ರನ್ಯಾರಾವ್  
ರಾಜ್ಯ

ಚಿನ್ನ ಕಳ್ಳಸಾಗಣೆ ಪ್ರಕರಣ: ಕಸ್ಟಮ್ಸ್ ಅಧಿಕಾರಿಗಳಿಂದ ಶೋಧ, ಕಾನೂನು ಬದ್ಧತೆ ಪ್ರಶ್ನಿಸಿದ ನಟಿ ರನ್ಯಾ ರಾವ್!

ಮಹಜರ್‌ನಲ್ಲಿನ ವ್ಯತ್ಯಾಸಗಳು ಮತ್ತು ಕಾರ್ಯಾಚರಣೆಯ ಮೊದಲು ನೀಡಲಾದ ಸೂಚನೆಗಳನ್ನು ಉಲ್ಲೇಖಿಸಿದ ಅವರು, ಶೋಧ ಮತ್ತು ಬಂಧನದಲ್ಲಿ ಅನುಸರಿಸಲಾದ ವಿಧಾನದಲ್ಲಿ ಕಾನೂನುಬಾಹಿರವಾಗಿದೆ ಎಂದರು.

ಬೆಂಗಳೂರು: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ನಡೆಸಿರುವ ಶೋಧ ಹಾಗೂ ವಶ ಕಾರ್ಯಾಚರಣೆ, ಕಸ್ಟಮ್ಸ್ ಕಾಯ್ದೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದುಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಮುಂದೆ ಹಾಜರಾದ ರನ್ಯಾ ಪರ ಹಿರಿಯ ವಕೀಲ ಸಂದೇಶ್ ಜೆ ಚೌಟ ಅವರು, ಯಾವುದೇ ವ್ಯಕ್ತಿಯನ್ನು ಮ್ಯಾಜಿಸ್ಟ್ರೇಟ್ ಅಥವಾ ಗೆಜೆಟೆಡ್ ಕಸ್ಟಮ್ಸ್ ಅಧಿಕಾರಿಯ ಮುಂದೆ ಹಾಜರುಪಡಿಸುವುದನ್ನು ಕಡ್ಡಾಯ ಮಾಡಿರುವ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ಅನ್ನು ಉಲ್ಲಂಘಿಸಿ ಶೋಧ ನಡೆಸಲಾಗಿದೆ. ಈ ಕಾಯ್ದೆಯನ್ನು ಅನುಸರಿಸುವಲ್ಲಿ ವಿಫಲವಾದ್ದಲ್ಲಿ ವಶಕ್ಕೆ ಪಡೆದೆಲ್ಲಾ ಅಮಾನ್ಯವಾಗುತ್ತದೆ ಎಂದು ವಾದಿಸಿದರು.

ಮಹಜರ್‌ನಲ್ಲಿನ ವ್ಯತ್ಯಾಸಗಳು ಮತ್ತು ಕಾರ್ಯಾಚರಣೆಯ ಮೊದಲು ನೀಡಲಾದ ಸೂಚನೆಗಳನ್ನು ಉಲ್ಲೇಖಿಸಿದ ಅವರು, ಶೋಧ ಮತ್ತು ಬಂಧನದಲ್ಲಿ ಅನುಸರಿಸಲಾದ ವಿಧಾನದಲ್ಲಿ ಕಾನೂನುಬಾಹಿರವಾಗಿದೆ ಎಂದರು.

ಶೋಧ ಮತ್ತು ಬಂಧನದ ನೇತೃತ್ವ ವಹಿಸಿದ ಅಧಿಕಾರಿಯನ್ನು ಕೇವಲ ಗೆಜೆಟೆಡ್ ಅಧಿಕಾರಿ ಎಂದು ಹೇಳಿರುವುದು ಇಡೀ ಕಾರ್ಯಾಚರಣೆಯ ಕಾನೂನುಬದ್ಧತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಕಾನೂನಿನಲ್ಲಿರುವಂತೆ ಬಂಧನಕ್ಕೆ ಕಾರಣವನ್ನು ಔಪಚಾರಿಕವಾಗಿ ರನ್ಯಾ ಅವರ ಕುಟುಂಬ ಸದಸ್ಯರಿಗೆ ಲಿಖಿತವಾಗಿ ತಿಳಿಸಲಾಗಿಲ್ಲ . ರನ್ಯಾ ಅವರ ಪತಿಗೆ ದೂರವಾಣಿ ಕರೆ ಮೂಲಕ ಮಾತ್ರ ಮಾಹಿತಿ ನೀಡಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ವಾದಕ್ಕೆ ಪೂರಕವಾಗಿ ಎರಡು ಸುಪ್ರೀಂಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಚೌಟಾ, ಕಸ್ಟಮ್ಸ್ ಆಕ್ಟ್ ಅಡಿಯ ಅಪರಾಧಗಳು ಏಳು ವರ್ಷಗಳಿಗಿಂತ ಕಡಿಮೆ ಅವಧಿಯ ಜೈಲು ಶಿಕ್ಷೆಯೊಂದಿಗೆ ದಂಡನೀಯವಾಗಿರುವುದರಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ಸಾಮಾನ್ಯವಾಗಿ ಜಾಮೀನಿಗೆ ಪರಿಗಣಿಸುತ್ತವೆ. ಮಹಿಳೆಯಾಗಿರುವ ರನ್ಯಾ ಈಗಾಗಲೇ 45 ದಿನಗಳ ಕಾಲ ಬಂಧನದಲ್ಲಿದ್ದಾರೆ ಎಂದು ತಿಳಿಸಿದರು.

ರನ್ಯಾ ಮತ್ತು ಆಕೆಯ ಸಹ ಆರೋಪಿ ತರುಣ್ ಕೊಂಡೂರು ರಾಜು ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಏಪ್ರಿಲ್ 21 ಕ್ಕೆ ಮುಂದೂಡಿದ ನ್ಯಾಯಾಲಯ, ಅದರೊಳಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT