ಹುಣ್ಣಿಗೆರೆ ವಿಲ್ಲಾಗಳು 
ರಾಜ್ಯ

BDA: ಹುಣ್ಣಿಗೆರೆ ವಸತಿ ಯೋಜನೆಯ 80 ವಿಲ್ಲಾಗಳ ಹರಾಜಿಗೆ ಸಜ್ಜು

ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವಿನ ದಾಸನಪುರ ಹೋಬಳಿಯಲ್ಲಿರುವ ಈ ಯೋಜನೆಯು 322 ವಿಲ್ಲಾಗಳನ್ನು ಹೊಂದಿದೆ.

ಬೆಂಗಳೂರು: ದಾಸನಪುರ ಹೋಬಳಿಯ ಹುಣ್ಣಿಗೆರೆ ಗ್ರಾಮದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಮನೆಗಳ ಮಾದರಿಯ 80 ವಿಲ್ಲಾಗಳ ಹರಾಜಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಜ್ಜಾಗಿದೆ.

ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವಿನ ದಾಸನಪುರ ಹೋಬಳಿಯಲ್ಲಿರುವ ಈ ಯೋಜನೆಯು 322 ವಿಲ್ಲಾಗಳನ್ನು ಹೊಂದಿದೆ.

ಈ ಯೋಜನೆಯು 172 4BHK ಮತ್ತು 150 3BHK ವಿಲ್ಲಾಗಳನ್ನು ಒಳಗೊಂಡಿದೆ ಮತ್ತು ಆರು ತಿಂಗಳ ಹಿಂದೆ ಮಾರಾಟ ಪ್ರಕ್ರಿಯೆ ಆರಂಭಿಸಬೇಕಿತ್ತು. ಆದರೆ ಅಂತಿಮವಾಗಿ ಈಗ ಹರಾಜಿಗೆ ನಿರ್ಧರಿಸಿದೆ.

“ನಾವು ಇತ್ತೀಚೆಗೆ ಹುಣ್ಣಿಗೆರೆ ಯೋಜನೆಗೆ ಆಕ್ಯುಪೆನ್ಸಿ ಪ್ರಮಾಣಪತ್ರ ಮತ್ತು ಪ್ರಾರಂಭ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದೇವೆ. ಅದರ ನಂತರ, ನಾವು ಈ ವಿಲ್ಲಾಗಳ ಬೇಡಿಕೆಯನ್ನು ನಿರ್ಣಯಿಸಲು ಬಯಸಿದ್ದೇವೆ ಮತ್ತು ಕೇವಲ ಮೂರು 4BHK ಮತ್ತು 3 BHKಗೆ ಸಣ್ಣ ಇ-ಹರಾಜನ್ನು ನಡೆಸಿದ್ದೇವೆ ಎಂದು ಬಿಡಿಎ ಉನ್ನತ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

4BHK ಗೆ ಅತ್ಯಧಿಕ ಬಿಡ್ 1.35 ಕೋಟಿ ರೂ.ಗಳಾಗಿದ್ದರೆ, 3BHK ಗೆ ಗರಿಷ್ಠ ಬಿಡ್ 1.14 ಕೋಟಿ ರೂ.ಗಳಾಗಿತ್ತು. ಈ ಫಲಿತಾಂಶ ಉತ್ತೇಜನಕಾರಿಯಾಗಿದೆ ಮತ್ತು ನಮ್ಮ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ ಬಂದಿದೆ. ನಾವು ಈಗ ಈ ಅಂಕಿಅಂಶಗಳನ್ನು ವಿಲ್ಲಾಗಳ ವೆಚ್ಚವಾಗಿ ನಿಗದಿಪಡಿಸಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಬಿಡಿಎ ಶೀಘ್ರದಲ್ಲೇ 80 ವಿಲ್ಲಾಗಳನ್ನು ಹರಾಜು ಹಾಕಲಿದ್ದು, ಅವುಗಳಲ್ಲಿ 50 4BHK ಇವೆ. ಈ ಸಂಬಂಧ ಪ್ರಸ್ತಾವನೆಯನ್ನು ಬಿಡಿಎ ಆಯುಕ್ತರಿಗೆ ಕಳುಹಿಸಲಾಗಿದೆ ಮತ್ತು ಅವರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಮನೆಗಳಿಗೆ ಪಾರ್ಕಿಂಗ್ ಸ್ಥಳದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ, ಡ್ಯುಯಲ್ ಪೈಪ್‌ಲೈನ್ ವ್ಯವಸ್ಥೆ, ಈಜುಕೊಳದೊಂದಿಗೆ ಮನರಂಜನಾ ಕೇಂದ್ರ, ಬ್ಯಾಡ್ಮಿಂಟನ್ ಕೋರ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ, ಎರಡು ರೆಸ್ಟೋರೆಂಟ್‌ಗಳು ಮತ್ತು ಕ್ರೆಚ್ ಈ ವಿಲ್ಲಾಗಳ ವಿಶೇಷವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಮತ್ತೆ ಕಣಿಮಿಣಿಕೆ ಮೇಳ

ಕಳೆದ ವರ್ಷ ಡಿಸೆಂಬರ್ 14 ರಂದು ಬಿಡಿಎ ತನ್ನ ಕಣಿಮಿಣಿಕೆ ವಸತಿ ಯೋಜನೆಯಲ್ಲಿ ನಡೆಸಿದ ದಿನವಿಡೀ ನಡೆದ 'ಫ್ಲಾಟ್ ಮೇಳ'ದಲ್ಲಿ 180 2BHK ಮತ್ತು 3BHK ಮನೆಗಳು ಸ್ಥಳದಲ್ಲೇ ಮಾರಾಟವಾಗುವುದರೊಂದಿಗೆ ದೊಡ್ಡ ಯಶಸ್ಸನ್ನು ಕಂಡಿತು. "ಸಾರ್ವಜನಿಕ ಬೇಡಿಕೆ ಮತ್ತು ನಮಗೆ ದೊರೆತ ಅದ್ಭುತ ಪ್ರತಿಕ್ರಿಯೆಯಿಂದಾಗಿ ನಾವು ಶನಿವಾರ ಮತ್ತೊಂದು ಮೇಳವನ್ನು ಆಯೋಜಿಸುತ್ತಿದ್ದೇವೆ" ಎಂದು ಅಧಿಕಾರಿ ಹೇಳಿದ್ದಾರೆ.

ಒಟ್ಟು 1369 ಫ್ಲಾಟ್‌ಗಳು ಇಲ್ಲಿ ಮಾರಾಟಕ್ಕೆ ಲಭ್ಯವಿವೆ. 2BHK ಫ್ಲಾಟ್‌ಗಳು 25 ಲಕ್ಷದಿಂದ 30 ಲಕ್ಷ ರೂ.ಗಳವರೆಗೆ ಮತ್ತು 3BHK ಫ್ಲಾಟ್‌ಗಳು 40 ಲಕ್ಷದಿಂದ 64 ಲಕ್ಷ ರೂ.ಗಳವರೆಗೆ ಬೆಲೆ ನಿಗದಿ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No shortage of fuel: ಹಾರ್ಮುಜ್ ಜಲಸಂಧಿ ತಲುಪಿಸಬಹುದಾದ ತೈಲಕ್ಕಿಂತ ಹೆಚ್ಚಿನದ್ದು ಬೇರೆಡೆಯಿಂದ ಭಾರತ ತಲುಪಿದೆ; ಪೆಟ್ರೋಲಿಯಂ ಸಚಿವ

ಮಧ್ಯಪ್ರಾಚ್ಯ ಯುದ್ಧಗ್ರಸ್ತ: ತೈಲ, ಅನಿಲ ಪೂರೈಕೆ ವ್ಯತ್ಯಯ ಸಂಕಷ್ಟ; ಆದರೂ ರಹಸ್ಯ'ಭೂಗತ ಗುಹೆ'ಗಳಿಂದ ಭಾರತಕ್ಕೆ No Tension!

ಬ್ರದರ್ ನಿಮಗೆ ತೊಂದರೆಯಾಗಿದ್ದರೆ ಇರಾನ್‌ಗೆ ಹೋಗಿ ಹೋರಾಡಿ: ಯುಪಿ ಪೊಲೀಸ್ ಅಧಿಕಾರಿ ಹೀಗೆ ಹೇಳಿದ್ದು ಯಾರಿಗೆ?

ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ: ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಬಂದ್! ಇಂದಿರಾ ಕ್ಯಾಂಟೀನ್ ನಡೆಯುತ್ತಾ?

ಇಂಧನ ಸುರಕ್ಷತೆ ಕುರಿತು ಇರಾನ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಮೂರು ಬಾರಿ ಮಾತುಕತೆ

SCROLL FOR NEXT