ಬಟ್ಟೆ ಸ್ಟ್ರೆಚರ್ ನಲ್ಲಿ ಯುವಕನ ಶವ ಸಾಗಣೆ 
ರಾಜ್ಯ

ಚಿಕ್ಕಮಗಳೂರು: ಗಿರಿಜನ ಸಮುದಾಯಕ್ಕೆ ಸಿಗದ ಮೂಲ ಸೌಕರ್ಯ; ಬಟ್ಟೆ ಸ್ಟ್ರೆಚರ್ ನಲ್ಲಿ ಯುವಕನ ಶವ ಸಾಗಣೆ

ಬಟ್ಟೆ ಸ್ಟ್ರೆಚರ್‌ನಲ್ಲಿ ಶವ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮೃತಪಟ್ಟ ಪರಿಶಿಷ್ಟ ಜಾತಿಗೆ ಸೇರಿದ ಅವಿನಾಶ್ ತೀವ್ರ ಅಸ್ವಸ್ಥರಾಗಿದ್ದರು.

ಚಿಕ್ಕಮಗಳೂರು: ಸೂಕ್ತ ರಸ್ತೆ, ಆಸ್ರತ್ರೆ ಮುಂತಾದ ಮೂಲ ಸೌಲಭ್ಯಗಳಿಲ್ಲದ ಕಾರಣ 19 ವರ್ಷದ ಯುವಕನ ಶವವನ್ನು ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನೆಗೋಡು ಗ್ರಾಮಕ್ಕೆ ತಾತ್ಕಾಲಿಕ ಬಟ್ಟೆಯ ಸ್ಟ್ರೆಚರ್‌ನಲ್ಲಿ ಗ್ರಾಮಸ್ಥರು ಹೊತ್ತುಕೊಂಡು ಹೋಗಿದ್ದಾರೆ.

ಬಟ್ಟೆ ಸ್ಟ್ರೆಚರ್‌ನಲ್ಲಿ ಶವ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಮೃತಪಟ್ಟ ಪರಿಶಿಷ್ಟ ಜಾತಿಗೆ ಸೇರಿದ ಅವಿನಾಶ್ ತೀವ್ರ ಅಸ್ವಸ್ಥರಾಗಿದ್ದರು. ಎಂಟು ಬುಡಕಟ್ಟು ಕುಟುಂಬಗಳು ವಾಸಿಸುವ ಕುಗ್ರಾಮದ ಅವರ ಸಂಬಂಧಿಕರು ಅವರನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ರಸ್ತೆ ಮಾರ್ಗದವರೆಗೆ ಹೊತ್ತಕೊಂಡು ಹೋಗಿ, ನಂತರ ಅಲ್ಲಿಂದ ಕಳಸಾ ಪಟ್ಟಣದ ಆಸ್ಪತ್ರೆಗೆ ಸಾಗಿಸಿದರು.

ಶವವವನ್ನು ಸಾಗಿಸುವ ಸಮಯದಲ್ಲಿ, ಕಿರಿದಾದ ಕಾಲು ಸೇತುವೆಯನ್ನು ದಾಟಬೇಕಾಯಿತು, ಏಕೆಂದರೆ ಅವಿನಾಶ್ ಅನ್ನು ಹೊತ್ತೊಯ್ಯುವ ಮಾರ್ಗದಲ್ಲಿ ಸೂಕ್ತವಾದಿ ಸೇತುವೆಗಳೂ ಇಲ್ಲ. ಇಷ್ಟೆಲ್ಲಾ ಪ್ರಯತ್ನ ಪಟ್ಟು ಕರೆದಕೊಂಡು ಹೋದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವಿನಾಶ್ ಮೃತಪಟ್ಟಿದ್ದಾನೆ.

ಇದಾದ ನಂತರ ಈ ಆದಿವಾಸಿಗಳ ಪ್ರಯಾಣ ಮತ್ತಷ್ಟು ಪ್ರಯಾಸಕರವಾಗಿತ್ತು. ಅವಿನಾಶ್ ಅವರ ದೇಹವನ್ನು ಹೊತ್ತ ಆಂಬುಲೆನ್ಸ್ ಕೆಲದೂರದವರೆಗೆ ಮಾತ್ರ ಬಂದಿತು. ಸರಿಯಾದ ರಸ್ತೆ ಇಲ್ಲದ ಕಾರಣ ಶವವನ್ನು ಆ್ಯಂಬುಲೆನ್ಸ್ ನಿಂದ ಇಳಿಸಿದ ಅವರ ಸಂಬಂಧಿಕರು ಮತ್ತೆ ಹೊತ್ತು ತಮ್ಮ ಗ್ರಾಮಕ್ಕೆ ನಡೆದರು.

ಶವವನ್ನು ಬಟ್ಟೆಯ ಸ್ಟ್ರೆಚರ್‌ನಲ್ಲಿ ಇರಿಸಿ ಊರಿಗೆ ಸಾಗಿಸಲಾಯಿತು. ಅವರು ತಮ್ಮ ಕುಗ್ರಾಮವನ್ನು ತಲುಪುವ ಮೊದಲು ಕಿರಿದಾದ ದಾರಿಯ ಮೂಲಕ 2 ಕಿಲೋಮೀಟರ್ ನಡೆದುಕೊಂಡು ಹೋಗಬೇಕಾಗಿತ್ತು, ಅಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.

ಕೊನೆಗೋಡು ಗ್ರಾಮಸ್ಥರಿಗೆ, ಸಂಸೆ-ಎಸ್‌ಕೆ ಮೆಗಲ್ ರಸ್ತೆಯು ಹತ್ತಿರದ ಮೋಟಾರುರಸ್ತೆ ಮಾರ್ಗವಾಗಿದೆ, ಇದು ಅವರ ತಮ್ಮಗ್ರಾಮದಿಂದ 2 ಕಿ.ಮೀ. ನಡೆದುಕೊಂಡು ಹೋದರೆ ಈ ರಸ್ತೆ ತಲುಪಬಹುದಾಗಿದೆ. ಈ ನಡುವೆ ಮಳೆಗಾಲದಲ್ಲಿ ತುಂಬಿ ಹರಿಯುವ ಸಣ್ಣ ಹೊಳೆಗಳನ್ನು ದಾಟಬೇಕು. ತಮ್ಮ ಗ್ರಾಮವನ್ನು ಸಂಪರ್ಕಿಸಲು ಯಾವುದೇ ಗಟ್ಟಿಯಾದ ಸೇತುವೆಗಳಿಲ್ಲದ ಕಾರಣ ಈ ನದಿಗಳನ್ನು ದಾಟಲು ಅವರು ಕಾಲುದಾರಿಗಳನ್ನು ಮಾಡಿಕೊಳ್ಳಬೇಕಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT