ಸ್ವಂತ ಬಾಹ್ಯಾಕಾಶ ಕೇಂದ್ರ ಸ್ಥಾಪನೆಗೆ ಭಾರತ ಚಿಂತನೆ: ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ

“ಭಾರತ ಇಂದಿಗೂ ಬಾಹ್ಯಾಕಾಶದಿಂದ ಅತ್ಯಂತ ಸುಂದರವಾಗಿ ಕಾಣುತ್ತದೆ ಜೈ ಹಿಂದ್, ಜೈ ಭಾರತ್'' ಎಂದು ಹೇಳಿದರು.
Astronaut Shubhanshu Shukla during the press meet
ದೆಹಲಿಯ ರೈಸಿನಾ ರಸ್ತೆಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಗಗನಯಾನ ಮಿಷನ್‌ನ ಪತ್ರಿಕಾಗೋಷ್ಠಿಯಲ್ಲಿ ಗಗನಯಾತ್ರಿ ಶುಭಾಂಶು ಶುಕ್ಲಾ
Updated on

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮಾದರಿಯಲ್ಲಿ ಭಾರತ ತನ್ನದೇ ಆದ ಭಾರತ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಗಗನಯಾತ್ರಿ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ತಮ್ಮ ಮೊದಲ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕ್ಸಿಯಮ್ -4 ಕಾರ್ಯಾಚರಣೆಯನ್ನು ಸುಗಮಗೊಳಿಸಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಇಸ್ರೋ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.

“ಭಾರತ ಇಂದಿಗೂ ಬಾಹ್ಯಾಕಾಶದಿಂದ ಅತ್ಯಂತ ಸುಂದರವಾಗಿ ಕಾಣುತ್ತದೆ ಜೈ ಹಿಂದ್, ಜೈ ಭಾರತ್'' ಎಂದು ಹೇಳಿದರು.

ಶುಭಾಂಶು ಶುಕ್ಲಾ ಪಯಣ

ಜೂನ್ 26 ರಂದು ಶುಭಾಂಶು ಶುಕ್ಲಾ ಐಎಸ್ ಎಸ್ ನಲ್ಲಿ ಡಾಕ್ ಮಾಡಿ ಜುಲೈ 15 ರಂದು ಭೂಮಿಗೆ ಮರಳಿದರು. ಅವರು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಪಯಣ ನಡೆಸಿದ್ದರು. ಬಾಹ್ಯಾಕಾಶದಲ್ಲಿ ಅವರ ವಾಸ್ತವ್ಯದ ಸಮಯದಲ್ಲಿ, ಅವರು ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಇಸ್ರೋ ಅಧ್ಯಕ್ಷರೊಂದಿಗೆ ಸಂವಹನ ನಡೆಸಿದ್ದರು.

ಅನ್‌ಡಾಕ್ ಮತ್ತು ಸ್ಪ್ಲಾಶ್‌ಡೌನ್ ನಂತರ, ಶುಭಾಂಶು ಶುಕ್ಲಾ ಜುಲೈ 15-22 ರಿಂದ ಪುನರ್ವಸತಿಗೆ, ಆಗಸ್ಟ್ 1-13 ರವರೆಗೆ ಮಿಷನ್ ಡಿಬ್ರೀಫಿಂಗ್‌ಗೆ ಒಳಗಾಗಿ ಆಗಸ್ಟ್ 17 ರಂದು ಭಾರತಕ್ಕೆ ಮರಳಿದ್ದರು.

ಐಎಸ್ಎಸ್ ಕಾರ್ಯಾಚರಣೆಯಲ್ಲಿ ಇಸ್ರೋ ಪ್ರಮುಖ ಪಾತ್ರ ವಹಿಸಿದ್ದು, ಸಕಾಲಿಕ ಆಮ್ಲಜನಕ ಸೋರಿಕೆಯನ್ನು ಪತ್ತೆಹಚ್ಚುವ ಮೂಲಕ, ಇದು ಕಾರ್ಯಾಚರಣೆಯನ್ನು ವಿಳಂಬಗೊಳಿಸಿ ಅಂತಿಮವಾಗಿ ಸಂಭಾವ್ಯ ವಿಪತ್ತನ್ನು ತಡೆಯಿತು. ಆರಂಭದಲ್ಲಿ ಜೂನ್ 11 ರಂದು ಈ ಕಾರ್ಯಾಚರಣೆಯನ್ನು ಗುರಿಯಾಗಿರಿಸಿಕೊಳ್ಳಲಾಗಿತ್ತು, ಜೂನ್ 10 ರಂದು ಇಸ್ರೋ ದೋಷವನ್ನು ಪತ್ತೆಹಚ್ಚಿ ಬಾಹ್ಯಾಕಾಶ ಯಾನ ವಿಳಂಬಕ್ಕೆ ಕಾರಣವಾಗಿತ್ತು.

Astronaut Shubhanshu Shukla during the press meet
ಭಾರತದ ಗಗನಯಾನ ಮಿಷನ್‌ ಬಗ್ಗೆ ವಿಶ್ವದ ಆಸಕ್ತಿ ಹೆಚ್ಚಾಗಿದೆ: ಪ್ರಧಾನಿ ಮೋದಿ ಜೊತೆ ತಮ್ಮ ಅನುಭವ ಹಂಚಿಕೊಂಡ ಶುಭಾಂಶು ಶುಕ್ಲಾ

ಇಸ್ರೊ ಪಾತ್ರ

ಫಾಲ್ಕನ್ -9 ರಾಕೆಟ್‌ನ ಮೊದಲ ಹಂತದಲ್ಲಿ ಕಂಡುಬಂದ ದ್ರವ ಆಮ್ಲಜನಕ ಸೋರಿಕೆಯನ್ನು ಪರಿಹರಿಸುವ ಮೂಲಕ ಕಾರ್ಯಾಚರಣೆಯ ಸುರಕ್ಷಿತ ಉಡಾವಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಇಸ್ರೋದ ತಾಂತ್ರಿಕ ಪರಿಣತಿಯು ಪ್ರಮುಖ ಪಾತ್ರ ವಹಿಸಿ ದುರಂತದ ವೈಫಲ್ಯವನ್ನು ತಪ್ಪಿಸಿತು ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣ ಹೇಳಿದ್ದಾರೆ. ಇಸ್ರೋ ತಂಡವು ನಾಲ್ಕು ಗಗನಯಾತ್ರಿಗಳ ಜೀವ ಉಳಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣ ಹೇಳಿದ್ದಾರೆ.

ಐಎಸ್ಎಸ್ ಮಿಷನ್, ಕಾರ್ಯಾಚರಣಾ ಕಾರ್ಯವಿಧಾನಗಳು ಮತ್ತು ತಾಂತ್ರಿಕ ಪ್ರೋಟೋಕಾಲ್‌ಗಳ ಕಲಿಕೆಗಳು ಗಗನಯಾನ ಮತ್ತು ಭಾರತೀಯ ಅಂತರಿಕ್ಷ ನಿಲ್ದಾಣ ಕಾರ್ಯಕ್ರಮಗಳ ಉಡಾವಣೆಗೆ ಸಹಾಯ ಮಾಡುತ್ತವೆ ಎಂದು ಇಸ್ರೋ ಮುಖ್ಯಸ್ಥರು ಒತ್ತಿ ಹೇಳಿದರು.

ಐಎಸ್ಎಸ್‌ನಲ್ಲಿದ್ದ ಸಮಯದಲ್ಲಿ, ಶುಕ್ಲಾ ಮಾನವ ಆರೋಗ್ಯ, ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ಕೃಷಿ, ಅರಿವಿನ ವಿಜ್ಞಾನ, ಗಗನಯಾತ್ರಿ ಪೋಷಣೆ, ಬಾಹ್ಯಾಕಾಶ ಜೀವಶಾಸ್ತ್ರ ಮತ್ತು ಜೈವಿಕ ಪುನರುತ್ಪಾದಕ ಜೀವನ ಬೆಂಬಲ ವ್ಯವಸ್ಥೆಗಳ ಮೇಲೆ ಕೇಂದ್ರೀಕರಿಸಿದ ಏಳು ಸೂಕ್ಷ್ಮ ಗುರುತ್ವಾಕರ್ಷಣೆಯ ಪ್ರಯೋಗಗಳನ್ನು ನಡೆಸಿದರು. ಈ ಸಂಶೋಧನೆಯು ಭಾರತೀಯ ವಿಜ್ಞಾನ ಮತ್ತು ಸಂಶೋಧನೆಗೆ ಅಪಾರ ಪ್ರಮಾಣದ ದತ್ತಾಂಶವನ್ನು ಒದಗಿಸಲಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com