ಮೃತ ಗರ್ಭಿಣಿ ಶಿಲ್ಪಾ 
ರಾಜ್ಯ

'ನೀನು ನೋಡಲು ಕಪ್ಪು-ಕುಳ್ಳಿ; ಮಗನಿಗೆ ಸರಿಯಾದ ಜೋಡಿಯಲ್ಲ': 35 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿದ್ರೂ ಕಿರುಕುಳ; ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ

ಮೂಲತಃ ಹುಬ್ಬಳ್ಳಿಯ ಬಸಯ್ಯ- ಶಾರದಾ ದಂಪತಿಯ ಮಗಳಾದ ಶಿಲ್ಪಾ, 2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ನಲ್ಲಿ ವಾಸವಾಗಿದ್ದರು.

ಬೆಂಗಳೂರು: ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (27) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಹುಬ್ಬಳ್ಳಿಯ ಬಸಯ್ಯ ಮತ್ತು ಶಾರದಾ ದಂಪತಿಯ ಮಗಳಾದ ಶಿಲ್ಪಾ, 2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಶಿಲ್ಪಾ, ಪತಿ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ಒಂದನೇ ಹಂತದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಒಂದು ಮಗು ಸಹ ಆಗಿತ್ತು. ಜೊತೆಗೆ ಇನ್ನೊಂದು ಮಗುವಿಗೆ ಗರ್ಭಿಣಿ ಆಗಿದ್ದರು.ಸಾಫ್ಟ್‌ವೇರ್‌ ಕಂಪನಿಯಲ್ಲಿಎಂಜಿನಿಯರ್‌ ಆಗಿದ್ದ ಪ್ರವೀಣ್‌ 2023ರಲ್ಲಿ ಕೆಲಸ ಬಿಟ್ಟು ಪಾನಿಪೂರಿ ವ್ಯಾಪಾರ ಆರಂಭಿಸಿದ್ದ.

ಆದರೆ ಹೆಂಡತಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಳಿಯ ಪ್ರವೀಣ್‌ ಮತ್ತು ಆತನ ತಾಯಿ ಶಾಂತವ್ವನ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ನೀನು ನೋಡಲು ಕಪ್ಪು ಮತ್ತು ಕುಳ್ಳಿ. ತನ್ನ ಮಗನಿಗೆ ಸರಿಯಾದ ಜೋಡಿಯಲ್ಲ ಎಂದು ಮಗಳಿಗೆ ಹೀಯಾಳಿಸುತ್ತಿದ್ದರು. ಮಗನನ್ನು ಬಿಟ್ಟು ಹೋಗು, ಆತನಿಗೆ ಬೇರೊಂದು ಹುಡುಗಿಯನ್ನು ನೋಡಿ ಮತ್ತೊಂದು ಮದುವೆ ಮಾಡುತ್ತೇನೆ ಎಂದು ಮಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಮದುವೆಯಾದ ದಿನದಿಂದಲೂ ಪ್ರವೀಣ್‌ ಮತ್ತು ಶಾಂತವ್ವ ಹಣಕ್ಕಾಗಿ ಮಗಳನ್ನು ಪೀಡಿಸುತ್ತಿದ್ದರು,'' ಎಂದು ಶಾರದಾ ದೂರಿನಲ್ಲಿಆರೋಪಿಸಿದ್ದಾರೆ.

'ಪ್ರವೀಣ್‌, ಹೊಸದಾಗಿ ಚಾಟ್ಸ್‌ ಅಂಗಡಿ ತೆರೆಯಲು ತವರು ಮನೆಯಿಂದ 5 ಲಕ್ಷ ರೂ. ತರುವಂತೆ ಮಗಳಿಗೆ ಕಿರುಕುಳ ಕೊಡುತ್ತಿದ್ದ. ಅಲ್ಲದೆ, ತಾಯಿಯ ಜತೆ ಸೇರಿ ಆರು ತಿಂಗಳ ಹಿಂದೆ ಮಗಳ ಮೇಲೆ ಹಲ್ಲೆನಡೆಸಿ ಮನೆಯಿಂದ ಹೊರ ಹಾಕಿದ್ದ. ಮಗಳ ಸಾವಿಗೆ ಅವರಿಬ್ಬರೇ ಕಾರಣ ಎಂದು ಶಿಲ್ಪಾ ತಾಯಿ ಶಾರದಾ ದೂರು ನೀಡಿದ್ದಾರೆ. ಪೊಲೀಸರು ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು ಪ್ರವೀಣ್‌ನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾದ ರೋಬೋಟ್ ಡಾಗ್ ವಿವಾದ: AI Summit expoದಿಂದ ಗಾಲ್ಗೋಟಿಯಾಸ್ ವಿವಿಗೆ ಸ್ಟಾಲ್ ತೆರವುಗೊಳಿಸಲು ಸೂಚನೆ-Video

ನಿಮಗೆ ಬುದ್ಧಿವಂತಿಕೆಯ ಕೊರತೆಯಿದ್ದರೆ AI ಬಗ್ಗೆ ಪೋಸ್ಟ್ ಮಾಡಬೇಡಿ: ರಾಹುಲ್ ಗೆ ಬಿಜೆಪಿ

Winter Olympics 2026: ಮೂರೇ ದಿನದಲ್ಲಿ 10 ಸಾವಿರ ಕಾಂಡೋಮ್ ಗಳು ಖಾಲಿ, ಮತ್ತೆ 1 ಲಕ್ಷ ಸ್ಟಾಕ್ ಗೆ ಆರ್ಡರ್!

ಮುಸ್ಲಿಂರಿಗೆ ನೀಡಲಾಗಿದ್ದ ಶೇ.5 ರಷ್ಟು ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರ

T20 World Cup 2026: ಸೂಪರ್ 8 ಹಂತದ ಗ್ರೂಪ್ 1ರ ವೇಳಾಪಟ್ಟಿ ಪ್ರಕಟ; ಫೆಬ್ರುವರಿ 22ರಂದು ಭಾರತ- ದಕ್ಷಿಣ ಆಫ್ರಿಕಾ ಮುಖಾಮುಖಿ!

SCROLL FOR NEXT