ಚಾಮರಾಜನಗರ: ವಿಷಕಾರಿ ಹಣ್ಣು ಸೇವನೆ ಮಾಡಿದ ಪರಿಣಾಮ 8 ಮಕ್ಕಳು ಹಾಗೂ ಓರ್ವ ಮಹಿಳೆ ಅಸ್ವಸ್ಥಗೊಂಡ ಘಟನೆ ಚಾಮರಾಜನಗರದಲ್ಲಿ ವರದಿಯಾಗಿದೆ.
ಅಸ್ವಸ್ಥಗೊಂಡವರನ್ನು ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡಿರುವವರನ್ನು ಕಬ್ಬು ಕಡಿಯಲು ಮಹಾರಾಷ್ಟ್ರದಿಂದ ಕಾರ್ಮಿಕರು ಹಾಗೂ ಅವರ ಮಕ್ಕಳು ಎಂದು ಗುರುತಿಸಲಾಗಿದೆ.
ಯಳಂದೂರಿನಲ್ಲಿ ಕಾರ್ಮಿಕರು ವಾಸವಿದ್ದರು. ಮಕ್ಕಳು ಹಾಗೂ ಮಹಿಳೆ ಜಮೀನಿನ ಬೇಲಿಯಲ್ಲಿದ್ದ ಕಾಡು ಹಣ್ಣನ್ನು ಅದು ವಿಷಕಾರಿ ಎಂದು ತಿಳಿಯದೆ ಸೇವಿಸಿದ್ದು, ಹಣ್ಣು ತಿಂದ ಕೆಲ ಹೊತ್ತಲ್ಲೇ ವಾಂತಿ ಕಾಣಿಸಿಕೊಂಡಿತ್ತು. ವಾಂತಿಯಿಂದ ಮಕ್ಕಳು ಹಾಗೂ ಮಹಿಳೆ ಅಸ್ವಸ್ಥಗೊಂಡಿದ್ದಾರೆ.