಕಟ್ ಮಾಡಿ ಆನೆಯನ್ನು ರಕ್ಷಿಸಲಾಯಿತು ಎಂದು RFO ದೃಢಪಡಿಸಿದರು. ರಕ್ಷಣಾ ಕಾರ್ಯಾಚರಣೆಯ ನಂತರ ಆನೆಯು ಕಾವೇರಿ ನದಿಯ ಮೂಲಕ ಅರಣ್ಯವನ್ನು ತಲುಪಿತು ಎಂದು ಅವರು ಹೇಳಿದರು.

ಏತನ್ಮಧ್ಯೆ, ವಾಲ್ನೂರು-ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ಸಂಘರ್ಷ ಹೆಚ್ಚಿದೆ. ಅರಣ್ಯದ ಅಂಚಿನಲ್ಲಿ ರೈಲ್ವೇ ಬ್ಯಾರಿಕೇಡ್‌ಗಳನ್ನು ಹಾಕಿದ್ದರೆ, ಆನೆಗಳು ಬ್ಯಾರಿಕೇಡ್‌ಗಳನ್ನು ದಾಟಿ ಎಸ್ಟೇಟ್‌ಗಳ ಮೂಲಕ ಗ್ರಾಮಗಳಿಗೆ ಎಂಟ್ರಿಕೊಡುತ್ತಿವೆ. ಈ ಸಮಸ್ಯೆಯನ್ನು ವೈಜ್ಞಾನಿಕವಾಗಿ ಬಗೆಹರಿಸಿ ಸಂಘರ್ಷಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT