ಸಿಎಂ ಸಿದ್ದರಾಮಯ್ಯ ಫೋಸ್ಟರ್ 
ರಾಜ್ಯ

ಉದ್ಯೋಗಾವಕಾಶ, ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್‌ 1: ಸಿಎಂ ಸಿದ್ದರಾಮಯ್ಯ ಹೇಳಿದ್ದು ಹೀಗೆ...

ಚೆನ್ನೈ ಮತ್ತು ದೆಹಲಿ ನಂತರದ ಸ್ಥಾನದಲ್ಲಿದ್ದು ಕ್ರಮವಾಗಿ ಶೇ. 7.5 ಹಾಗೂ ಶೇ.7.3ರಷ್ಟು ಸರಾಸರಿ ವೇತನ ಹೆಚ್ಚಳ ಹೊಂದಿದೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.

ಬೆಂಗಳೂರು: ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್‌ 01 ಸ್ಥಾನಕ್ಕೇರಿದೆ. ಹೌದು. ಟೀಮ್‌ ಲೀಸ್‌ ಸರ್ವೀಸಸ್‌ನ ಉದ್ಯೋಗ ಮತ್ತು ವೇತನ ವರದಿ 2024 ರಲ್ಲಿ ತಂತ್ರಜ್ಞಾನ ಮತ್ತು ಬ್ಯುಸಿನೆಸ್ ಹಬ್ ಆಗಿರುವ ಬೆಂಗಳೂರಿನ ಸರಾಸರಿ ವೇತನ ಹೆಚ್ಚಳ ಶೇ. 9.3 ಹಾಗೂ ಸರಾಸರಿ ಏಕೀಕೃತ ಮಾಸಿಕ ಸಂಬಳ ರೂ.29,500 ಇದ್ದು, ಇದು ಇತರೆ ಎಲ್ಲಾ ನಗರಗಳಿಗಿಂತ ಗರಿಷ್ಠ ಮಟ್ಟದಲ್ಲಿದೆ. ಚೆನ್ನೈ ಹಾಗೂ ದೆಹಲಿ ನಂತರದ ಸ್ಥಾನ ಪಡೆದುಕೊಂಡಿವೆ.

ಈ ವರದಿಯು ತಾತ್ಕಾಲಿಕ ಮತ್ತು ಖಾಯಂ ನೇಮಕಾತಿ ಮಾರುಕಟ್ಟೆಗಳಾದ್ಯಂತ ಏಕೀಕೃತ ವೇತನಗಳ ವಿಶ್ಲೇಷಣೆಯನ್ನು ಆಧರಿಸಿದೆ. ಚೆನ್ನೈ ಮತ್ತು ದೆಹಲಿ ನಂತರದ ಸ್ಥಾನದಲ್ಲಿದ್ದು ಕ್ರಮವಾಗಿ ಶೇ. 7.5 ಹಾಗೂ ಶೇ.7.3ರಷ್ಟು ಸರಾಸರಿ ವೇತನ ಹೆಚ್ಚಳ ಹೊಂದಿದೆ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆಯ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ ಎಂದು ವರದಿ ಹೇಳಿದೆ.

ಚೆನ್ನೈನ ಸರಾಸರಿ ಮಾಸಿಕ ವೇತನವು ರೂ 24,500 ರಷ್ಟಿದ್ದರೆ ದೆಹಲಿಯಲ್ಲಿ ಇದು ರೂ 27,800 ತಲುಪಿದೆ. ಈ ಮಧ್ಯೆ ಕೈಗಾರಿಕಾ ರಂಗದಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ಗಮನಾರ್ಹವಾದ ಶೇ. 8.4 ರಷ್ಟು ವೇತನ ಹೆಚ್ಚಳವಿದೆ. ವರದಿಯು ನಗರಗಳು ಮತ್ತು ಕೈಗಾರಿಕೆಗಳಾದ್ಯಂತ ಗಮನಾರ್ಹ ವೇತನ ಹೆಚ್ಚಳ ಬೆಳವಣಿಗೆಯೊಂದಿಗೆ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಹಾದಿಯನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರಿನ ಶೇಕಡಾ 9.3 ರಷ್ಟು ವೇತನ ಬೆಳವಣಿಗೆ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ. 8.4 ಹೆಚ್ಚಳವು ವಿಶೇಷ ಕೌಶಲ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸೂಚಿಸುತ್ತದೆ. ಇದು ಕೇವಲ ಹೆಚ್ಚುತ್ತಿರುವ ಸಂಬಳದ ಬೆಳವಣಿಗೆಯ ಬಗ್ಗೆ ಅಲ್ಲ. ಇದು ಉದ್ಯೋಗ ಮಾರುಕಟ್ಟೆಯಲ್ಲಿ ಆಗುತ್ತಿರುವ ಪರಿವರ್ತನೆಯಾಗಿದೆ ಎಂದು ಟೀಮ್ ಲೀಸ್ ಸಿಇಒ-ಕಾರ್ತಿಕ್ ನಾರಾಯಣ್ ಹೇಳಿದ್ದಾರೆ.

ಗ್ರಾಹಕ ಬೆಲೆಬಾಳುವ ವಸ್ತುಗಳು ಮತ್ತು ನಿರ್ಮಾಣ ಮತ್ತು ರಿಯಲ್ ಎಸ್ಟೇಟ್‌ನಂತಹ ಕ್ಷೇತ್ರಗಳಲ್ಲಿ ಕಾಯಂ ಮತ್ತು ತಾತ್ಕಾಲಿಕ ನೇಮಕಾತಿಯ ವೇತನದ ಅಂತರವು ಕಂಪನಿಗಳು ಪ್ರತಿಭೆ ಮತ್ತು ದೀರ್ಘಾವಧಿಯ ಧಾರಣೆಯ ಮೇಲೆ ಕೇಂದ್ರೀಕರಿಸಿರುವುದನ್ನು ತೋರಿಸುತ್ತದೆ. ಈ ಪ್ರವೃತ್ತಿಗಳು ಭಾರತದಲ್ಲಿ ಕೆಲಸದ ಭವಿಷ್ಯವನ್ನು ರೂಪಿಸುವಲ್ಲಿ ಹೊಂದಿಕೊಳ್ಳುವಿಕೆ ಮತ್ತು ಪರಿಣತಿಯ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತವೆ ಎಂದು ನಾರಾಯಣ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತದ ಇನ್ನೊಂದು ಮೈಲುಗಲ್ಲು. ರಾಜ್ಯವನ್ನು ಬಂಡವಾಳ ಹೂಡಿಕೆಯ ಪ್ರಶಸ್ತ ತಾಣವಾಗಿಸಿದ ನಮ್ಮ ಸರ್ಕಾರದ ಪ್ರಯತ್ನಗಳು ಹಾಗೂ ಯುವ ಜನರಿಗೆ ಕೈಗಾರಿಕೆಗಳು ಮತ್ತು ಉದ್ದಿಮೆಗಳಲ್ಲಿ ಬೇಡಿಕೆಯಿರುವ ಕೌಶಲ್ಯಾಧಾರಿತ ತರಬೇತಿ ನೀಡುತ್ತಿರುವುದರ ಪರಿಣಾಮ ಉದ್ಯೋಗಾವಕಾಶ ಮತ್ತು ವೇತನ ವೃದ್ಧಿಯಲ್ಲಿ ಬೆಂಗಳೂರು ದೇಶದಲ್ಲೇ ನಂಬರ್‌ 01 ಸ್ಥಾನಕ್ಕೇರಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT