ಬಿಜಿಎಸ್ ಜಿಮ್ಸ್ ವೈದ್ಯರು 
ರಾಜ್ಯ

ಮಕ್ಕಳ ಸುರಕ್ಷತೆ, ಆರೈಕೆ: ರೀಲ್ಸ್ ಮೂಲಕ BGS GIMS ಪೆಡಿಯಾಟ್ರಿಕ್ ವೈದ್ಯರಿಂದ ಜನರಲ್ಲಿ ಜಾಗೃತಿ!

ರೀಲ್ಸ್ ನಲ್ಲಿ ಪೆಡಿಯಾಟ್ರಿಕ್ ವಿಭಾಗದ ಯೂನಿಟ್ 2 ಮುಖ್ಯಸ್ಥರಾದ ಡಾ.ಪೂರ್ಣಿಮಾ, ಡಾ. ಆಶಿಶ್, ಡಾ.ಮಧು ಕಿರಣ್ ಹಾಗೂ ಯೂನಿಟ್ 1 ವೈದ್ಯರ ತಂಡದ ರೀಲ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದ್ದು, ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ರೀತಿಯ ಕೆಟ್ಟ ಪರಿಣಾಮವನ್ನುಂಟು ಮಾಡುತ್ತಿದೆ.

ಆಧುನಿಕ ಒತ್ತಡದ ಬದುಕಿನಲ್ಲಿ ಕೆಲವು ಪೋಷಕರು ಬಾಟಲಿ ಹಾಲು, ಜಂಕ್ ಫುಡ್ ಮೊರೆ ಹೋಗಿದ್ದು, ಮಕ್ಕಳಲ್ಲಿ ನಾನಾ ರೀತಿಯ ಅನಾರೋಗ್ಯಕ್ಕೂ ಕಾರಣವಾಗುತ್ತಿದೆ. ಹೀಗಾಗಿ ಮಕ್ಕಳ ಸುರಕ್ಷತೆ, ಆರೈಕೆ ಕುರಿತು ನಗರದ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ನ BGS GIMS (BGS Global Institute of Medical Sciences) ಆಸ್ಪತ್ರೆಯ ಮಕ್ಕಳ ವಿಭಾಗದ ತಜ್ಞ ವೈದ್ಯರು ಅರ್ಥಪೂರ್ಣ ರೀಲ್ಸ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. 'ಈ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿದೆ.

ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ 'ರೀಲ್ಸ್ ಸ್ಪರ್ಧೆಯಲ್ಲಿ ತಮಿಳು ಸಾಂಗ್ ವೊಂದಕ್ಕೆ ರೀಲ್ಸ್ ಮಾಡಿರುವ ವೈದ್ಯರು, ಮಕ್ಕಳು ಮೊಬೈಲ್ ಗೀಳು ಅಂಟಿಸಿಕೊಳ್ಳದೆ, ಚಿತ್ರಕಲೆ, ಹಾಡು ಕೇಳುವಂತಹ ಹವ್ಯಾಸ ರೂಡಿಸುವಂತೆ, ಜಂಕ್ ಫುಡ್ ಬದಲಿಗೆ ಪೌಷ್ಟಿಕಯುಕ್ತ ಬಾಳೇ ಹಣ್ಣು ಸೇವಿಸುವಂತೆ, ಬಾಟಲಿ ಹಾಲು ಬದಲಿಗೆ ಎದೆ ಹಾಲು, ಕೂಕ್ ಬದಲಿಗೆ ಒಆರ್ ಎಸ್ ಪಾನೀಯದಂತಹ ಆರೋಗ್ಯಯುತ ಚಟುವಟಿಕೆ ಕೈಗೊಳ್ಳುವಂತೆ ಮನಮೋಹಕ ಅಭಿನಯದ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದಾರೆ.

ಪೆಡಿಯಾಟ್ರಿಕ್ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ್ ಹಾಗೂ ಯೂನಿಟ್ 2 ಮುಖ್ಯಸ್ಥರಾದ ಡಾ. ಪೂರ್ಣಿಮಾ, ಡಾ.ರೋಹಿತ್, ಡಾ.ವಿನೋದ್, ಡಾ. ನಾಗಜ್ಯೋತಿ, ಡಾ.ಚಿರಂತ್, ಡಾ. ಧನುಷ್, ಡಾ. ಮಧು ಕಿರಣ್,ಡಾ. ಅಶಿಶ್ ರೀಲ್ಸ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಧುನಿಕ ಜಂಜಾಟದ ಬದುಕಿನಲ್ಲಿ ಮಕ್ಕಳ ಸುರಕ್ಷತೆ, ಆರೈಕೆ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ವಿಭಿನ್ನ ಪ್ರಯತ್ನವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT