ಮೃತ ಗರ್ಭಿಣಿ ಶಿಲ್ಪಾ 
ರಾಜ್ಯ

'ನೀನು ನೋಡಲು ಕಪ್ಪು-ಕುಳ್ಳಿ; ಮಗನಿಗೆ ಸರಿಯಾದ ಜೋಡಿಯಲ್ಲ': 35 ಲಕ್ಷ ರೂ ಖರ್ಚು ಮಾಡಿ ಮದುವೆ ಮಾಡಿದ್ರೂ ಕಿರುಕುಳ; ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ

ಮೂಲತಃ ಹುಬ್ಬಳ್ಳಿಯ ಬಸಯ್ಯ- ಶಾರದಾ ದಂಪತಿಯ ಮಗಳಾದ ಶಿಲ್ಪಾ, 2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ನಲ್ಲಿ ವಾಸವಾಗಿದ್ದರು.

ಬೆಂಗಳೂರು: ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಇನ್ಫೋಸಿಸ್ ಉದ್ಯೋಗಿ ಶಿಲ್ಪಾ (27) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸುದ್ಧಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಹುಬ್ಬಳ್ಳಿಯ ಬಸಯ್ಯ ಮತ್ತು ಶಾರದಾ ದಂಪತಿಯ ಮಗಳಾದ ಶಿಲ್ಪಾ, 2022ರ ಡಿಸೆಂಬರ್‌ನಲ್ಲಿ ಪ್ರವೀಣ್‌ನನ್ನು ವಿವಾಹವಾಗಿದ್ದರು. ಮದುವೆಯ ನಂತರ ಶಿಲ್ಪಾ, ಪತಿ ಪ್ರವೀಣ್‌ ಜತೆ ಬಿಟಿಎಂ ಲೇಔಟ್‌ ಒಂದನೇ ಹಂತದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಒಂದು ಮಗು ಸಹ ಆಗಿತ್ತು. ಜೊತೆಗೆ ಇನ್ನೊಂದು ಮಗುವಿಗೆ ಗರ್ಭಿಣಿ ಆಗಿದ್ದರು.ಸಾಫ್ಟ್‌ವೇರ್‌ ಕಂಪನಿಯಲ್ಲಿಎಂಜಿನಿಯರ್‌ ಆಗಿದ್ದ ಪ್ರವೀಣ್‌ 2023ರಲ್ಲಿ ಕೆಲಸ ಬಿಟ್ಟು ಪಾನಿಪೂರಿ ವ್ಯಾಪಾರ ಆರಂಭಿಸಿದ್ದ.

ಆದರೆ ಹೆಂಡತಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಅಳಿಯ ಪ್ರವೀಣ್‌ ಮತ್ತು ಆತನ ತಾಯಿ ಶಾಂತವ್ವನ ವರದಕ್ಷಿಣೆ ಕಿರುಕುಳದಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ.

ನೀನು ನೋಡಲು ಕಪ್ಪು ಮತ್ತು ಕುಳ್ಳಿ. ತನ್ನ ಮಗನಿಗೆ ಸರಿಯಾದ ಜೋಡಿಯಲ್ಲ ಎಂದು ಮಗಳಿಗೆ ಹೀಯಾಳಿಸುತ್ತಿದ್ದರು. ಮಗನನ್ನು ಬಿಟ್ಟು ಹೋಗು, ಆತನಿಗೆ ಬೇರೊಂದು ಹುಡುಗಿಯನ್ನು ನೋಡಿ ಮತ್ತೊಂದು ಮದುವೆ ಮಾಡುತ್ತೇನೆ ಎಂದು ಮಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಮದುವೆಯಾದ ದಿನದಿಂದಲೂ ಪ್ರವೀಣ್‌ ಮತ್ತು ಶಾಂತವ್ವ ಹಣಕ್ಕಾಗಿ ಮಗಳನ್ನು ಪೀಡಿಸುತ್ತಿದ್ದರು,'' ಎಂದು ಶಾರದಾ ದೂರಿನಲ್ಲಿಆರೋಪಿಸಿದ್ದಾರೆ.

'ಪ್ರವೀಣ್‌, ಹೊಸದಾಗಿ ಚಾಟ್ಸ್‌ ಅಂಗಡಿ ತೆರೆಯಲು ತವರು ಮನೆಯಿಂದ 5 ಲಕ್ಷ ರೂ. ತರುವಂತೆ ಮಗಳಿಗೆ ಕಿರುಕುಳ ಕೊಡುತ್ತಿದ್ದ. ಅಲ್ಲದೆ, ತಾಯಿಯ ಜತೆ ಸೇರಿ ಆರು ತಿಂಗಳ ಹಿಂದೆ ಮಗಳ ಮೇಲೆ ಹಲ್ಲೆನಡೆಸಿ ಮನೆಯಿಂದ ಹೊರ ಹಾಕಿದ್ದ. ಮಗಳ ಸಾವಿಗೆ ಅವರಿಬ್ಬರೇ ಕಾರಣ ಎಂದು ಶಿಲ್ಪಾ ತಾಯಿ ಶಾರದಾ ದೂರು ನೀಡಿದ್ದಾರೆ. ಪೊಲೀಸರು ವರದಕ್ಷಿಣೆ ಸಾವು ಪ್ರಕರಣ ದಾಖಲಿಸಿಕೊಂಡು ಪ್ರವೀಣ್‌ನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮರಳು ಮಾಫಿಯಾ ವಿರುದ್ಧ ಸಿಡಿದೆದ್ದ ಸಿಎಂ ಸಲಹೆಗಾರ: ದಂಧೆಕೋರರಿಗೆ ಅಧಿಕಾರಿಗಳೇ ಸಾಥ್, ಕ್ರಮಕ್ಕೆ ಬಸವರಾಜ ರಾಯರೆಡ್ಡಿ ಆಗ್ರಹ

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥ; ಪುತ್ತೂರಿನಲ್ಲಿ ಆಗಿದ್ದೇನು?

ಜಲೇಬಿ, ಬೇಸನ್ ಲಡ್ಡು ತಯಾರಿಸಿದ ರಾಹುಲ್ ಗಾಂಧಿ: ವಿಪಕ್ಷ ನಾಯಕನಿಗೆ ಸ್ವೀಟ್ ಅಂಗಡಿ ಮಾಲೀಕ ನೀಡಿದ ಸಲಹೆ ಏನು ಗೊತ್ತೆ?

'ಶೋಲೆ' ಖ್ಯಾತಿಯ ಬಾಲಿವುಡ್ ನಟ ಗೋವರ್ಧನ್ ಅಸ್ರಾನಿ ವಿಧಿವಶ

Israel ಸೈನಿಕರ ಹತ್ಯೆಯ ನಂತರ ಮುರಿದುಬಿದ್ದ ಕದನ ವಿರಾಮ: ಗಾಜಾದ ಮೇಲೆ ಇಸ್ರೇಲ್ ವಾಯುದಾಳಿಯಲ್ಲಿ 45 ಮಂದಿ ಸಾವು!

SCROLL FOR NEXT