ಕಾಮಗಾರಿ  
ರಾಜ್ಯ

ಬೆಂಗಳೂರು: BDA ಕಾಂಪ್ಲೆಕ್ಸ್ ಕಾಮಗಾರಿಗೆ ಸದಾಶಿವನಗರ ನಿವಾಸಿಗಳಿಂದ ತಡೆ!

ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾದ ಸಂಕೀರ್ಣದ ವಿರುದ್ಧ ಸದಾಶಿವನಗರ ನಿವಾಸಿಗಳ ಕಲ್ಯಾಣ ಸಂಘವು ಕಳೆದ ವರ್ಷ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತ್ತು.

ಬೆಂಗಳೂರು: ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂಬಂತೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಗರದ ಸದಾಶಿವನಗರದಲ್ಲಿ ನಿರ್ಮಾಣ ಯೋಜನೆಯಿಲ್ಲದೆ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದೆ. ಇಲ್ಲಿನ ಜನವಸತಿ ಪ್ರದೇಶದ ಶಾಂತಿಯುತ ಸ್ವರೂಪವನ್ನು ಕಾಪಾಡುವ ಸಲುವಾಗಿ, ನಿವಾಸಿಗಳ ಒಂದು ಭಾಗವು ಹಠಾತ್ತನೆ ಕೆಲಸವನ್ನು ಸ್ಥಗಿತಗೊಳಿಸಿದರು. ಕಳೆದ ಮೂರು ವಾರಗಳಲ್ಲಿ ಅವರು ಕೆಲಸವನ್ನು ನಿಲ್ಲಿಸಿದ್ದು ಇದು ಎರಡನೇ ಬಾರಿಯಾಗಿದೆ.

ಸರಿಸುಮಾರು 10,000 ಚದರ ಅಡಿ ವಿಸ್ತೀರ್ಣದ ಬಿಡಿಎ ನಿವೇಶನವು ಆರ್‌ಎಂವಿ ವಿಸ್ತರಣೆಯ 9 ನೇ ಮುಖ್ಯರಸ್ತೆಯ ಮೊದಲ ಕ್ರಾಸ್‌ನಲ್ಲಿದೆ. 1982 ರಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಳೆಯ ಬಿಡಿಎ ಮಿನಿ ಮಾರುಕಟ್ಟೆಯನ್ನು ಕೆಡವಿದ ನಂತರ ಹೊಸ ಕಟ್ಟಡವು ನಿರ್ಮಾಣವಾಗುತ್ತಿದೆ. ನಗರದಾದ್ಯಂತ ಆರು ಇತರ ಸಂಕೀರ್ಣಗಳೊಂದಿಗೆ ಇದನ್ನು ಏಕಕಾಲದಲ್ಲಿ ಮರು ಅಭಿವೃದ್ಧಿಪಡಿಸಲಾಗುತ್ತಿದೆ. ಎಂಫಾರ್ ಡೆವಲಪರ್ಸ್ ಈ ಕೆಲಸವನ್ನು ಗುತ್ತಿಗೆ ಪಡೆದುಕೊಂಡಿದೆ.

ಪ್ರಭಾವಿ ಜನರ ಪ್ರತೀಕಾರಕ್ಕೆ ಹೆದರಿ, ಹೆಸರು ಹೇಳಲಿಚ್ಛಿಸದೆ ನಿವಾಸಿಗಳು ಈ ಕಟ್ಟಡ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾದ ಸಂಕೀರ್ಣದ ವಿರುದ್ಧ ಸದಾಶಿವನಗರ ನಿವಾಸಿಗಳ ಕಲ್ಯಾಣ ಸಂಘವು ಕಳೆದ ವರ್ಷ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತ್ತು.

ಕಟ್ಟಡ ಮಂಜೂರಾತಿ ಯೋಜನೆಯ ಪ್ರತಿಯನ್ನು ಕೋರಿ ನಿವಾಸಿ ಈಶ್ವರ್ ಚಂದ್ರ ಮುದೇಗೌಡರು ಕಳೆದ ವರ್ಷ ಮೇ8ರಂದು ಆರ್‌ಟಿಐ ಅರ್ಜಿ ಸಲ್ಲಿಸಿದಾಗ ಯೋಜನೆಯ ಬಗ್ಗೆ ಸತ್ಯ ಬಹಿರಂಗವಾಯಿತು. 45 ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಮುದೇಗೌಡರು ಬಿಡಿಎಯ ಸಂಬಂಧಪಟ್ಟ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಿದರು. ಅದಕ್ಕೆ ಅವರಿಗೆ ಇಲ್ಲಿಯವರೆಗೆ, ಯಾವುದೇ ಯೋಜನೆಯನ್ನು ಮಂಜೂರು ಮಾಡಲಾಗಿಲ್ಲ. ಆದ್ದರಿಂದ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಲಿಖಿತ ಉತ್ತರ ಬಂತು.

ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಸೆಕ್ಷನ್ 17 ರ ಅಡಿಯಲ್ಲಿ, ಯಾವುದೇ ಭೂ ಅಭಿವೃದ್ಧಿಗಾಗಿ ಅನುಮತಿ ಪಡೆಯಬೇಕಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಗುತ್ತಿಗೆದಾರರಿಗೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಅನುಮತಿ ನೀಡಲಾಯಿತು.

ಈಗ ನಡೆಯುತ್ತಿರುವ ಕೆಲಸ ವಿರುದ್ಧ ಬಿಡಿಎ ಮತ್ತು ಬಿಬಿಎಂಪಿಯಲ್ಲಿ ನಿವಾಸಿಗಳು ದೂರುಗಳನ್ನು ಸಲ್ಲಿಸಿದ್ದಾರೆ. ನಾವು ಗುತ್ತಿಗೆದಾರರಿಗೆ ಅನುಮೋದಿತ ಯೋಜನೆ ಇಲ್ಲ ಎಂದು ಹೇಳಿ ಎರಡು ವಾರಗಳ ಹಿಂದೆ ಕೆಲಸವನ್ನು ನಿಲ್ಲಿಸಿದ್ದೇವೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.

ಕಟ್ಟಡ ಮಂಜೂರಾತಿ ಯೋಜನೆ ಪ್ರಕ್ರಿಯೆಯಲ್ಲಿದೆ ಎಂದು ಬಿಡಿಎ ಎಂಜಿನಿಯರ್‌ನಿಂದ ಪತ್ರವನ್ನು ತಂದ ಬಿಲ್ಡರ್ ಸದ್ದಿಲ್ಲದೆ ಕೆಲಸವನ್ನು ಪ್ರಾರಂಭಿಸಿದರು. ಕೆಲಸ ತಕ್ಷಣ ನಿಲ್ಲಿಸದಿದ್ದರೆ ನಾವು ಲೋಕಾಯುಕ್ತರನ್ನು ಸಂಪರ್ಕಿಸುವುದಾಗಿ ಅವರಿಗೆ ತಿಳಿಸಿದ್ದೇವೆ ಎಂದು ಹೇಳಿದರು.

ಮತ್ತೊಬ್ಬ ನಿವಾಸಿ, ಇದು ಮೂಲತಃ ಸಿಎ ನಿವೇಶನವಾಗಿದೆ. ಇಲ್ಲಿ ಐಷಾರಾಮಿ ಹೋಟೆಲ್ ನಿರ್ಮಿಸುವ ಪ್ರಯತ್ನಗಳಿಗೆ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅನುಮತಿ ನೀಡಿರಲಿಲ್ಲ. ಅಂತಿಮವಾಗಿ ಬಿಡಿಎ ಮಿನಿ ಮಾರುಕಟ್ಟೆಯನ್ನು 1972 ರಲ್ಲಿ ನಿರ್ಮಿಸಲಾಯಿತು. ಸಿಎ ನಿವೇಶನದಲ್ಲಿ ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸಬೇಕಾಗಿದೆ.

ಸಂಕೀರ್ಣವು ಒಂದೇ ಮಹಡಿಯನ್ನು ಹೊಂದಿದ್ದರೆ, ನಮಗೆ ಒಪ್ಪಿಗೆಯಿದೆ. ಆದರೆ ಮಾಲ್‌ನಂತಹ ಬೃಹತ್ ಸಂಕೀರ್ಣ ಬಂದರೆ, ಜನಸಂದಣಿ, ಶಬ್ದ ಮತ್ತು ವಾಹನಗಳ ಪಾರ್ಕಿಂಗ್ ಸುತ್ತಲೂ ಆ ಪ್ರದೇಶದಲ್ಲಿ ಶಾಂತಿಯನ್ನು ಹಾಳು ಮಾಡುತ್ತದೆ. ಕಟ್ಟಡ ಯೋಜನೆಗೆ ಇನ್ನೂ ಅನುಮೋದನೆ ನೀಡಬೇಕಾಗಿದೆ ಎಂದು ಬಿಡಿಎ ಆಯುಕ್ತ ಎನ್ ಜಯರಾಮ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz ಅಷ್ಟೇ ಅಲ್ಲ.. ಬಾಲ ಬಿಚ್ಚಿದ್ರೆ Bab al mandeb ಜಲಸಂಧಿಯನ್ನೂ ಮುಚುತ್ತೇವೆ: ಹೌತಿಗಳು ಬರ್ತಾರೆ ಎಂದು Iran ಎಚ್ಚರಿಕೆ

ಮತ್ತೊಂದು F-18 ಫೈಟರ್ ಜೆಟ್ ಹೊಡೆದುರುಳಿಸಿದ್ದೇವೆ ಎಂದ Iran, ಬೆಚ್ಚಿದ ಅಮೆರಿಕದಿಂದ Fact-Check

ಯುದ್ದದಲ್ಲಿ ಗೆದ್ದು ಕೂಡ ಸೋಲುತ್ತಿರುವ ಅಮೇರಿಕಾ ಮತ್ತು ಚೀನಾ! (ಹಣಕ್ಲಾಸು)

ಮಾನಸಿಕ ನೆಮ್ಮದಿಗೆ 10 ಸಾವಿರ ರೂ, ಸ್ವಯಂ ಆರೈಕೆಗೆ 10 ಸಾವಿರ: 22 ವರ್ಷದ ಬೆಂಗಳೂರು Gen Z ಯುವತಿಯ ಮಾಸಿಕ ಖರ್ಚುವೆಚ್ಚ ವೈರಲ್!

ವಿವಾದದ ನಡುವೆ ಮೈಸೂರಿನ ಮುಕ್ತ ವಿವಿಯಲ್ಲಿ RSS ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

SCROLL FOR NEXT