ವಿಜಯನಗರದಲ್ಲಿನ ಪಾಲಿಕೆ ಬಜಾರ್ 
ರಾಜ್ಯ

ನಿರೀಕ್ಷೆ ಹುಸಿ? ಪಾಲಿಕೆ ಬಜಾರ್‌ಗೆ ತೆರಳಲು ಒಲವು ತೋರದ ಮಾರಾಟಗಾರರು!

ಬಿಬಿಎಂಪಿಯು ವಿಜಯನಗರ ಮೆಟ್ರೋ ನಿಲ್ದಾಣದ ಬಳಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭೂಗತ ಮಾರುಕಟ್ಟೆ ಪ್ರದೇಶದಲ್ಲಿ 79 ಮಳಿಗೆಗಳಿವೆ. 2017 ರಲ್ಲಿ ಪ್ರಾರಂಭವಾದ ಕಾಮಗಾರಿ 2024 ರಲ್ಲಿ ಪೂರ್ಣಗೊಂಡಿತು. ಇದನ್ನು ಆಗಸ್ಟ್ 25 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.

ಬೆಂಗಳೂರು: ಬಿಬಿಎಂಪಿ ವಿಜಯನಗರದಲ್ಲಿ ನಿರ್ಮಿಸಿರುವ ಮೊಟ್ಟಮೊದಲ ಹವಾನಿಯಂತ್ರಿತ ಭೂಗತ ಮಾರುಕಟ್ಟೆ ಪಾಲಿಕೆ ಬಜಾರ್‌ಗೆ ತೆರಳುವವರ ಸಂಖ್ಯೆ ಕಡಿಮೆಯಿದೆ.

ತಳ್ಳುವ ಗಾಡಿ, ತಾತ್ಕಾಲಿಕ ಶೆಡ್‌ ಮತ್ತು ರಸ್ತೆಯ ಪಕ್ಕದಲ್ಲಿ ಟೆಂಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾರಾಟಗಾರರು ವ್ಯಾಪಾರ ಕಳೆದುಕೊಳ್ಳುವ ಭಯದಿಂದ ಹವಾನಿಯಂತ್ರಿತ ಸ್ಥಳಕ್ಕೆ ತೆರಳಲು ಮನಸ್ಸಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ತಂಪಾದ ವಾತಾವರಣವನ್ನು ನಾಗರಿಕರು, ವಿಶೇಷವಾಗಿ ವಿದ್ಯಾರ್ಥಿಗಳು ಬಯಸುತ್ತಾರೆ.

ಬಿಬಿಎಂಪಿಯು ವಿಜಯನಗರ ಮೆಟ್ರೋ ನಿಲ್ದಾಣದ ಬಳಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭೂಗತ ಮಾರುಕಟ್ಟೆ ಪ್ರದೇಶದಲ್ಲಿ 79 ಮಳಿಗೆಗಳಿವೆ. 2017 ರಲ್ಲಿ ಪ್ರಾರಂಭವಾದ ಕಾಮಗಾರಿ 2024 ರಲ್ಲಿ ಪೂರ್ಣಗೊಂಡಿತು. ಇದನ್ನು ಆಗಸ್ಟ್ 25 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಆದರೆ ಇದುವರೆಗೆ ಕೇವಲ ಮೂರು ಮಾರಾಟಗಾರರು ಮಾತ್ರ ಅಲ್ಲಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ವ್ಯಾಪಾರ ಕುಸಿತದ ಕಾರಣದಿಂದ ಅವರು ಕೂಡಾ ಪಶ್ಚಾತ್ತಾಪ ಪಡುತ್ತಿದ್ದಾರೆ.

ಮತ್ತೆ ತಳ್ಳುಗಾಡಿ ವ್ಯಾಪಾರ ಮಾಡುತ್ತೇನೆ. ಹಬ್ಬ ಹರಿದಿನಗಳಲ್ಲಿ ನಷ್ಟ ಅನುಭವಿಸುವುದು ನನಗಿಷ್ಟವಿಲ್ಲ. ಕಟ್ಟಡ ಹವಾನಿಯಂತ್ರಿತವಾಗಿದೆ, ಆದರೆ ಟ್ಯೂಬ್ಲೈಟ್ ಹೊರತುಪಡಿಸಿ, ನಮಗೆ ನೀಡಿರುವ ಅಂಗಡಿಯಲ್ಲಿ ಬೇರೇನೂ ಇಲ್ಲ. ಬಜಾರ್ ಪ್ರಾರಂಭವಾದ ಒಂದು ವಾರದೊಳಗೆ ಗೋಡೆಗಳಲ್ಲಿ ನೀರು ಸೋರಿಕೆಯಾಗಿದೆ. ರಾತ್ರಿ ಸಮಯದಲ್ಲಿ ರಸ್ತೆ ಬದಿಯ ತಾತ್ಕಾಲಿಕ ಶೆಡ್‌ನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ತರಕಾರಿ ಮಾರಾಟಗಾರ ಬಸವರಾಜ ಹೇಳಿದರು.

ಪೂಜೆ ಸಾಮಾಗ್ರಿ ಮಾರುವ ಕಲ್ಲಮ್ಮನ ಪ್ರತಿಕ್ರಿಯೆಯೂ ಇದೇ ಆಗಿತ್ತು. ಇಲ್ಲಿಗೆ ಸ್ಥಳಾಂತರಗೊಂಡಾಗಿನಿಂದ, ಮಾರಾಟ ನಡೆಯುತ್ತಿಲ್ಲ. ಬೇಗನೆ ಸ್ಥಳಾಂತರಗೊಳ್ಳಲು ಹೇಳಿದ್ದರಿಂದ ಹಾಗೆ ಮಾಡಿದ್ದೆ. ಆದರೆ ಈಗ ತಳ್ಳುವ ಗಾಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತೇನೆ ಎಂದರು.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಯೊಬ್ಬರು, ಹೊಸ ಪ್ರದೇಶವಾಗಿರುವುದರಿಂದ ಕಡಿಮೆ ವ್ಯಾಪಾರವಾಗುತ್ತಿದೆ. ಜತೆಗೆ ಮಳಿಗೆಗಳ ಹಂಚಿಕೆ ಇನ್ನೂ ಆಗಬೇಕಿದೆ. ವಿದ್ಯುತ್ ಮೀಟರ್‌ಗಳನ್ನು ಸರಿಪಡಿಸಬೇಕಾಗಿದೆ. ಮಾರಾಟಗಾರರನ್ನು ಬಜಾರ್‌ಗೆ ಸ್ಥಳಾಂತರಿಸಲು ಮುಂದುವರಿಸುತ್ತೇವೆ. ಬಜಾರ್ ಪ್ರಾರಂಭವಾದ ನಂತರ ರಸ್ತೆಯ ಪಕ್ಕದಲ್ಲಿ ವ್ಯಾಪಾರ ಮುಂದುವರಿಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT