ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ದಾಳಿ 
ರಾಜ್ಯ

Bannerghatta Video: ಚಿರತೆ ದಾಳಿ; 'ಸುರಕ್ಷತೆ ಆದ್ಯತೆ ನೀಡಿ, ವಾಹನಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ'; Eshwar Khandre

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ತನ್ನ ಕುಟುಂಬದೊಂದಿಗೆ ಚಿರತೆ ಸಫಾರಿಯಲ್ಲಿದ್ದ 12 ವರ್ಷದ ಬಾಲಕನ ಮೇಲೆ ಚಿರತೆಯೊಂದು ಆಕಸ್ಮಿಕವಾಗಿ ದಾಳಿ ಮಾಡಿತ್ತು.

ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಶುಕ್ರವಾರ ನಡೆದ ಚಿರತೆ ದಾಳಿಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ, "ಸುರಕ್ಷತೆ ಆದ್ಯತೆ ನೀಡಿ, ವಾಹನಗಳಿಗೆ ಕಬ್ಬಿಣದ ಜಾಲರಿ ಅಳವಡಿಸಿ' ಎಂದು ಸೂಚನೆ ನೀಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (ಬಿಬಿಪಿ) ತನ್ನ ಕುಟುಂಬದೊಂದಿಗೆ ಚಿರತೆ ಸಫಾರಿಯಲ್ಲಿದ್ದ 12 ವರ್ಷದ ಬಾಲಕನ ಮೇಲೆ ಚಿರತೆಯೊಂದು ಆಕಸ್ಮಿಕವಾಗಿ ದಾಳಿ ಮಾಡಿತ್ತು. ಸಫಾರಿ ವಾಹನದ ಕಿಟಕಿಯಲ್ಲಿ ಬಾಲಕ ಕೈ ಹಾಕಿದ್ದಾಗ ಚಿರತೆ ಏಕಾಏಕಿ ದಾಳಿ ಮಾಡಿ ತನ್ನ ಉಗುರುಗಳಿಂದ ಕೈ ಪರಚಿತ್ತು. ಇದರಿಂದ ಬಾಲ್ಕನಿಗೆ ಗಾಯವಾಗಿತ್ತು.

ಸಫಾರಿ ಆವರಣದಲ್ಲಿದ್ದ ಚಿರತೆ ಸಫಾರಿ ವಾಹನ ಹತ್ತಲು ಪ್ರಯತ್ನಿಸಿದಾಗ, ಬಾಲಕ ತನ್ನ ಕೈಯನ್ನು ಜಾಲರಿಯಿಂದ ಹೊರಕ್ಕೆ ಹಾಕಿದ್ದ. ಮುಚ್ಚಿದ ಎಸಿ ಅಲ್ಲದ ಸಫಾರಿ ಬಸ್‌ನ ಹೊರಗೆ ಬಾಲಕ ಕೈ ಇಟ್ಟುಕೊಂಡಿದ್ದರಿಂದ ಚಿರತೆ ಆತನ ತೋಳನ್ನು ತನ್ನ ಪಂಜದಿಂದ ಹಿಡಿಯಲೆತ್ನಿಸಿದೆ. ಈ ವೇಳೆ ಉಗುರುಗಳಿಂದ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಬಿಬಿಎಂಪಿ ಸಿಬ್ಬಂದಿ ತಿಳಿಸಿದ್ದಾರೆ.

ಚಿರತೆ ಬಾಲಕನ ಮೇಲೆ ದಾಳಿ ಮಾಡಲಿಲ್ಲ, ಮತ್ತು ಚಿರತೆಯ ಚಲನವಲನಗಳ ಬಗ್ಗೆ ಬಾಲಕನಿಗೂ ತಿಳಿದಿರಲಿಲ್ಲ ಎಂದು ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ಟಿಎನ್‌ಐಇಗೆ ತಿಳಿಸಿದ್ದಾರೆ.

ಕೂಡಲೇ ಸಫಾರಿ ವಾಹನವನ್ನು ತಕ್ಷಣವೇ ಮುಖ್ಯ ಕಚೇರಿಗೆ ತರಲಾಯಿತು. ಬಳಿಕ ಗಾಯಾಳು ಬಾಲಕನನ್ನು ಜಿಗಣಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ತಕ್ಷಣದ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಅಂತೆಯೇ ಬನ್ನೇರುಘಟ್ಟ ಜೈವಿಕ ಉದ್ಯಾನವನ ಆಡಳಿತದ ವಿರುದ್ಧ ವೈದ್ಯಕೀಯ-ಕಾನೂನು ಪ್ರಕರಣ ದಾಖಲಿಸಲಾಗಿದೆ.

ಮುನ್ನೆಚ್ಚರಿಕಾ ಕ್ರಮ

ಇನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎವಿ ಸೂರ್ಯ ಸೇನ್ ಮಾತನಾಡಿ, 'ಸಫಾರಿ ವಾಹನ ಕ್ಯಾಮೆರಾ ಸ್ಲಾಟ್‌ಗಳು ಸೇರಿದಂತೆ ಬಸ್‌ಗಳ ಕಿಟಕಿಗಳನ್ನು ಕಬ್ಬಿಣದ ಜಾಲರಿಯಿಂದ ಮುಚ್ಚಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಸಿ ಇಲ್ಲದ ಸಫಾರಿ ಬಸ್‌ಗಳನ್ನು ನಿರ್ವಹಿಸುವ ಚಾಲಕರು ಜಾಗರೂಕರಾಗಿರಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಈ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದರು.

ಸುರಕ್ಷತೆ ಆದ್ಯತೆ ನೀಡಿ: ಈಶ್ವರ್ ಖಂಡ್ರೆ

ಅಂತೆಯೇ ಘಟನೆ ಕುರಿತು ರಾಜ್ಯ ಅರಣ್ಯ, ಪರಿಸರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದು, ಛಾಯಾಗ್ರಹಣ ಸ್ಲಾಟ್‌ಗಳು ಸೇರಿದಂತೆ ಬಸ್‌ಗಳ ಎಲ್ಲಾ ಭಾಗಗಳು ಕಬ್ಬಿಣದ ಜಾಲರಿಗಳಿಂದ ಚೆನ್ನಾಗಿ ಜೋಡಿಸಲ್ಪಟ್ಟಿವೆಯೆ ಎಂದು ಖಚಿತಪಡಿಸಿಕೊಳ್ಳಲು ಬಿಬಿಪಿ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.

ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಎಲ್ಲಾ ಪ್ರವಾಸಿಗರಿಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡುವಂತೆ ಮತ್ತು ಟಿಕೆಟ್‌ಗಳನ್ನು ಮುನ್ನೆಚ್ಚರಿಕೆಗಳೊಂದಿಗೆ ಮುದ್ರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅವರು ಬಿಬಿಪಿ ಸಿಬ್ಬಂದಿಗೆ ಸೂಚನೆ ನೀಡಿದರು.

ಸಫಾರಿ ಮುನ್ನೆಚ್ಚರಿಕಾ ಕ್ರಮಗಳು

  • ಸಫಾರಿ ತೆರಳುವ ವೇಳೆ ಪ್ರವಾಸಿಗರು ಪ್ರಾಣಿಗಳನ್ನು ಆಕರ್ಷಿಸಲು ಕೈ ಅಥವಾ ಕಲ್ಲು ಬೀಸುವುದು ಅಥವಾ ಕೂಗುವುದು ಮಾಡಬಾರದು.

  • ವಾಹನದಿಂದ ಕೈ ಅಥವಾ ಮುಖವನ್ನು ಹೊರಗೆ ಇರಿಸಬಾರದು.

  • ಪ್ರಾಣಿಗಳಿಗೆ ಆಹಾರ ನೀಡಬಾರದು ಅಥವಾ ಅವುಗಳೊಂದಿಗೆ ಕೀಟಲೆ ಮಾಡಬಾರದು.

  • ಪ್ರಕಾಶಮಾನವಾದ ಬಟ್ಟೆಗಳನ್ನು ಧರಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ದೇವರ ಮೊರೆ ಹೋದ ಡಿಕೆಶಿ ಬೆಂಬಲಿಗರು: ಅಯ್ಯಪ್ಪ ಮಾಲಾಧಾರಿಗಳ ವಿಶೇಷ ಪೂಜೆ; ಗಣಪತಿ ದೇವಾಲಯಲ್ಲಿ ಈಡುಗಾಯಿ ಸೇವೆ!

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

SCROLL FOR NEXT