ಶುಭಾಂಶು ಶುಕ್ಲಾ 
ರಾಜ್ಯ

ಶೀಘ್ರದಲ್ಲೇ ಭಾರತೀಯನೊಬ್ಬ ಚಂದ್ರನ ಮೇಲೆ ಕಾಲಿಡುತ್ತಾನೆ: ಗಗನಯಾತ್ರಿ ಶುಭಾಂಶು ಶುಕ್ಲಾ

ನನ್ನ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ತರಗತಿಯ ಮೇಜಿನ ಮೇಲೆ ಅರ್ಜಿಯನ್ನು ಬಿಟ್ಟಿದ್ದರು. ಅದನ್ನು ನಾನು ಭರ್ತಿ ಮಾಡಿದ್ದೆ. ಬಳಿಕ ನಾನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆಯಾದೆ.

ಬೆಂಗಳೂರು: ಶೀಘ್ರದಲ್ಲೇ ಭಾರತೀಯನೊಬ್ಬ ಚಂದ್ರನ ಮೇಲೆ ಕಾಲಿಡಲಿದ್ದು, ಭಾರತೀಯ ನಿರ್ಮಿತ ಉಡಾವಣಾ ವಾಹನ ಮತ್ತು ಉಪಗ್ರಹದಲ್ಲಿ ಸುರಕ್ಷಿತವಾಗಿ ಹಿಂತಿರುಗುತ್ತಾನೆಂದು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರಿನ ಸರ್ಜಾಪುರದ ಸೇಂಟ್ ಫಿಲೋಮಿನಾ ಪಬ್ಲಿಕ್ ಶಾಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಭಾರತೀಯನೊಬ್ಬ ಬಾಹ್ಯಾಕಾಶಕ್ಕೆ ಹೋಗಲು 41 ವರ್ಷ ಸಮಯ ಬೇಕಾಗಿತ್ತು. 1984ರಲ್ಲಿ ಗ್ರೂಪ್ ಕ್ಯಾಪ್ಟನ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ, ಈಗ ಬಾಹ್ಯಾಕಾಶಕ್ಕೆ ಹೋಗಲು ಅಷ್ಟು ಸಮಯ ಬೇಕಾಗುವುದಿಲ್ಲ ಎಂದು ಹೇಳಿದ್ದಾರೆ.

ನಾನು ಬೆಳೆಯುತ್ತಿರುವಾಗ ಗಗಯಾತ್ರಿಯಾಗುವ ಆಲೋಚನೆ ಇರಲಿಲ್ಲ. ಆಗುತ್ತೇನೆಂದೂ ಭಾವಿಸಿರಲಿಲ್ಲ. 1984 ರಲ್ಲಿ ಮೊದಲ ಭಾರತೀಯ ಬಾಹ್ಯಾಕಾಶಕ್ಕೆ ಹೋದಾಗ, ನಾನು ಹುಟ್ಟಿಯೂ ಇರಲಿಲ್ಲ. ಆದರೆ, ವಿಚಾರ ತಿಳಿದುಕೊಂಡಾಗ ಆಕರ್ಷಿತನಾದೆ. ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಸೇರುವ ಉದ್ದೇಶವೂ ನನಗಿರಲಿಲ್ಲ.

ನನ್ನ ಸ್ನೇಹಿತರೊಬ್ಬರು ಅರ್ಜಿ ಸಲ್ಲಿಸಲು ಸಾಧ್ಯವಾಗದೆ, ತರಗತಿಯ ಮೇಜಿನ ಮೇಲೆ ಅರ್ಜಿಯನ್ನು ಬಿಟ್ಟಿದ್ದರು. ಅದನ್ನು ನಾನು ಭರ್ತಿ ಮಾಡಿದ್ದೆ. ಬಳಿಕ ನಾನು ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆಯಾದೆ. ಪೈಲಟ್ ಆದೆ ಎಂದು ತಿಳಿಸಿದರು.

2018 ರಲ್ಲಿ ಭಾರತೀಯರು ಶೀಘ್ರದಲ್ಲೇ ಬಾಹ್ಯಾಕಾಶಕ್ಕೆ ಹೋಗುತ್ತಾರೆ ಎಂಬ ಪ್ರಧಾನಿಯವರ ಘೋಷಣೆಯನ್ನು ಕೇಳಿದಾಗ, 2019 ರಲ್ಲಿ ಆಯ್ಕೆಗಳು ಪ್ರಾರಂಭವಾದಾಗ ನಾನು ಉತ್ಸುಕನಾಗಿದ್ದೆ. 2019 ರಲ್ಲಿ ಅರ್ಜಿ ಸಲ್ಲಿಸಬಹುದಾದ ಸ್ಥಳದಲ್ಲಿದ್ದೆ, ಅಲ್ಲಿಂದ ಗಗನಯಾತ್ರಿಯಾಗಿ ನನ್ನ ಪ್ರಯಾಣ ಪ್ರಾರಂಭವಾಯಿತು ಎಂದು ತಮ್ಮ ಪಯಣವನ್ನು ಸ್ಮರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹತ್ಯೆಗೆ ಸಂಚು ರೂಪಿಸಿದರೆ ಇರಾನ್ 'ಈ ಭೂಮಿ ಮೇಲಿಂದ ನಾಶವಾಗುತ್ತದೆ': Donal Trump

ಸನಾತನ ಧರ್ಮ ಕುರಿತ ಉದಯನಿಧಿ ಹೇಳಿಕೆ ದ್ವೇಷ ಭಾಷಣಕ್ಕೆ ಸಮ: ಹಿಂದೂ ಧರ್ಮದ ಮೇಲಿನ ಸ್ಪಷ್ಟ ದಾಳಿ; ಮದ್ರಾಸ್ ಹೈಕೋರ್ಟ್ ತಪರಾಕಿ

ಯುಪಿಐ ಟಿಕೆಟ್ ಸ್ಕ್ಯಾನರ್ ದುರುಪಯೋಗ: ಮೂವರು ನಿರ್ವಾಹಕರನ್ನು ಅಮಾನತುಗೊಳಿಸಿದ BMTC

"ಹಣಕಾಸು ಯೋಜನೆಗಳನ್ನು ಉತ್ತೇಜಿಸಲು ನನ್ನ ಇಮೇಜ್, ಧ್ವನಿ ಬಳಸಿ ನಕಲಿ ವಿಡಿಯೋ, ನಂಬಬೇಡಿ"; ಸುಧಾ ಮೂರ್ತಿ ಸ್ಪಷ್ಟನೆ

'ಭಾರತ-ಪಾಕಿಸ್ತಾನ ಯುದ್ಧ' ಬಗ್ಗೆ ಟ್ರಂಪ್ ಹೇಳುತ್ತಿರುವುದು ಇದು 70ನೇ ಸಲ, ಇನ್ನಾದರೂ ಮಾತನಾಡಿ: ಕೇಂದ್ರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

SCROLL FOR NEXT