ಅತಿಕ್ರಮಣಗೊಂಡಿರುವ ಬೆಂಗಳೂರಿನ ಒಂದು ಕೆರೆ  
ರಾಜ್ಯ

ಬೆಂಗಳೂರಿನಲ್ಲಿ ಕೆರೆಗಳು ಅತಿಕ್ರಮಣಗೊಂಡು ಕಲುಷಿತವಾಗಿವೆ: BLIS ಪೋರ್ಟಲ್ ವರದಿ

ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಅಗರ ಕೆರೆ ಕೂಡ ಒಂದು. ದಾಖಲೆಗಳ ಪ್ರಕಾರ ಅಗರ ಕೆರೆಯು 142.73 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಆದರೆ ವಾಸ್ತವದಲ್ಲಿ ಅತಿಕ್ರಮಣದಿಂದಾಗಿ ಕೆರೆಯ ವಿಸ್ತೀರ್ಣ ಈಗ 36.43 ಎಕರೆಗೆ ಕುಗ್ಗಿ ಹೋಗಿದೆ.

ಬೆಂಗಳೂರು: ಯೋಜನೆರಹಿತ ಲೇ ಔಟ್ ಗಳ ನಿರ್ಮಾಣ, ರಾಜಕಾಲುವೆ ಒತ್ತುವರಿ, ಅಕ್ರಮ ಭೂಕಬಳಿಕೆ ಯಿಂದ ಬೆಂಗಳೂರಿನಲ್ಲಿ ಅನೇಕ ಕೆರೆಗಳು ಮಾಯವಾಗಿವೆ ಎಂಬ ಕೂಗು ಕೇಳಿಬರುತ್ತಿದೆ, ಮಳೆ ಬಂದಾಗ ಪ್ರವಾಹ ಉಂಟಾಗುವ ಸಮಸ್ಯೆ ಬೆಂಗಳೂರಿಗರನ್ನು ಕಾಡುತ್ತಿದೆ.

ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಅಗರ ಕೆರೆ ಕೂಡ ಒಂದು. ದಾಖಲೆಗಳ ಪ್ರಕಾರ ಅಗರ ಕೆರೆಯು 142.73 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಆದರೆ ವಾಸ್ತವದಲ್ಲಿ ಅತಿಕ್ರಮಣದಿಂದಾಗಿ ಕೆರೆಯ ವಿಸ್ತೀರ್ಣ ಈಗ 36.43 ಎಕರೆಗೆ ಕುಗ್ಗಿ ಹೋಗಿದೆ.

ಬಫರ್‌ ಜೋನ್ ಮತ್ತು ಕೆರೆಯ ಗಡಿಯಲ್ಲಿಯೂ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಷ್ಟೇ ಅಲ್ಲ, ಆಗ್ನೇಯ ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ ಕಣಿವೆಯಲ್ಲಿರುವ ಕೆರೆಗೆ ಸಂಸ್ಕರಿಸದ ಕೊಳಚೆ ನೀರು ಹರಿಯುತ್ತಲೇ ಇದೆ, ಕೆರೆಯ ದೊಡ್ಡ ಪ್ರದೇಶವು ಮ್ಯಾಕ್ರೋಫೈಟ್‌ ಸಸ್ಯಗಳಿಂದ ತುಂಬಿಹೋಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳ ಪ್ರಕಾರ ಸರೋವರ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ವಹಿಸಲ್ಪಡುವ ಜಲಮೂಲವು ಇ ವರ್ಗದ ಅಡಿಯಲ್ಲಿ ಬರುತ್ತದೆ, ಅಂದರೆ ಅದರ ನೀರು ಬಳಕೆಗೆ ಯೋಗ್ಯವಾಗಿಲ್ಲ. ಇದನ್ನು ನೀರಾವರಿ, ಕೈಗಾರಿಕೆ ಮತ್ತು ನಿಯಂತ್ರಿತ ನೀರಿನ ವಿಲೇವಾರಿಗಾಗಿ ಮಾತ್ರ ಬಳಸಬಹುದು. ನಗರದಲ್ಲಿ ಅತಿಕ್ರಮಣಗೊಂಡಿರುವುದು ಇದೊಂದೇ ಕೆರೆಯಲ್ಲ. ಹಲಸೂರು ಕೆರೆ ಮತ್ತು ಸ್ಯಾಂಕಿ ಟ್ಯಾಂಕಿನಲ್ಲೂ ಇದೇ ರೀತಿಯಾಗಿದೆ.

ಎನರ್ಜಿ ಮತ್ತು ವೆಟ್‌ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಸೆಂಟರ್ ಫಾರ್ ಎಕೊಲಾಜಿಕಲ್ ಸೈನ್ಸಸ್, ಐಐಎಸ್ಸಿಯ ಸಂಶೋಧಕರು ರಚಿಸಿದ ಬೆಂಗಳೂರು ಕೆರೆ ಮಾಹಿತಿ ವ್ಯವಸ್ಥೆ (BLIS) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಕೆಲವು ಸಂಶೋಧನೆಗಳು ಇವಾಗಿದೆ. ನಾಲ್ಕು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಪೋರ್ಟಲ್ ನ್ನು ಪ್ರಾರಂಭಿಸಲಾಯಿತು. ಅಂದಿನಿಂದ 2,728 ನಾಗರಿಕರು ವೆಬ್‌ಸೈಟ್ ವೀಕ್ಷಿಸಿ ಡೌನ್‌ಲೋಡ್ ಮಾಡಿದ್ದಾರೆ ಮತ್ತು ಅಂಕಿಅಂಶ ಬಳಸಿದ್ದಾರೆ.

ಆದರೆ ಅವುಗಳಲ್ಲಿ ಯಾವುದೂ ಸರ್ಕಾರಿ ಸಂಸ್ಥೆಗಳು ಅಥವಾ ಅಧಿಕಾರಿಗಳಲ್ಲ. ಇದು ಜನವರಿ 22, 2024 ರಂದು ಪ್ರಾರಂಭವಾದ ಬೆಂಗಳೂರು ಅರ್ಬನ್ ಇನ್ಫರ್ಮೇಷನ್ ಸಿಸ್ಟಮ್ ಪೋರ್ಟಲ್ ನ್ನು ಹೋಲುತ್ತದೆ. ಬಿಎಲ್ ಐಎಸ್ ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳನ್ನು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಮತ್ತು ಸರ್ಕಾರಿ ಮೂಲ ನಕ್ಷೆಗಳನ್ನು ಬಳಸಿಕೊಂಡು ವ್ಯಾಪಕವಾದ ಕ್ಷೇತ್ರ ಸಂಶೋಧನೆಯಿಂದ ಸಂಗ್ರಹಿಸಲಾಗಿದೆ ಎಂದು ಐಐಎಸ್ಸಿಯ ಪ್ರೊ.ಟಿ.ವಿ.ರಾಮಚಂದ್ರ ಹೇಳುತ್ತಾರೆ.

ವರದಿ -- ಸುಸ್ಥಿರ ನಿರ್ವಹಣೆಗಾಗಿ ಬೆಂಗಳೂರು ಲೇಕ್ಸ್ ಮಾಹಿತಿ ವ್ಯವಸ್ಥೆ (BLIS), ಜರ್ನಲ್ ಆಗಿ ಪ್ರಕಟಿಸಲಾಗಿದೆ. ಸಂಶೋಧಕರು 2013 ರಿಂದ ನಗರದಲ್ಲಿ 175 ಕೆರೆಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ಅವುಗಳಲ್ಲಿ ಶೇಕಡಾ 92ರಷ್ಟು ಅತಿಕ್ರಮಿಸಲಾಗಿದೆ. ಪೋರ್ಟಲ್ 2023 ರವರೆಗೆ ಬೆಂಗಳೂರಿನ ಹೆಬ್ಬಾಳ-ನಾಗವಾರ, ಕೋರಮಂಗಲ-ಚಲ್ಲಘಟ್ಟ ಮತ್ತು ವೃಷಭಾವತಿ ಜಲಾನಯನ ಪ್ರದೇಶಗಳಲ್ಲಿನ ಕೆರೆಗಳ ಬಗ್ಗೆ ಮಾಹಿತಿಯನ್ನು ಭೌಗೋಳಿಕವಾಗಿ ಒದಗಿಸುತ್ತದೆ.

ನೀರಿನ ಗುಣಮಟ್ಟ, ಜೀವವೈವಿಧ್ಯ (ಮೈಕ್ರೋಅಲ್ಗೇ, ಝೂಪ್ಲ್ಯಾಂಕ್ಟನ್, ಇಚ್ಥಿಯೋಫೌನಾ, ಮ್ಯಾಕ್ರೋಫೈಟ್ಸ್ ಮತ್ತು ಪಕ್ಷಿಗಳು), ಅತಿಕ್ರಮಣಗಳು, ಸಂಸ್ಕರಿಸದ ಒಳಚರಂಡಿ ಒಳಹರಿವು ಇತ್ಯಾದಿ ಮತ್ತು ಬೆಂಗಳೂರಿನ ಕೆರೆಗಳ ಪರಿಸರ ವ್ಯವಸ್ಥೆಯ ಸೇವೆಗಳ ಮಾಹಿತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಬೃಹತ್ ಬೆಂಗಳೂರು ವ್ಯಾಪ್ತಿಯಲ್ಲಿ ಜಲಮೂಲಗಳ ವಿವೇಕಯುತ ನಿರ್ವಹಣೆಗೆ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಲು ನಿರ್ಣಾಯಕವಾಗಿದೆ ಎಂದು ಪ್ರೊ.ಟಿ.ವಿ.ರಾಮಚಂದ್ರ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT