ಸಾಂದರ್ಭಿಕ ಚಿತ್ರ 
ರಾಜ್ಯ

ಹೊಸ ಟ್ರೆಂಡ್: ವಂಚಿಸಿದ ಹಣದಿಂದ ಕ್ರಿಪ್ಟೋ ಖರೀದಿಸುವ ಸೈಬರ್ ವಂಚಕರು!

ಜುಲೈ 2023 ರವರೆಗೆ ಕೇವಲ 26 ಹೂಡಿಕೆ ವಂಚನೆ ಪ್ರಕರಣಗಳು ವರದಿಯಾಗಿದ್ದು, ರೂ 1.69 ಕೋಟಿ ನಷ್ಟವಾಗಿದೆ.

ಬೆಂಗಳೂರು: ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವಂತೆಯೇ ಈ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರು ಹೂಡಿಕೆ ವಂಚನೆಗಳಲ್ಲಿ ಹೊಸ ಪ್ರವೃತ್ತಿಯನ್ನು ಕಂಡುಹಿಡಿದಿದ್ದಾರೆ. ಇಲ್ಲಿ ಪತ್ತೆಯಿಂದ ತಪ್ಪಿಸಿಕೊಳ್ಳಲು ಕದ್ದ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಲಾಗುತ್ತದೆ. ಹಣ ವರ್ಗಾವಣೆ ಸೈಬರ್ ಅಪರಾಧಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದ್ದರೂ, ವಂಚಕರು ಕ್ರಿಪ್ಟೋದಂತಹ ಡಿಜಿಟಲ್ ಕರೆನ್ಸಿಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದು ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ಪತ್ತೆ ಹಚ್ಚಲು ಇದು ತುಂಬಾ ಕಷ್ಟಕರವಾಗಿದೆ.

ಒಂದು ಸಲ ಹಣವನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿದ ನಂತರ ಅದನ್ನು ಹಲವಾರು ಖಾತೆಗಳು ಮತ್ತು ವ್ಯಾಲೆಟ್‌ಗಳಿಗೆ ವರ್ಗಾಯಿಸಲಾಗುತ್ತದೆ. ಆಗಾಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದನ್ನು ಪತ್ತೆ ಮಾಡಲು ಮತ್ತು ಮರುಪಡೆಯಲು ತುಂಬಾ ಕಷ್ಟವಾಗುತ್ತದೆ.

ಜುಲೈ 2023 ರವರೆಗೆ ಕೇವಲ 26 ಹೂಡಿಕೆ ವಂಚನೆ ಪ್ರಕರಣಗಳು ವರದಿಯಾಗಿದ್ದು, ರೂ 1.69 ಕೋಟಿ ನಷ್ಟವಾಗಿದೆ. ಆದಾಗ್ಯೂ, ಈ ವರ್ಷ ಜುಲೈವರೆಗೆ ಆತಂಕಕಾರಿಯಾಗಿ 143 ಪ್ರಕರಣಗಳು ವರದಿಯಾಗಿದ್ದು, 42.35 ಕೋಟಿ ರೂ ನಷ್ಟಕ್ಕೆ ಕಾರಣವಾಗಿದೆ. ಇತ್ತೀಚಿಗೆ ಇಂತಹ ಪ್ರಕರಣ ಬೆಂಗಳೂರು ಗ್ರಾಮಾಂತರ CEN ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.

10 ವರ್ಷಗಳಿಂದ ವಿಮಾ ಏಜೆಂಟ್ ಮತ್ತು ಷೇರು ಮಾರುಕಟ್ಟೆ ಹೂಡಿಕೆದಾರರಾಗಿ ಕೆಲಸ ಮಾಡುತ್ತಿರುವ 33 ವರ್ಷದ ವ್ಯಕ್ತಿ ಹೂಡಿಕೆ ಮಾಡಲು ತನ್ನ ಸಂಬಂಧಿಕರಿಂದ ಹಣವನ್ನು ಸಾಲ ಪಡೆದಿದ್ದರು. ಅಲ್ಲದೇ ಶೇ. 500 ರಷ್ಟು ಆದಾಯದ ನಿರೀಕ್ಷೆಯಲ್ಲಿ ತನ್ನ ಆಸ್ತಿಯನೆಲ್ಲಾ ಮಾರಾಟ ಮಾಡಿದ್ದರು. ಆದರೆ ಅವರು ವಿಮೆ ಅಥವಾ ಹೂಡಿಕೆ ವಂಚನೆಯಿಂದ 1.2 ಕೋಟಿ ರೂ.ಗೂ ಹೆಚ್ಚು ಕಳೆದುಕೊಂಡಿದ್ದಾರೆ.

'ಆ್ಯಪ್ ಲಿಂಕ್' ಹೊಂದಿರುವ ವಾಟ್ಸಾಪ್ ಸಂದೇಶದೊಂದಿಗೆ ಹಗರಣ ಆರಂಭವಾಗಿದ್ದು, 46 ದಿನಗಳವರೆಗೆ ಮುಂದುವರೆದಿದೆ. ಈ ಸಮಯದಲ್ಲಿ ಆ್ಯಪ್‌ನ ವ್ಯಾಲೆಟ್ ಬ್ಯಾಲೆನ್ಸ್‌ನಲ್ಲಿ 60 ಕೋಟಿ ರೂ. ಗೂ ಹೆಚ್ಚು ಹಣ ಪಡೆಯುವ ಸುಳ್ಳು ಭರವಸೆಯಿಂದ ಆಮಿಷವೊಡ್ಡಲಾಗಿದ್ದು, ಸಂತ್ರಸ್ತ ನಿರಂತವಾಗಿ 1.2 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ನಿರಂತರ ಹೂಡಿಕೆ ನಂತರ, ಸಂತ್ರಸ್ತೆ ವ್ಯಾಲೆಟ್ ನಿಂದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆ್ಯಪ್ ಪ್ರತಿಕ್ರಿಯಿಸಿಲ್ಲ. ಅಲ್ಲದೇ ಎಲ್ಲಾ ಲಿಂಕ್ ಮತ್ತು ಆ್ಯಪ್ ಬಂದ್ ಆಗಿವೆ.

ವಿವಿಧ ಸೈಬರ್ ವಂಚನೆಗಳ ಬಗ್ಗೆ ಚೆನ್ನಾಗಿ ತಿಳಿದಿದ್ದೇನೆ, ಆದಾಗ್ಯೂ, ಈ ಅತ್ಯಾಧುನಿಕತೆಯ ವಂಚನೆಯಿಂದ ಮೋಸ ಹೋಗಿರುವುದಾಗಿ ಸಂತ್ರಸ್ತ ದೂರು ಸಲ್ಲಿಸುವಾಗ ಪೊಲೀಸರೊಂದಿಗೆ ನೋವು ತೋಡಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ನಕಲಿ ಹೂಡಿಕೆ ಹಗರಣಗಳಲಲಿ ಕಡಿಮೆ ಅವಧಿಯಲ್ಲಿ ಅಸಾಧಾರಣವಾಗಿ ಹೆಚ್ಚಿನ ಆದಾಯ ನೀಡುವ ಭರವಸೆ ನೀಡುತ್ತವೆ. ಕಾನೂನುಬದ್ಧ ಹೂಡಿಕೆಗಳು ಸಾಮಾನ್ಯವಾಗಿ ಸ್ಥಿರವಾಗಿರುತ್ತವೆ. ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಂತಹ ಅಧಿಕೃತ ವೇದಿಕೆಗಳಲ್ಲಿ ಲಭ್ಯವಿಲ್ಲದ ಆ್ಯಪ್ ಗಳನ್ನು ಅನುಮಾನದಿಂದ ನೋಡಬೇಕು ಎಂದು ಎಸ್‌ಪಿ ಬಾಬಾ ಎಚ್ಚರಿಸಿದ್ದಾರೆ. ಹೂಡಿಕೆಗಳ ಸಂದರ್ಭದಲ್ಲಿ, ಆ್ಯಪ್ ನಲ್ಲಿ ಫೋಟೋಗಳು ಅಥವಾ ಇನ್ನಿತರ ದಾಖಲೆ ನೀಡಿದರೆ AI ಮತ್ತಿತರ ಇತರ ತಂತ್ರಜ್ಞಾನಗಳೊಂದಿಗೆ ಈ ಮಾಹಿತಿಯನ್ನು ಇತರ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುವ ಅಪಾಯವಿದೆ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಟಿ20 ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 101 ರನ್‌ಗಳ ದಾಖಲೆಯ ಜಯ; ಕಟಕ್‌ನಲ್ಲಿ ಹರಿಣರಿಗೆ ಮೊದಲ ಸೋಲು!

Indigo ವಿರುದ್ಧ ದಿಟ್ಟ ಕ್ರಮ: ವಿಮಾನ ಕಾರ್ಯಾಚರಣೆಯಲ್ಲಿ ಶೇ.10ರಷ್ಟು ಕಡಿತಕ್ಕೆ ಕೇಂದ್ರ ಸರ್ಕಾರ ಆದೇಶ!

Microsoft ಮೆಗಾ ಹೂಡಿಕೆ: 'AI 1st ಫ್ಯೂಚರ್'ಗಾಗಿ 1.5 ಲಕ್ಷ ಕೋಟಿ ರೂ ಬಂಡವಾಳ; ಬೆಂಗಳೂರಿನಲ್ಲಿ AI ಘಟಕ!

1st T20I: ಹಾರ್ದಿಕ್ ಪಾಂಡ್ಯಾ ಏಕಾಂಗಿ ಹೋರಾಟ; ದಕ್ಷಿಣ ಆಫ್ರಿಕಾ ಗೆ 176 ರನ್ ಗುರಿ!

SCROLL FOR NEXT