ಶರಣರ ಶಕ್ತಿ ಸಿನಿಮಾ ಸ್ಟಿಲ್ 
ರಾಜ್ಯ

ಆಕ್ರೋಶಕ್ಕೆ ಕಾರಣವಾದ ‘ಶರಣರ ಶಕ್ತಿ’ ಸಿನಿಮಾ: ಪ್ರಮುಖ ಲಿಂಗಾಯತ ಮುಖಂಡರಿಗಾಗಿ ವಿಶೇಷ ಪ್ರದರ್ಶನ

ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರ ಕಥೆಗಳಿಗೆ ಜೀವ ತುಂಬುವ ಶರಣರ ಶಕ್ತಿ ಸಿನಿಮಾವು 12 ನೇ ಶತಮಾನದ ಕಥೆ ಎಂದು ಚಿತ್ರದ ನಿರ್ದೇಶಕರು ವಿವರಿಸಿದ್ದಾರೆ.

ಬೆಂಗಳೂರು: ಬಸವಾದಿ ಶರಣರನ್ನು ಅವಮಾನಿಸುವ, ಶರಣರ ತತ್ವ-ಸಿದ್ಧಾಂತ ತಿರುಚುವ, ಶರಣರ ಆಶಯಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ ‘ಶರಣರ ಶಕ್ತಿ’ ಚಲಚನಚಿತ್ರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಂಗಾಯತ ಪ್ರಮುಖ ಮುಖಂಡರಿಗಾಗಿ ವಿಶೇಷ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ.

ಶರಣರ ಶಕ್ತಿ ಸಿನಿಮಾ ಆಕ್ಟೋಬರ್ 18 ರಂದು ರಿಲೀಸ್ ಮಾಡಲು ಸಿದ್ಧತೆ ಮಾಡಲಾಗಿದೆ. ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರ ಕಥೆಗಳಿಗೆ ಜೀವ ತುಂಬುವ ಶರಣರ ಶಕ್ತಿ ಸಿನಿಮಾವು 12 ನೇ ಶತಮಾನದ ಕಥೆ ಎಂದು ಚಿತ್ರದ ನಿರ್ದೇಶಕರು ವಿವರಿಸಿದ್ದಾರೆ. ಅನುಭವ ಮಂಟಪ, ಪವಿತ್ರ ಇಷ್ಟಲಿಂಗ ಮತ್ತು ಶರಣರ ಬಲಿದಾನದ ಮೇಲೆ ಸಮಾಜ ಮತ್ತು ಆಧ್ಯಾತ್ಮಿಕತೆಗೆ ಅವರ ಅಳಿಸಲಾಗದ ಕೊಡುಗೆಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ ಎಂದಿದ್ದಾರೆ.

ಮಠಾಧೀಶರು ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಗುಂಪುಗಳ ಸದಸ್ಯರು ಸೇರಿದಂತೆ ಲಿಂಗಾಯತ ಮುಖಂಡರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಸೋಮವಾರ ಮಲ್ಲೇಶ್ವರಂನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಾಜಿ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖರಾದ ಎಸ್.ಎಂ.ಜಾಮದಾರ್ ಅವರು ಭಾಗವಹಿಸಿದ್ದರು. ಚಲನಚಿತ್ರವನ್ನು ವೀಕ್ಷಿಸಿದ ನಂತರ, "ಅನೇಕ ಆಕ್ಷೇಪಾರ್ಹ ವಿಷಯಗಳಿವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಚಿತ್ರದ ವಿವಾದಾತ್ಮಕ ಅಂಶಗಳನ್ನು ವಿವರವಾಗಿ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು. ಲಿಂಗಾಯತ ಮಠಾಧೀಶರು ಮತ್ತು ಗದಗಿನ ಸಮುದಾಯದ ಮುಖಂಡರಾದ ಸಿದ್ದರಾಮ ಸ್ವಾಮೀಜಿ, ಬೆಳ್ಳಿಮಠ ಸ್ವಾಮೀಜಿ, ಬಸವ ಯೋಗಿ ಸ್ವಾಮೀಜಿ, ಟಿ.ಆರ್.ಚಂದ್ರಶೇಖರ್, ಅರವಿಂದ್ ಜತ್ತಿ ಸೇರಿದಂತೆ ಅನೇಕ ವಿದ್ವಾಂಸರು ಮತ್ತು ಸಮುದಾಯದ ಮುಖಂಡರು ಸಿನಿಮಾ ವೀಕ್ಷಿಸಿದರು.ಸಿನಿಮಾ ನೋಡುವಾಗ ಅನೇಕರು ಕಾಗದದ ತುಂಡುಗಳಲ್ಲಿ ಟಿಪ್ಪಣಿಗಳನ್ನು ಮಾಡುತ್ತಿರುವುದು ಕಂಡುಬಂದಿತು.

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಅನೇಕ ಬಸವ ಪರ ಸಂಘಟನೆಗಳು ಸೇರಿದಂತೆ ಹಲವು ಲಿಂಗಾಯತ ಗುಂಪುಗಳು ಚಲನಚಿತ್ರವನ್ನು ವಿರೋಧಿಸಿದ್ದು ಚಿತ್ರವನ್ನು ಬಿಡುಗಡೆ ಮಾಡದಂತೆ ಪತ್ರ ಬರೆದಿವೆ. ವಿಜಯಪುರದಲ್ಲಿ ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ರವಿಕುಮಾರ್ ಬಿರಾದಾರ್ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಸುಮಾರು 100 ಜನರು ಭಾಗವಹಿಸಿ ಪ್ರತಿಭಟನಾ ಸಭೆ ನಡೆಸಿದರು. ಟ್ರೇಲರ್ ವೀಕ್ಷಿಸಿದ ನಂತರ ಮತ್ತು ಚಲನಚಿತ್ರದಲ್ಲಿ ಬಸವಣ್ಣನ ಸಹೋದರಿ ಅಕ್ಕ ನಾಗಮ್ಮನ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಲಿಂಗಾಯತ ನಂಬಿಕೆಯಲ್ಲಿ ಆಕೆ ಪೂಜ್ಯನೀಯ, ಅಕ್ಕ ನಾಗಮ್ಮ ನಮಗೆ ತಾಯಿ ಇದ್ದಂತೆ. ಅವಳನ್ನು ಇಷ್ಟೊಂದು ಅವಮಾನಕರ ರೀತಿಯಲ್ಲಿ ಚಿತ್ರಿಸಿರುವುದನ್ನು ನಾವು ಹೇಗೆ ಸಹಿಸಿಕೊಳ್ಳಬಹುದು? ಕರಾಳ ಸಮಯದಲ್ಲಿ ನಮ್ಮ ನಂಬಿಕೆಯನ್ನು ಕಾಲದಲ್ಲಿ ಕಾಪಾಡಿದ ವೀರವನಿತೆ. ಆದರೆ ಆಕೆಯ ಬಗ್ಗೆ ಅಷ್ಟೊಂದು ಅವಮಾನಕರ ರೀತಿಯಲ್ಲಿ ಚಿತ್ರಿಸಿರುವುದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಬಿರಾದಾರ್ ಟಿಎನ್‌ಐಇಗೆ ತಿಳಿಸಿದರು.

ಲಿಂಗಾಯತ ನಂಬಿಕೆಯನ್ನು ಬಲವಂತವಾಗಿ ಇತರರ ಮೇಲೆ ಹೇರಲಾಗಿದೆ ಎಂದು ಚಿತ್ರದಲ್ಲಿ ತಪ್ಪಾಗಿ ಸೂಚಿಸಿದೆ, ಇದು ಸರಿಯಲ್ಲ ಎಂದು ಬಿರಾದಾರ್ ಅವರು ಕಟುವಾಗಿ ಟೀಕಿಸಿದ್ದಾರೆ. “ಈ ನಂಬಿಕೆಯನ್ನು ಯಾರ ಮೇಲೂ ಬಲವಂತವಾಗಿ ಹೇರಲಾಗಿಲ್ಲ. ಇಂತಹ ಸುಳ್ಳು ಸುದ್ದಿಗಳನ್ನು ಹರಡುತ್ತಿರುವಾಗ ನಾವು ಮೌನವಾಗಿರುವುದು ಹೇಗೆ?

ಸಿನಿಮಾ ವಿರುದ್ಧ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಾಗಿದೆ ಎಂದು ಸಿನಿಮಾ ನಿರ್ದೇಶಕ ದಿಲೀಪ್ ಶರ್ಮಾ ತಿಳಿಸಿದ್ದಾರೆ. ಆರರಿಂದ ಏಳು ದೂರುಗಳು ಬಂದಿದ್ದು, ಈ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದರು. ಪ್ರತಿಕ್ರಿಯೆಯ ಆಧಾರದ ಮೇಲೆ ನಾವು ಬದಲಾವಣೆಗಳನ್ನು ಸಂಯೋಜಿಸುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT