ಸಾಂದರ್ಭಿಕ ಚಿತ್ರ 
ರಾಜ್ಯ

ಉತ್ತರ ಕನ್ನಡ: ಅಪ್ಸರಕೊಂಡ ಸಮುದ್ರತೀರದಲ್ಲಿ ಅಪರೂಪದ ದೈತ್ಯ; ಮೊದಲ ಬಾರಿಗೆ ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲ ಪತ್ತೆ!

ಕರ್ನಾಟಕದಲ್ಲಿ ಮೊದಲ ಭಾರಿಗೆ ಸಮುದ್ರ ತೀರಕ್ಕೆ ಬಂದಿರುವ ಈ ಪ್ರಭೇದದ ತಿಮಿಂಗಲ ಸಮುದ್ರ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಸುಮಾರು 4 ಮೀಟರ್ ಉದ್ದದ ಈ ತಿಮಿಂಗಿಲದ ದೇಹದ ಮೇಲೆ ಯಾವುದೇ ಗಾಯಗಳಿಲ್ಲ.

ಮಂಕಿ(ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ಪ್ರಸ್ತಾವಿತ ಅಪ್ಸರಕೊಂಡ ಸಮುದ್ರ ಅಭಯಾರಣ್ಯದ ಬಳಿಯ ಮಂಕಿ ಕಡಲತೀರದಲ್ಲಿ ಶನಿವಾರ ಬೆಳಿಗ್ಗೆ ಅತ್ಯಂತ ಅಪರೂಪದ ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲ (ಗ್ಲೋಬಿಸೆಫಾಲಾ ಮ್ಯಾಕ್ರೋರಿಂಚಸ್) ಪತ್ತೆಯಾಗಿದೆ.

ಕರ್ನಾಟಕದಲ್ಲಿ ಮೊದಲ ಭಾರಿಗೆ ಸಮುದ್ರ ತೀರಕ್ಕೆ ಬಂದಿರುವ ಈ ಪ್ರಭೇದದ ತಿಮಿಂಗಲ ಸಮುದ್ರ ತಜ್ಞರನ್ನು ಗೊಂದಲಕ್ಕೀಡು ಮಾಡಿದೆ. ಸುಮಾರು 4 ಮೀಟರ್ ಉದ್ದದ ಈ ತಿಮಿಂಗಿಲದ ದೇಹದ ಮೇಲೆ ಯಾವುದೇ ಗಾಯಗಳಿಲ್ಲ. ಆದರೆ ಒಂದೇ ಒಂದು ತಿಮಿಂಗಿಲ ಸಿಕ್ಕಿಬಿದ್ದಿರುವುದು ಆಶ್ಚರ್ಯಕರವಾಗಿದ್ದು ಹತ್ತಿರದಲ್ಲಿ ಇತರ ತಿಮಿಂಗಿಲಗಳು ಇರುವ ಸಾಧ್ಯತೆಯಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮುದ್ರ ಜೀವಶಾಸ್ತ್ರದ ಮುಖ್ಯಸ್ಥ ಪ್ರೊ. ಶಿವಕುಮಾರ್ ಹರಗಿ ಹೇಳಿದರು.

ಶಾರ್ಟ್-ಫಿನ್ಡ್ ಪೈಲಟ್ ತಿಮಿಂಗಿಲವನ್ನು ಭಾರತೀಯ ನೀರಿನಲ್ಲಿ ಅಪರೂಪದ ತಿಮಿಂಗಿಲ ಪ್ರಭೇದಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 2016 ರಲ್ಲಿ ತಮಿಳುನಾಡಿನ ಮನಪಾಡ್‌ನಲ್ಲಿ ತೀರದಲ್ಲಿ ಈ ಜಾತಿಯ ತಿಮಿಂಗಲ ಪತ್ತೆಯಾಗಿತ್ತು. ಈ ವರ್ಷದ ಆರಂಭದಲ್ಲಿ, ಅದೇ ಜಾತಿಯ ತಿಮಿಂಗಿಲವನ್ನು ಕೇರಳದ ಕೋಝಿಕ್ಕೋಡ್ ಬಳಿಯ ಮೀನುಗಾರರು ರಕ್ಷಿಸಿದರ ಎಂದು ತಿಳಿಸಿದ್ದಾರೆ.

ಇದು ದೃಢವಾದ ದೇಹ, ಗುಂಡಗಿನ ತಲೆ, ಚಾಚಿಕೊಂಡಿರುವ ಮೇಲಿನ ತುಟಿ ಮತ್ತು ದೇಹದ ಉದ್ದದ ಆರನೇ ಒಂದು ಭಾಗದಷ್ಟು ಅಳತೆಯ ಫಾಲ್ಕೇಟ್ ಫ್ಲಿಪ್ಪರ್‌ಗಳನ್ನು ಹೊಂದಿದೆ ಎಂದು ಈ ಜಾತಿಯ ಬಗ್ಗೆ ಪ್ರೊಫೆಸರ್ ಹರಗಿ ವಿವರಿಸಿದ್ದಾರೆ.

ಇದರ ಬೆನ್ನಿನ ರೆಕ್ಕೆ ಅಗಲವಾಗಿದ್ದು ಕೆಳಕ್ಕೆ ಬಾಗಿದಂತಿದ್ದು, ಉಸಿರಾಟು ಮೂಗಿನ ನಾಳದ ಸಮೀಪದಲ್ಲಿರುತ್ತದೆ. ಈ ತಿಮಿಂಗಲವನ್ನು ಗುರುತಿಸುವ ಪ್ರಮುಖ ಲಕ್ಷಣ ಇದಾಗಿದೆ. ವಯಸ್ಕ ಗಂಡು ತಿಮಿಂಗಲಗಳು 9 ಮೀಟರ್ ವರೆಗೆ ಬೆಳೆದು 3 ಟನ್ ತೂಕವಿರುತ್ತವೆ, ಆದರೆ ಹೆಣ್ಣುಗಳು ಸುಮಾರು 6 ಮೀಟರ್ ಉದ್ದ ಮತ್ತು 1.5 ಟನ್ ತೂಕ ಇರುತ್ತವೆ ಎಂದಿದ್ದಾರೆ.

ಸಿಕ್ಕಿರುವ ಪೈಲಟ್ ತಿಮಿಂಗಿಲವು ಶ್ವಾಸಕೋಶದಲ್ಲಿ ಉಂಟಾದ ಊತದಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಕುಂದಾಪುರದ ರೀಫ್ ವಾಚ್‌ನ ಪಶುವೈದ್ಯ ಡಾ. ಪ್ರಶಾಂತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!