ಪುಟ್ಟರಂಗಶೆಟ್ಟಿ 
ರಾಜ್ಯ

25 ಲಕ್ಷ ರೂ ಲಂಚ ಪಡೆದ ಆರೋಪ: ಮಾಜಿ ಸಚಿವ ಪುಟ್ಟರಂಗ ಶೆಟ್ಟಿ ವಿರುದ್ಧ ಸೂಕ್ತ ತನಿಖೆಗೆ ವಿಶೇಷ ನ್ಯಾಯಾಲಯ ಆಗ್ರಹ

ಮೋಹನ್ ಕುಮಾರ್, ಅನಂತ ಶಂಕರ್, ಶ್ರೀನಿಧಿ, ನಂದನ, ಮಂಜುನಾಥ ಮತ್ತು ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಸಚಿವರಾಗಿದ್ದ ಸಿ. ಪುಟ್ಟರಂಗ ಶೆಟ್ಟಿ ವಿರುದ್ಧದ ಆರೋಪಗಳ ಕುರಿತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಆರೋಪಪಟ್ಟಿಯನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚಿನ ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ವಿಶೇಷ ಲೋಕಾಯುಕ್ತ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶಿಸಿದೆ.

2019 ರ ಜನವರಿಯಲ್ಲಿ ವಿಧಾನಸೌಧದಲ್ಲಿ ಶೆಟ್ಟಿ ಅವರ ಆಪ್ತ ಸಹಾಯಕನಿಂದ 25.76 ಲಕ್ಷ ರೂ.ಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಸಚಿವರು ಮತ್ತು ಗುತ್ತಿಗೆದಾರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಶುಕ್ರವಾರ ಆದೇಶ ಹೊರಡಿಸಿದರು, ಆದರೆ ಶೆಟ್ಟಿ ಅವರ ಆಪ್ತ ಸಹಾಯಕ ಎಸ್.ಜೆ. ಮೋಹನ್ ಕುಮಾರ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಧಾನಸೌಧ ಪೊಲೀಸರು ದಾಖಲಿಸಿದ್ದ ಪ್ರಕರಣದಿಂದ ಬಿಡುಗಡೆ ಮಾಡಲು ನ್ಯಾಯಾಲಯ ನಿರಾಕರಿಸಿದೆ, ಮೋಹನ್ ಕುಮಾರ್ ಅವರ ಬಳಿ ಹಣವಿರುವ ಚೀಲ ಪತ್ತೆಯಾಗಿತ್ತು.

ಮೋಹನ್ ಕುಮಾರ್, ಅನಂತ ಶಂಕರ್, ಶ್ರೀನಿಧಿ, ನಂದನ, ಮಂಜುನಾಥ ಮತ್ತು ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ನಂತರ ಎಸಿಬಿ ರದ್ದುಗೊಳಿಸಿದ ಕಾರಣ, ಪ್ರಕರಣವನ್ನು ಬೆಂಗಳೂರು ವಿಭಾಗ ಲೋಕಾಯುಕ್ತ ಪೊಲೀಸರಿಗೆ ವರ್ಗಾಯಿಸಲಾಯಿತು. ಅವರು ಮೋಹನ್ ಕುಮಾರ್ ವಿರುದ್ಧ ಮಾತ್ರ ಆರೋಪಪಟ್ಟಿ ಸಲ್ಲಿಸಿ, ಯಾವುದೇ ಸಾಕ್ಷಿ ಕಂಡುಬಂದಿಲ್ಲ ಎಂದು ಹೇಳಿ ಇತರ ಐದು ಆರೋಪಿಗಳನ್ನು ಕೈಬಿಟ್ಟರು. ಮತ್ತು ಪುಟ್ಟರಂಗ ಶೆಟ್ಟಿಯನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು.

ಜನವರಿ 3 ಮತ್ತು 4, 2019 ರಂದು ಮೋಹನ್ ಕುಮಾರ್ ಬಳಿ 25.76 ಲಕ್ಷ ರೂ. ಹಣ ಪತ್ತೆಯಾಗಿತ್ತು. ಈ ಹಣ ವಿವಿಧ ಗುತ್ತಿಗೆದಾರರಿಂದ ಸಂಗ್ರಹಿಸಿದ ಅಕ್ರಮ ಸಂಪಾದನೆಯಾಗಿದೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ನಾಗರಿಕ ಕಾಮಗಾರಿಗಳಿಗೆ ಅನುದಾನ ಪಡೆಯಲು ಸಚಿವರ ಮೇಲೆ ಪ್ರಭಾವ ಬೀರಲು ಹಣ ಪಾವತಿಸಬೇಕಾಗಿತ್ತು.

ನ್ಯಾಯಾಲಯದ ಮುಂದೆ ಇರಿಸಲಾದ ವಸ್ತುಗಳು ಅರ್ಜಿದಾರರ ವಿರುದ್ಧ ಮಾತ್ರವಲ್ಲದೆ ಆರೋಪಪಟ್ಟಿಯಿಂದ ಕೈಬಿಡಲಾದವರ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಕಷ್ಟು ಪುರಾವೆಗಳನ್ನು ಸೂಚಿಸುತ್ತವೆ ಎಂದು ಸಾರ್ವಜನಿಕ ಅಭಿಯೋಜಕರು ವಾದಿಸಿದರು.

ಸೆಕ್ಷನ್ 164 CRPC ಅಡಿಯಲ್ಲಿ ನಂದನ (A4) ಮತ್ತು ಮಂಜುನಾಥ (A5) ಅವರ ಹೇಳಿಕೆಗಳನ್ನು ಉಲ್ಲೇಖಿಸಲಾಗಿದೆ. ಜ್ಯೋತಿ ಪ್ರಕಾಶ್ ಮತ್ತು ಸತೀಶ್ ಎಂಬುವರಿಂದ 9 ಲಕ್ಷ ರೂ., ರಾಜು ಮತ್ತು ಉಮೇಶ್ 7 ಲಕ್ಷ ರೂ. ಹಾಗೂ ಯೋಗೇಶ್ ಬಾಬು ಎಂಬುವರಿಂದ 2 ಲಕ್ಷ ರೂ. ಹಣ ಪಡೆದಿದ್ದ ಗುತ್ತಿಗೆದಾರರು ಈ ಆರೋಪಿಗಳ ಮೂಲಕ ಮೋಹನ್ ಕುಮಾರ್‌ಗೆ 3.5 ಲಕ್ಷ ರೂ. ಪಾವತಿಸಿದ್ದಾರೆ ಎಂದು ದಾಖಲೆ ಬಹಿರಂಗಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT