ಹೈಕೋರ್ಟ್ 
ರಾಜ್ಯ

ಭಯೋತ್ಪಾದನೆ ಚಟುವಟಿಕೆ ಆರೋಪ: ಪಾಕ್ ಪ್ರಜೆ ಸೇರಿದಂತೆ ಮೂವರ ಖುಲಾಸೆ

ಬೆಂಗಳೂರಿನ ನಿವಾಸಿಗಳಾದ ಸೈಯದ್ ಅಬ್ದುಲ್ ರೆಹಮಾನ್ , ಅಫ್ಸರ್ ಪಾಷಾ ಅಲಿಯಾಸ್ ಖುಶಿರುದ್ದೀನ್ ಮತ್ತು ಪಾಕಿಸ್ತಾನದ ಪ್ರಜೆ ಮೊಹಮ್ಮದ್ ಫಹಾದ್ ಹಿ ಅಲಿಯಾಸ್ ಮೊಹಮ್ಮದ್ ಕೋಯಾ ಖುಲಾಸೆಗೊಂಡವರು.

ಬೆಂಗಳೂರು: ಆಗಿನ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೀಡಿದ ಸಾಕ್ಷ್ಯದ ಆಧಾರದ ಮೇಲೆ ಹೈಕೋರ್ಟ್ ಪಾಕಿಸ್ತಾನದ ಪ್ರಜೆ ಸೇರಿದಂತೆ ಮೂವರು ಆರೋಪಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಭಯೋತ್ಪಾದನಾ ಚಟುವಟಿಕೆಗಳ ಆರೋಪಗಳಿಂದ ಖುಲಾಸೆಗೊಳಿಸಿದೆ.

ಆರೋಪಿಗಳ ವಿರುದ್ಧದ ಅಪರಾಧ ಕುರಿತು ಎನ್ಐಎ ಪ್ರಕರಣಗಳ ವಿಶೇಷ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ದೂರು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಮಂಜೂರಾತಿ ಆದೇಶವನ್ನು ಜಾರಿಗೊಳಿಸಿದಾಗ ಪರಿಶೀಲನಾ ಸಮಿತಿ ಇದೆಯೋ ಇಲ್ಲವೋ ಎಂದು ನನಗೆ ನೆನಪಿಲ್ಲ ಎಂದು ಅಂದಿನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ.

ಮರು ಪರಿಶೀಲನಾ ಸಂದರ್ಭದಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಔರಾದ್ಕರ್ ನೀಡಿದ್ದ ಸಾಕ್ಷ್ಯವನ್ನು ಉಲ್ಲೇಖಿಸಿದ ಹೈಕೋರ್ಟ್, ಮಂಜೂರಾತಿ ಆದೇಶ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತದೆ. ವಿಶೇಷ ನ್ಯಾಯಾಲಯ ಈ ಅಂಶವನ್ನು ಪರಿಗಣಿಸಿಲ್ಲ ಆದ್ದರಿಂದ, ಯುಎಪಿಎಯ ಸೆಕ್ಷನ್ 13, 17, 18 ಮತ್ತು 18 ಬಿ ಅಡಿಯಲ್ಲಿ ಎಲ್ಲಾ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು. ಗುಲ್ಬರ್ಗಾ ಜೈಲಿನಿಂದ ಬಿಡುಗಡೆಯಾದ ನಂತರ ಪಾಕಿಸ್ತಾನ ಪ್ರಜೆಯನ್ನು ಗಡಿಪಾರು ಮಾಡಲು ಆದೇಶವನ್ನು ಹೊರಡಿಸಿತು.

ಬೆಂಗಳೂರಿನ ನಿವಾಸಿಗಳಾದ ಸೈಯದ್ ಅಬ್ದುಲ್ ರೆಹಮಾನ್ , ಅಫ್ಸರ್ ಪಾಷಾ ಅಲಿಯಾಸ್ ಖುಶಿರುದ್ದೀನ್ ಮತ್ತು ಪಾಕಿಸ್ತಾನದ ಪ್ರಜೆ ಮೊಹಮ್ಮದ್ ಫಹಾದ್ ಹಿ ಅಲಿಯಾಸ್ ಮೊಹಮ್ಮದ್ ಕೋಯಾ ಖುಲಾಸೆಗೊಂಡವರು.

ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಜೆ ಎಂ ಖಾಜಿ ಅವರಿದ್ದ ವಿಭಾಗೀಯ ಪೀಠ ಫೆಬ್ರುವರಿ 23, 2023 ಮತ್ತು ಮಾರ್ಚ್ 3, 2023 ರಂದು ನೀಡಿದ್ದ ಶಿಕ್ಷೆಯ ಆದೇಶಗಳನ್ನು ಮಾರ್ಪಡಿಸುವ ಮೂಲಕ ಖುಲಾಸೆ ಆದೇಶವನ್ನು ನೀಡಿತು.

ರಿವಾಲ್ವರ್ ಹೊಂದಿದ್ದಕ್ಕಾಗಿ ಸಿಸಿಬಿ ಪೊಲೀಸರು 2012ರ ಮೇ 7ರಂದು ರೆಹಮಾನ್ ಅವರನ್ನು ಬಂಧಿಸಿದ್ದರು. ಅವರು ಜೈಲಿನಲ್ಲಿದ್ದಾಗ ಫಹಾದ್ ಮತ್ತು ಅಫ್ಸರ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

SCROLL FOR NEXT