ಸಾಂದರ್ಭಿಕ ಚಿತ್ರ 
ರಾಜ್ಯ

BDA ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ವೇಳೆ ತಾಂತ್ರಿಕ ದೋಷ: 100 ಕೋಟಿ ರೂ ಆದಾಯದ ಭರವಸೆಯೊಂದಿಗೆ ಮರು ಹರಾಜು!

ಸೆಪ್ಟೆಂಬರ್ 9 ಮತ್ತು 10 ರಂದು ನಡೆದ ನಮ್ಮ ಮೊದಲ ಹಂತದಲ್ಲಿ ಈ 76 ಸೈಟುಗಳನ್ನು ಹರಾಜಿಗೆ ಇಡಲಾಗಿತ್ತು.ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ದೋಷ ಎದುರಾಯಿತು. ಬಿಡ್ಡಿಂಗ್ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ 4.30 ರ ಹೊತ್ತಿಗೆ ಸೈಟ್ ಕ್ರ್ಯಾಶ್ ಆಗಿತ್ತು.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹದಿನೈದು ದಿನಗಳ ಹಿಂದೆ 76 ಮೂಲೆಯ ನಿವೇಶನಗಳ ನೇರ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಆದರೆ ಬಿಡ್ಡಿಂಗ್ ಮುಕ್ತಾಯದ ಹಂತದಲ್ಲಿರುವಾಗಲೇ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು, ಹೀಗಾಗಿ ಮರು ಹರಾಜು ಪ್ರಕ್ರಿಯೆಗೆ ಮುಂದಾಗಿದೆ.

ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಕೇಂದ್ರ ಕಚೇರಿಗೆ ದೂರುಗಳ ಸುರಿಮಳೆ ಬಂದ ಕಾರಣ ಮರು ಹರಾಜಿಗೆ ಮುಂದಾಗಿದೆ. ಇದರಿಂದ 100 ಕೋಟಿ ರೂ.ಗೂ ಅಧಿಕ ಗಳಿಸುವ ಭರವಸೆಯನ್ನು ಪ್ರಾಧಿಕಾರ ಹೊಂದಿದೆ. ಇ-ಆಡಳಿತ ಪೋರ್ಟಲ್‌ನಲ್ಲಿ ಮಂಗಳವಾರ ಬೆಳಿಗ್ಗೆ 9 ರಿಂದ ಬುಧವಾರ ಸಂಜೆ 5 ರವರೆಗೆ ಎರಡು ದಿನಗಳ ಅವಧಿಗೆ ಲೈವ್ ಬಿಡ್ ಕೈಗೊಳ್ಳಲಾಗುತ್ತದೆ. ಬನಶಂಕರಿ VI ಹಂತ, RMV 2ನೇ ಹಂತ, HRBR ಲೇಔಟ್ ಮತ್ತು HSR ಲೇಔಟ್‌ನಂತಹ ಪ್ರಮುಖ ಪ್ರದೇಶಗಳಲ್ಲಿನ ಕಾರ್ನರ್ ಸೈಟ್‌ಗಳನ್ನು ಹರಾಜಿಗೆ ಇಡಲಾಗುವುದು.

ಸೆಪ್ಟೆಂಬರ್ 9 ಮತ್ತು 10 ರಂದು ನಡೆದ ನಮ್ಮ ಮೊದಲ ಹಂತದಲ್ಲಿ ಈ 76 ಸೈಟುಗಳನ್ನು ಹರಾಜಿಗೆ ಇಡಲಾಗಿತ್ತು.ಆದರೆ ಕೊನೆಯ ಹಂತದಲ್ಲಿ ತಾಂತ್ರಿಕ ದೋಷ ಎದುರಾಯಿತು. ಬಿಡ್ಡಿಂಗ್ ಸಂಜೆ 5 ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ 4.30 ರ ಹೊತ್ತಿಗೆ ಸೈಟ್ ಕ್ರ್ಯಾಶ್ ಆಗಿತ್ತು. ಇದು ನೇರ ಹರಾಜಿನಲ್ಲಿ ಭಾಗವಹಿಸುವ ಅನೇಕ ಬಿಡ್ಡರ್‌ಗಳನ್ನು ಅಸಮಾಧಾನಗೊಳಿಸಿತು ಮತ್ತು ಅವರು 50 ಕ್ಕೂ ಹೆಚ್ಚು ಇಮೇಲ್ ದೂರುಗಳನ್ನು ಬಿಡಿಎಗೆ ಕಳುಹಿಸಿದ್ದಾರೆ. “ನಾವು ಮರು-ಬಿಡ್‌ಗೆ ಹೋಗಲು ನಿರ್ಧರಿಸಿದ್ದೇವೆ ಆದರೆ ಅನುಮತಿಯ ಅಗತ್ಯವಿರುವುದರಿಂದ ಅದನ್ನು ತಕ್ಷಣವೇ ಮಾಡಲು ಸಾಧ್ಯವಾಗಲಿಲ್ಲ. ಸೆಪ್ಟೆಂಬರ್ 17 ಮತ್ತು 18ರಂದು ಮರು ಹರಾಜು ಮಾಡಲು ಬಿಡಿಎಗೆ ಅನುಮತಿ ನೀಡಲಾಗಿದೆ ಹಿರಿಯ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ ಆಯುಕ್ತ ಎನ್.ಜಯರಾಮ್ ಅವರು ಮಂಗಳವಾರ ಸಂಜೆ ಕೇಂದ್ರ ಕಚೇರಿಗೆ ಪ್ರವೇಶಿಸಿದಾಗ ಹಲವಾರು ಜನರು ದೂರು ನೀಡಲು ಬಂದಿದ್ದರು ಎಂದು ಹೇಳಲಾಗಿದೆ. ಬಿಡಿಎ ಕಚೇರಿಯಲ್ಲಿ ದಲ್ಲಾಳಿಗಳು ಕೂಡ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ ಅವರು, ಕುಂದುಕೊರತೆಗಳಿರುವ ಜನರಿಗೆ ಮಾತ್ರ ಒಳಗೆ ಇರುವಂತೆ ನೋಡಿಕೊಳ್ಳಲು ಬಿಡಿಎ ಕಾರ್ಯಪಡೆಗೆ ಸೂಚಿಸಿದರು ಎಂದು ಬಿಡಿಎ ಕಾರ್ಯಪಡೆ ಎಸ್ಪಿ ಕೆ.ನಂಜುಂಡೇಗೌಡ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!