ಸಿಎಂ ಸಿದ್ದರಾಮಯ್ಯ online desk
ರಾಜ್ಯ

ವಾಣಿಜ್ಯ ತೆರಿಗೆ ವಸೂಲಿ ಮಾಡಲು ವಿಫಲರಾದರೆ ಅಧಿಕಾರಿಗಳೇ ಹೊಣೆ: ಸಿಎಂ ಸಿದ್ದರಾಮಯ್ಯ

ವಾಣಿಜ್ಯ ತೆರಿಗೆ ಸಂಗ್ರಹದ ಪ್ರಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿರುವ ಸಿಎಂ, ಯಾವುದೇ ಸಂದರ್ಭದಲ್ಲೂ ಕಡಿಮೆ ಆಗಬಾರದು ಎಂದು ಒತ್ತಿ ಹೇಳಿದರು.

ನವದೆಹಲಿ: ವಾಣಿಜ್ಯ ತೆರಿಗೆ ಸಂಗ್ರಹ ಗುರಿಯನ್ನು ತಲುಪುವಲ್ಲಿ ವಿಫಲರಾದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ವಾಣಿಜ್ಯ ತೆರಿಗೆ ಸಂಗ್ರಹದ ಪ್ರಗತಿ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿರುವ ಸಿಎಂ, ಯಾವುದೇ ಸಂದರ್ಭದಲ್ಲೂ ಕಡಿಮೆ ಆಗಬಾರದು ಎಂದು ಒತ್ತಿ ಹೇಳಿದರು.

ರಾಜ್ಯ 2024-25ಕ್ಕೆ 1,10,000 ಕೋಟಿ ರೂ.ಗಳ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಜಿಎಸ್‌ಟಿ 44,783 ಕೋಟಿ ರೂ, ಕರ್ನಾಟಕ ಮಾರಾಟ ತೆರಿಗೆ 13,193 ಕೋಟಿ ರೂ. ಮತ್ತು ವೃತ್ತಿಪರ ತೆರಿಗೆ 797 ಕೋಟಿ ರೂ.ಗಳನ್ನು ಒಳಗೊಂಡಂತೆ ಒಟ್ಟು 58,773 ಕೋಟಿ ರೂ ತೆರಿಗೆ ಸಂಗ್ರಹ ಮಾಡಲಾಗಿದೆ.

ರಾಜ್ಯದ ಅಭಿವೃದ್ಧಿಗೆ ಗುರಿ ಸಾಧಿಸುವುದು ಅತ್ಯಗತ್ಯ’ ಎಂದ ಸಿದ್ದರಾಮಯ್ಯ, ಸಮನ್ವಯದ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ರಾಜ್ಯವು ಈವರೆಗೆ ಶೇ.53.5 ಗುರಿ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ 5,957 ಕೋಟಿ ರೂ.ಗಳ ಸಂಗ್ರಹ ಹೆಚ್ಚಿದ್ದು, ಮಾರ್ಚ್‌ ವೇಳೆಗೆ ವಾರ್ಷಿಕ ಗುರಿ ತಲುಪಲು ಮುಂದಿನ 5 ತಿಂಗಳಲ್ಲಿ ತಿಂಗಳಿಗೆ 10,200 ಕೋಟಿ ಸಂಗ್ರಹಿಸಬೇಕಿದೆ.

‘ರಾಜ್ಯದ ಅಭಿವೃದ್ಧಿಗೆ ಗುರಿ ಸಾಧಿಸುವುದು ಅತ್ಯಗತ್ಯ’ ಎಂದ ಸಿದ್ದರಾಮಯ್ಯ, ಸಮನ್ವಯದ ಪ್ರಯತ್ನದ ಅಗತ್ಯವನ್ನು ಒತ್ತಿ ಹೇಳಿದರು.

ಮಾಸಿಕ ಪರಿಶೀಲನೆ ನಡೆಸುವುದಾಗಿ ಘೋಷಿಸಿದ ಸಿಎಂ, ಯಾವುದೇ ಅಧಿಕಾರಿ ಗುರಿ ತಲುಪದಿದ್ದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪುನರುಚ್ಚರಿಸಿದರು.

ಕರಸಮಾಧಾನ ಯೋಜನೆಯಿಂದ ಹೆಚ್ಚುವರಿಯಾಗಿ 2,000 ಕೋಟಿ ರೂಪಾಯಿ ಆದಾಯ ಬರುವ ನಿರೀಕ್ಷೆ ಇದೆ ಎಂದು ಸಿಎಂ ಇದೇ ವೇಳೆ ತಿಳಿಸಿದರು.

ನಂತರ ಅಬಕಾರಿ ಇಲಾಖೆಯ ತೆರಿಗೆ ಸಂಗ್ರಹವನ್ನು ಪರಿಶೀಲಿಸಿದ ಸಿದ್ದರಾಮಯ್ಯ, ಗೋವಾದಿಂದ ಅಕ್ರಮ ಮದ್ಯ ಸಾಗಾಟ ತಡೆಯಲು ಹಾಗೂ ಮಾರ್ಚ್‌ನ ಗುರಿ ತಲುಪಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಇಲಾಖೆಗೆ ಸೂಚನೆ ನೀಡಿದರು.

2024-25ರಲ್ಲಿ ಅಬಕಾರಿ ತೆರಿಗೆ ಸಂಗ್ರಹ ಗುರಿ 38,525 ಕೋಟಿ ರೂಪಾಯಿಗಳಾಗಿವೆ. ಅಕ್ಟೋಬರ್ 28 ರವರೆಗೆ ಇಲಾಖೆ 20,237 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಗುರಿಯ ಶೇ.52.53 ರಷ್ಟು ಸಾಧನೆ ಮಾಡಿದೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಸಂಗ್ರಹಣೆಗಳು Rs1,301.15 ಕೋಟಿ ಹೆಚ್ಚಾಗಿದೆ ಎಂದು ಸಿಎಂಒ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು, ಬಿಹಾರದಲ್ಲಿ ಹೈ ಅಲರ್ಟ್

AEE ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ HDK ಸಾಲು ಸಾಲು ಪ್ರಶ್ನೆ; ಇದೇನಾ 'ದೇಶವೇ ಅಲ್ಲೋಲ ಕಲ್ಲೋಲ ಆಗೋ' ವಿಷಯ? Video

'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು': ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

'ರಾಯನ ದೊಡ್ಡ ಶತ್ರು ಟಿಕೆಟ್ ಅಲ್ಲ'.. ‘Toxic’ ಕೇವಲ ಸಿನಿಮಾ ಅಲ್ಲ…'; ನಟ ಯಶ್ ಚಿತ್ರದ ಕುರಿತು ನಟಿ Deepika Das ಪೋಸ್ಟ್ ವೈರಲ್!