ಸಿಎಂ ಸಿದ್ದರಾಮಯ್ಯ  
ರಾಜ್ಯ

ರಾಜ್ಯದಲ್ಲಿ 2.84 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆ ಖಾಲಿ; ನೇಮಕಾತಿಗೆ ಒಲವು ತೋರದ ಸರ್ಕಾರ

ಅತಿಥಿ ಶಿಕ್ಷಕರಿಂದ ಮಕ್ಕಳಿಗೆ ಪಾಠ, ಸಿಬ್ಬಂದಿ ಕೊರತೆ ಕಾರಣ ಆಸ್ಪತ್ರೆಗಳಿಂದ ರೋಗಿಗಳು ವಾಪಸಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ "ನಿರ್ಲಕ್ಷ್ಯ" ಮನಸ್ಥಿತಿಯನ್ನು ತೋರುತ್ತದೆ.

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 2.84 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಸ್ವತಃ ರಾಜ್ಯ ಸರ್ಕಾರವೇ ಸದನದಲ್ಲಿ ಒಪ್ಪಿಕೊಂಡಿದೆ. ಆದರೆ, ಆರ್ಥಿಕ ಸಂಕಷ್ಟದ ಕಾರಣ ನೀಡಿರುವ ಸರ್ಕಾರ, ಶಾಲೆಯಿಂದ ಆಸ್ಪತ್ರೆಗಳವರೆಗೂ ಹಲವು ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗಳು ಖಾಲಿಯಿವೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 79,600 ಹುದ್ದೆಗಳು, ಅತಿ ಹೆಚ್ಚು ಪ್ರಮಾಣದಲ್ಲಿ ಹುದ್ದೆಗಳು ಖಾಲಿಯಿರುವ ಇಲಾಖೆಯಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,000 ಹುದ್ದೆಗಳು ಖಾಲಿಯಾಗಿದ್ದರೆ, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,600 ಉಪನ್ಯಾಸಕರ ಹುದ್ದೆಗಳು ಭರ್ತಿಯಾಗಿಲ್ಲ.

ಪಶುಸಂಗೋಪನೆ ಇಲಾಖೆಯಲ್ಲಿ 11,000 ಹುದ್ದೆಗಳು ಖಾಲಿಯಾಗಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,500, ಹಣಕಾಸು ಇಲಾಖೆಯಲ್ಲಿ 7,600, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆಯಲ್ಲಿ 7,600, ಕೃಷಿ ಇಲಾಖೆಯಲ್ಲಿ 6,800, ಅರಣ್ಯ ಇಲಾಖೆಯಲ್ಲಿ 6,400, ಡಿಪಿಎಆರ್ 6,000, ಸಹಕಾರ ಇಲಾಖೆಯಲ್ಲಿ 4,700 ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 3,300 ಹುದ್ದೆಗಳು ಖಾಲಿಯಾಗಿವೆ.

ತನ್ನ "ಮಾದರಿ ಆಡಳಿತ"ದ ಬಗ್ಗೆ ಹೆಮ್ಮೆ ಪಡುವ ರಾಜ್ಯದಲ್ಲಿ ಅದು ಸುಮಾರು ಮೂರು ಲಕ್ಷ ಹುದ್ದೆಗಳು ಭರ್ತಿಯಾಗದೆ ಉಳಿದಿವೆ, ಅತಿಥಿ ಶಿಕ್ಷಕರಿಂದ ಮಕ್ಕಳಿಗೆ ಪಾಠ , ಸಿಬ್ಬಂದಿ ಕೊರತೆ ಕಾರಣ ಆಸ್ಪತ್ರೆಗಳಿಂದ ರೋಗಿಗಳು ವಾಪಸಾಗುತ್ತಿರುವುದು ಕಾಂಗ್ರೆಸ್ ಸರ್ಕಾರದ "ನಿರ್ಲಕ್ಷ್ಯ" ಮನಸ್ಥಿತಿಯನ್ನು ತೋರುತ್ತದೆ ಪ್ರತಿಪಕ್ಷ ಆರೋಪಿಸಿದೆ, ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಿಲ್ಲ, ಆದರೆ ಸರ್ಕಾರವು ಖಾತರಿಗಳ ಮೇಲೆ ದುಂದುವೆಚ್ಚ ಮಾಡುತ್ತಿದೆ ಎಂದು ಆರೋಪಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿದೆ", "ಕೆಪಿಎಸ್‌ಸಿ ವಿಳಂಬ", "ಬಜೆಟ್ ನಿರ್ಬಂಧಗಳು ಎಂದು ಸಚಿವರು ಖಾಲಿ ಸಬೂಬೂ ನೀಡುತ್ತಿದ್ದಾರೆ. ಆದರೆ ಸತ್ಯವೆಂದರೆ ಕರ್ನಾಟಕವು ವರ್ಷಗಳಿಂದ "ಶಾಶ್ವತ ಉದ್ಯೋಗಗಳು" ಎಂದು ಜಾಹೀರಾತು ನೀಡುತ್ತಿದೆ. ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿಯಿಂದ ಸದ್ದಿಲ್ಲದೆ ರಾಜ್ಯವನ್ನು ನಡೆಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಕೇವಲ ಎರಡು ವರ್ಷಗಳು ಬಾಕಿ ಇರುವಾಗ, ಸರ್ಕಾರವು ವಿರೋಧ ಪಕ್ಷಕ್ಕೆ ತೀಕ್ಷ್ಣವಾದ ಅಸ್ತ್ರವನ್ನು ಹಸ್ತಾಂತರಿಸಿದಂತೆ ಕಾಣುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ ಉದ್ಘಾಟನೆ

ಒಟ್ಟಾರೆ 320 ಕೋಟಿ ಆಸ್ತಿ ಮುಟ್ಟುಗೋಲು: ಕರ್ನಾಟಕ Congress ಶಾಸಕ, ಸಹಚರರು ಅಕ್ರಮ ಬೆಟ್ಟಿಂಗ್ ಜಾಲದ 'ಮಾಸ್ಟರ್ ಮೈಂಡ್'; ED

Indian Armyಗೆ 2 ದೀರ್ಘ-ಶ್ರೇಣಿಯ 'Suryastra' ರಾಕೆಟ್ ಲಾಂಚರ್‌ ಸೇರ್ಪಡೆ, ಶೀಘ್ರ live-fire ಪ್ರಯೋಗ!

ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಚಿಕಿತ್ಸೆ ನೀಡುವಂತಿಲ್ಲ: ಸಚಿವ ದಿನೇಶ್ ಗುಂಡೂರಾವ್

ಪ್ರಧಾನಿ ಮೋದಿ ಭೇಟಿಯಾದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ: ಬಜೆಟ್ ಅನುದಾನ ಕುರಿತು ಚರ್ಚೆ!

SCROLL FOR NEXT