ತುಮಕೂರಿನ ಬಂಧನ ಕೇಂದ್ರದಲ್ಲಿ ಮಕ್ಕಳ ಜೊತೆ ರಷ್ಯಾ ಮಹಿಳೆ 
ರಾಜ್ಯ

ದುಷ್ಟತನಕ್ಕೆ ಮತ್ತೆ ಗೆಲುವು; ಯಾವುದೇ ಪ್ರಾಣಿಯಿಂದ ತೊಂದರೆಯಾಗಿಲ್ಲ, ಜನರಿಂದ ಮಾತ್ರ ಸಮಸ್ಯೆ: ಗುಹೆಯಲ್ಲಿದ್ದ ರಷ್ಯಾ ಮಹಿಳೆ ಮಾತು; Video

ನಮ್ಮ ಗುಹೆ ಜೀವನ ಮುಗಿದಿದೆ. ನಮ್ಮ ಸ್ನೇಹಶೀಲ ಆರಾಮದಾಯಕ ಮನೆ ಮುರಿದುಹೋಗಿದೆ. ನಮ್ಮನ್ನು ಆಕಾಶವಿಲ್ಲದ, ಹುಲ್ಲು ಇಲ್ಲದ, ಜಲಪಾತವಿಲ್ಲದ, ಹಿಮಾವೃತ ಗಟ್ಟಿಯಾದ ನೆಲದೊಂದಿಗೆ ಜೈಲಿನಲ್ಲಿ ಇರಿಸಲಾಗಿದೆ.

ಕಾರವಾರ: ತನ್ನ ಇಬ್ಬರು ಮಕ್ಕಳ ಜೊತೆ ಗೋಕರ್ಣದ ದೂರದ ಕಾಡಿನಲ್ಲಿ ಗುಹೆಯೊಳಗೆ ವಾಸಿಸುತ್ತಿದ್ದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ ಮತ್ತು ರಷ್ಯಾಕ್ಕೆ ವಾಪಾಸ್‌ ಕಳುಹಿಸುವ ಬಗ್ಗೆ ಸಿದ್ಧತೆಗಳನ್ನು ನಡೆಸಿದ್ದಾರೆ.

ರಕ್ಷಣೆ ಮಾಡಿದ ರಷ್ಯಾ ಮಹಿಳೆಯನ್ನು ನೀನಾ ಕುಟಿನಾ ಎಂದು ಗುರುತಿಸಲಾಗಿದೆ, ಈ ಹಿಂದೆಯೂ ಕೂಡ ಕಾಡಿನ ಅದೇ ಗುಹೆಯಲ್ಲಿ ಹಲವು ಬಾರಿ ಈ ತಾಯಿ ಮಕ್ಕಳು ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಮತೀರ್ಥ ಬೆಟ್ಟದ ದಟ್ಟವಾದ ಕಾಡಿನ ಮಧ್ಯೆ ಈ ಕುಟುಂಬ ಕತ್ತಲಲ್ಲೇ ವಾಸಿಸುತ್ತಿತ್ತು. ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಗುಹೆಯಲ್ಲಿರುವುದು ಕಂಡು ಬಂದಿದೆ.

ರಷ್ಯಾದ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ದಿನಗಳ ಹಿಂದೆ ಪ್ರಕೃತಿಯಸೊಬಗಿನ ಬಗ್ಗೆ ಬರೆದುಕೊಂಡಿದ್ದಾರೆ. ಆಕಾಶ, ಹುಲ್ಲು, ಜಲಪಾತ, ಹಾವುಗಳು ಇತ್ಯಾದಿಗಳಿಂದ ವಸ್ತುಗಳು ಎಷ್ಟು ಸುಂದರವಾಗಿದ್ದವು ಎಂದು ವರ್ಣಿಸಿದ್ದಾರೆ. ಇದೆಲ್ಲವನ್ನೂ ಹಿಮಾವೃತ, ಗಟ್ಟಿಯಾದ ನೆಲದಿಂದ ಬದಲಾಯಿಸಲಾಗಿದೆ, ದುಷ್ಟ ಮತ್ತೆ ಗೆದ್ದಿದೆ ಎಂದು ದುಃಖ ವ್ಯಕ್ತ ಪಡಿಸಿದ್ದಾರೆ.

ನಮ್ಮ ಗುಹೆ ಜೀವನ ಮುಗಿದಿದೆ. ನಮ್ಮ ಸ್ನೇಹಶೀಲ ಆರಾಮದಾಯಕ ಮನೆ ಮುರಿದುಹೋಗಿದೆ. ನಮ್ಮನ್ನು ಆಕಾಶವಿಲ್ಲದ, ಹುಲ್ಲು ಇಲ್ಲದ, ಜಲಪಾತವಿಲ್ಲದ, ಹಿಮಾವೃತ ಗಟ್ಟಿಯಾದ ನೆಲದೊಂದಿಗೆ ಜೈಲಿನಲ್ಲಿ ಇರಿಸಲಾಗಿದೆ, ಅದರ ಮೇಲೆ ನಾವು ಈಗ ಮಳೆ ಮತ್ತು ಹಾವುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮಲಗುತ್ತೇವೆ ಎಂದು ಕುಟಿನಾ ಬೇಸರ ವ್ಯಕ್ತಪಡಿಸಿದ್ದಾರೆ.

ರಷ್ಯಾದ ಮಹಿಳೆ ಮತ್ತು ಆಕೆಯ ಮಕ್ಕಳನ್ನು ರಕ್ಷಿಸಿ ಕುಮುಟಾದಲ್ಲಿರುವ ಆಶ್ರಮಕ್ಕೆ ಕಳುಹಿಸಿದ ಸುಮಾರು ಒಂದು ವಾರದ ನಂತರ, ಕುಟಿನಾ ಅವರನ್ನು ಸೋಮವಾರ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಮುಂದೆ ಹಾಜರುಪಡಿಸಲಾಯಿತು. ಕುಟಿನಾ ಅವರನ್ನು ರಷ್ಯಾಕ್ಕೆ ಕಳುಹಿಸುವವರೆಗೆ ತುಮಕೂರಿನ ಬಂಧನ ಕೇಂದ್ರದಲ್ಲಿ ಇರಿಸಲಾಗುವುದು.

FRRO ಅಧಿಕಾರಿಗಳ ಪ್ರಕಾರ, ಆಕೆ ತನ್ನದೇ ಆದ ಟಿಕೆಟ್ ಖರೀದಿಸಬೇಕಾಗುತ್ತದೆ. ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ಮೂಲದ ಕುಟಿನಾ, ಅಕ್ಟೋಬರ್ 18, 2016 ರಂದು ನೀಡಲಾದ ವ್ಯಾಪಾರ ವೀಸಾದ ಮೂಲಕ ಭಾರತಕ್ಕೆ ಬಂದಿದ್ದರು. ನಂತರ ಆಕೆ ಗೋವಾದ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಭಾರತದಲ್ಲಿ ಹೆಚ್ಚಿನ ಸಮಯ ವಾಸಿಸುತ್ತಿರುವುದು ಕಂಡುಬಂದ ಕಾರಣ, ಕುಟಿನಾ ಅವರಿಗೆ ಏಪ್ರಿಲ್ 19, 2018 ರಂದು ನಿರ್ಗಮನ ಪರವಾನಗಿಯನ್ನು ನೀಡಲಾಯಿತು.

ಅವರ ಪಾಸ್‌ಪೋರ್ಟ್ ಜೂನ್ 6, 2014 ರಂದು ನೀಡಲಾಗಿತ್ತು. ಜೂನ್ 6, 2019 ರಂದು ಅವಧಿ ಮುಗಿದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಹೇಳಿದರು. ಇದಾದ ನಂತರ ಅವರು ನೇಪಾಳಕ್ಕೆ ಹೋಗಿ ಸೆಪ್ಟೆಂಬರ್ 8, 2018 ರಂದು ರಷ್ಯಾಕ್ಕೆ ತೆರಳಿದರು. ನೇಪಾಳ ಮೂಲಕ ಮತ್ತೆ ಗೋಕರ್ಣಕ್ಕೆ ಮರಳಿದರು ಎಂದು ಎಸ್ಪಿ ಹೇಳಿದರು.ಬಂಧನ ಕೇಂದ್ರದಲ್ಲಿ ಕುಟಿನಾ ದಿಗ್ಭ್ರಮೆಗೊಂಡಿದ್ದಾರೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ತೆರೆದ ಆಕಾಶದ ಅಡಿಯಲ್ಲಿ ಕಾಡಿನಲ್ಲಿ ವಾಸಿಸುವ ಹಲವು ವರ್ಷಗಳು ವಾಸಿಸಿದ್ದೇನೆ.

ಅದರ ಅನುಭವದ ಆಧಾರದ ಮೇಲೆ ನಾನು ನಿಮ್ಮೊಂದಿಗೆ ಜ್ಞಾನವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಯಾವುದೇ ಹಾವು ನಮಗೆ ಕಚ್ಚಿಲ್ಲ. ಯಾವುದೇ ಪ್ರಾಣಿ ದಾಳಿ ಮಾಡಿಲ್ಲ. ಹಲವು ವರ್ಷಗಳಿಂದ ನಾವು ಜನರಿಗೆ ಮಾತ್ರ ಹೆದರುತ್ತಿದ್ದೇವೆ ಮತ್ತು ಜಾಗರೂಕರಾಗಿದ್ದೇವೆ. ಪ್ರಕೃತಿ ನಮಗೆ ನೀಡುವ ಅತ್ಯದ್ಭುತ ವಸ್ತು ಮಳೆ. ಮಳೆಯಲ್ಲಿ ವಾಸಿಸುವುದು, ಸುಸಜ್ಜಿತವಾದ ಸ್ಥಳವನ್ನು ಹೊಂದಿರುವುದು ಅಪಾರ ಸಂತೋಷ, ಶಕ್ತಿ ಮತ್ತು ಆರೋಗ್ಯ ನೀಡುತ್ತದೆ. ಮನುಷ್ಯ ಎಲ್ಲರ ಮೇಲೂ ಮತ್ತು ಎಲ್ಲದರ ಮೇಲೂ ದಬ್ಬಾಳಿಕೆ ಮಾಡುತ್ತಾನೆ ಹಾಗೂ ಅಪರಾಧ ಮಾಡುತ್ತಾನೆ. ದುಷ್ಟತನ ಮತ್ತೆ ಗೆದ್ದಿದೆ ಎಂದು ಅವರು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್!

ಯೋಗೇಶ್ ಗೌಡ ಕೊಲೆ ಕೇಸ್ ಶಿಕ್ಷೆ ಪ್ರಕಟಕ್ಕೂ ಮೊದಲೇ ಜಡ್ಜ್ ಸಂತೋಷ್ ಗಜಾನನ ಭಟ್ ವರ್ಗಾವಣೆ!

North to South, ಯಾವುದೇ ತಾರತಮ್ಯ, ಅನ್ಯಾಯವಾಗಲ್ಲ: ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಬಗ್ಗೆ ಪ್ರಧಾನಿ ಮೋದಿ ಗ್ಯಾರಂಟಿ!

ಲೋಕಸಭಾ ಕ್ಷೇತ್ರ ಮರು ವಿಂಗಡಣೆ: 'ದಕ್ಷಿಣ ರಾಜ್ಯಗಳಿಗೆ ಇದಕ್ಕಿಂತ ಉತ್ತಮ ಡೀಲ್ ಸಿಗಲು ಸಾಧ್ಯವಿಲ್ಲ'; ತೇಜಸ್ವಿ ಸೂರ್ಯ

ದಾವಣಗೆರೆ ದಂಗಲ್: ಶಾಮನೂರು ವಿರುದ್ಧ ಕ್ರಮ ಯಾಕಿಲ್ಲ? ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ಇಡೀ ಅಹಿಂದ ವಿರೋಧ ಕಟ್ಟಿಕೊಳ್ಳುತ್ತಿದೆ!

SCROLL FOR NEXT