ಕಟ್ಟಡ ಕುಸಿತ 
ರಾಜ್ಯ

ಬಾಬುಸಾಬ್ ಪಾಳ್ಯ ಕಟ್ಟಡ ಕುಸಿತ ಪ್ರಕರಣ: BBMP AEE ಅಮಾನತು; 3 ನೊಟೀಸ್ ನೀಡಿದ್ದರೂ ಮಾಲೀಕನ ನಿರ್ಲಕ್ಷ್ಯ!

ಲಭ್ಯವಿರುವ ದಾಖಲೆಗಳ ಪ್ರಕಾರ, BBMP ಕಾಯಿದೆ, 2020 ರ ಸೆಕ್ಷನ್ 313 ರ ಅಡಿಯಲ್ಲಿ ಮೊದಲ ನೋಟೀಸ್ ಅನ್ನು 24 ಏಪ್ರಿಲ್ 2024 ರಂದು ಮಾಲೀಕ ಮುನಿರಾಜ್ ರೆಡ್ಡಿ ಅವರಿಗೆ ನೀಡಲಾಯಿತು.

ಬೆಂಗಳೂರು: ಮಂಗಳವಾರ ಬಾಬುಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ಕಟ್ಟಡ ಕುಸಿದು ಎಂಟು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಒಂದು ದಿನದ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಲೀಕರಿಗೆ ಮೂರು ಬಾರಿ ನೋಟಿಸ್ ಜಾರಿಗೊಳಿಸಿ ಅವರು ಅನಧಿಕೃತ ಮಹಡಿಗಳನ್ನು ತೆಗೆದುಹಾಕಲು ನಿರ್ದೇಶನ ನೀಡಿರುವುದು ಬೆಳಕಿಗೆ ಬಂದಿದೆ. .

ದುರಂತದ ಹಿನ್ನೆಲೆಯಲ್ಲಿ, ನಗರಾಡಳಿತ ಮತ್ತು ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶವನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನಯ್ ಅವರನ್ನು ಅಮಾನತುಗೊಳಿಸಲಾಗಿದೆ. ಬಾಬುಸಾ ಪಾಳ್ಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆ. ವಿನಯ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಲಭ್ಯವಿರುವ ದಾಖಲೆಗಳ ಪ್ರಕಾರ, BBMP ಕಾಯಿದೆ, 2020 ರ ಸೆಕ್ಷನ್ 313 ರ ಅಡಿಯಲ್ಲಿ ಮೊದಲ ನೋಟೀಸ್ ಅನ್ನು 24 ಏಪ್ರಿಲ್ 2024 ರಂದು ಮಾಲೀಕ ಮುನಿರಾಜ್ ರೆಡ್ಡಿ ಅವರಿಗೆ ನೀಡಲಾಯಿತು, ಅವರು 2,400- ರಂದು ಭೂ ಮಾಲೀಕತ್ವದ ದಾಖಲೆಗಳು ಮತ್ತು ನಿರ್ಮಾಣದ ವಿವರಗಳನ್ನು ಸಲ್ಲಿಸಲು ಏಳು ದಿನಗಳ ಗಡುವು ನೀಡಲಾಗಿತ್ತು.

ಇದಾದ ನಂತರ 13ನೇ ಸೆಪ್ಟೆಂಬರ್ 2024 ರಂದು BBMP ಕಾಯಿದೆ, 2020 ರ ಸೆಕ್ಷನ್ 248(1) ರ ಅಡಿಯಲ್ಲಿ ಎರಡನೇ ನೋಟೀಸ್ ನೀಡಲಾಯಿತು, ಅನಧಿಕೃತ ಮಹಡಿಗಳಂತಹ ಉಲ್ಲಂಘನೆಗಳನ್ನು ದೃಢಪಡಿಸಿತು ಮತ್ತು ಅವುಗಳನ್ನು ತೆಗೆದುಹಾಕಲು ಮಾಲೀಕರಿಗೆ ನಿರ್ದೇಶಿಸಿತು. ಆ ಸಮಯದಲ್ಲಿ, ವಿವಾದಾತ್ಮಕ ಕಟ್ಟಡವು ಐದು ಮಹಡಿಗಳನ್ನು ಹೊಂದಿತ್ತು.

ಮತ್ತೊಮ್ಮೆ, ಸೆಪ್ಟೆಂಬರ್ 21 ರಂದು, ಬಿಬಿಎಂಪಿ ಕಾಯಿದೆ, 2020 ರ ಸೆಕ್ಷನ್ 248 (3) ರ ಅಡಿಯಲ್ಲಿ ಮೂರನೇ ನೋಟೀಸ್ ನೀಡಲಾಯಿತು, ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವಂತೆ ಮಾಲೀಕ ರೆಡ್ಡಿಗೆ ತಿಳಿಸಲಾಯಿತು. ಆದರೆ, ಮಾಲೀಕ ಮುನಿರಾಜು ರೆಡ್ಡಿ ಆದೇಶವನ್ನು ನಿರ್ಲಕ್ಷಿಸಿದ್ದು ಮಾತ್ರವಲ್ಲದೆ ಮತ್ತೊಂದು ಮಹಡಿಯನ್ನು ಸೇರಿಸಿದ್ದಾನೆ. ಈ ಉಲ್ಲಂಘನೆಗಳ ಹೊರತಾಗಿಯೂ, ಬಿಬಿಎಂಪಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಮತ್ತು ಕೇವಲ ನೋಟಿಸ್‌ಗಳನ್ನು ನೀಡಿದರು, ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಆರೋಪಿಸಲಾಗಿದೆ,

ನಿಯಮಾವಳಿಗಳ ಪ್ರಕಾರ, ಮಾಲೀಕರು ಅನುಸರಿಸಲು ವಿಫಲವಾದರೆ, BBMP ಕಾಯಿದೆ, 2020 ರ ಸೆಕ್ಷನ್ 356 ರ ಅಡಿಯಲ್ಲಿ BBMP ಡೆಮಾಲಿಷನ್ ನೋಟಿಸ್ ನೀಡಬೇಕಾಗುತ್ತದೆ. ಮೊದಲ ನೋಟೀಸ್ ನೀಡುವುದರಿಂದ ಹಿಡಿದು ಕೆಡವಲು ಆರಂಭಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು 117 ದಿನಗಳಲ್ಲಿ ಪೂರ್ಣಗೊಳಿಸಬೇಕು. ಆದರೆ, ಬಿಬಿಎಂಪಿ ವಿಳಂಬ ಮಾಡಿದ್ದರಿಂದ ದಾರುಣ ಘಟನೆ ನಡೆದಿದೆ ಎಂದು ಹೊರಮಾವು ನಿವಾಸಿಗಳು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT