ಚೂಡಸಂದ್ರ ಕೆರೆ 
ರಾಜ್ಯ

ಚೂಡಸಂದ್ರ ಕೆರೆ ಪುನಶ್ಚೇತನ: ಜಲ ಸಂಗ್ರಹ ಹೆಚ್ಚಳ

ಕೆರೆ ಪುನಶ್ಚೇತನ ಸಂಬಂಧ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಕೆರೆ ಭೂಮಿ ಅತಿಕ್ರಮ ಹಾಗೂ ಕಳೆಗಳನ್ನು ತೆರವುಗೊಳಿಸಲಾಗಿದ್ದು, ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: 26 ಎಕರೆ ವಿಸ್ತೀರ್ಣದ ಚೂಡಸಂದ್ರ ಕೆರೆ ಪುನರುಜ್ಜೀವನ ಕಂಡಿದೆ, ಕೆರೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು 84 ಮಿಲಿಯನ್ ಲೀಟರ್‌ಗಳಿಂದ 150 ಮಿಲಿಯನ್‌ಗೆ ಹೆಚ್ಚಿಸಲಾಗಿದ್ದು, ನೀರಿನ ಗುಣಮಟ್ಟ ಮತ್ತು ಜೀವವೈವಿಧ್ಯತೆಯನ್ನು ಸುಧಾರಿಸಲಾಗಿದೆ. ಇದರಿಂದ 3,000 ಮನೆಗಳಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಬಾಷ್ ಗ್ಲೋಬಲ್ ಸಾಫ್ಟ್‌ವೇರ್ ಟೆಕ್ನಾಲಜೀಸ್ (ಬಿಜಿಎಸ್‌ಡಬ್ಲ್ಯೂ) ಮತ್ತು ಎನ್‌ಜಿಒ ಸೇಟ್ರೀಸ್‌ನ ಸಿಎಸ್‌ಆರ್ (ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ) ಉಪಕ್ರಮದ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆರೆಯನ್ನು ಪುನಶ್ಚೇತನಗೊಳಿಸಲಾಗಿದೆ.

ಕೆರೆ ಪುನಶ್ಚೇತನ ಸಂಬಂಧ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದ್ದು, ಕೆರೆ ಭೂಮಿ ಅತಿಕ್ರಮ ಹಾಗೂ ಕಳೆಗಳನ್ನು ತೆರವುಗೊಳಿಸಲಾಗಿದ್ದು, ಒಳಚರಂಡಿ ನೀರು ಕೆರೆಗೆ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ. ಜೌಗು ಪ್ರದೇಶವನ್ನು ಸೃಷ್ಟಿಸಲಾಗಿದ್ದು, ನಿಂಫಿಯಾ ಮತ್ತು ಕೊಲೊಕಾಸಿಯಾದಂತಹ ಸ್ಥಳೀಯ ಸಸ್ಯಗಳನ್ನು ನೆಡಾಗಿದೆ. ಕೆರೆಯ ಜೀವವೈದ್ಯತೆಯನ್ನು ಪುನರುಜ್ಜೀವನಗೊಳಿಸಲು ಹೂಳು ತೆಗೆಯಲಾಗಿದ್ದು, ಕಲ್ಯಾಣಿಯನ್ನೂ ಕೂಡ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿದೆ.

ಕೆರೆಗೆ ಪಕ್ಷಿ ಪ್ರಬೇಧಗಳು ಮರಳಿದ್ದು, ಇದು ಪರಿಸರ ಚೇತರಿಕೆಯ ಸೂಚನೆಯಾಗಿದೆ. ಇದು ಕೆರೆ ಪುನಶ್ಚೇತನ ಕಾರ್ಯ ಯಶಸ್ವಿಯಾಗಿರುವುದನ್ನು ಸೂಚಿಸುತ್ತಿದೆ ಎಂದು ಚೂಡಸಂದ್ರ ಕೆರೆ ಪುನಃಸ್ಥಾಪನೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ತಂಡದ ಪರಿಸರಶಾಸ್ತ್ರಜ್ಞ ಡಾ. ರಾಜಕಮಲ್ ಗೋಸ್ವಾಮಿ ಅವರು ಹೇಳಿದ್ದಾರೆ.

ಸೇಟ್ರೀ ಸಂಸ್ಥಾಪಕ ಕಪಿಲ್ ಶರ್ಮಾ ಅವರು ಮಾತನಾಡಿ, ಇದು ಇತರ ನಗರ ಜಲಮೂಲ ಪುನಃಸ್ಥಾಪನೆ ಯೋಜನೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT