ಶ್ವಾನದ ಜೊತೆಗೆ ಸಚಿವ ಪರಮೇಶ್ವರ್. 
ರಾಜ್ಯ

ಶಿರೂರು ಭೂಕುಸಿತ: ಮಾಲೀಕನ ಹುಡುಕಾಡುತ್ತಿದ್ದ ಅನಾಥ ಶ್ವಾನಕ್ಕೆ SP ಮನೆಯಲ್ಲಿ ಆಶ್ರಯ..!

ಜುಲೈ.16ರಂದು ಶಿರೂರಿನಲ್ಲಿ ಭೂಕುಸಿತ ಉಂಟಾದಾಗ ಶ್ವಾನ ತನ್ನ ಮಾಲೀಕರನ್ನು ಕಳೆದುಕೊಂಡಿತ್ತು. ಬಳಿಕ ಮಾಲೀಕನಿಗಾಗಿ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸುತ್ತಿತ್ತು. ಈ ದೃಶ್ಯ ಹಲವರ ಕರುಳು ಹಿಂಡುವಂತೆ ಮಾಡಿತ್ತು.

ಕಾರವಾರ: ವರ್ಷದ ಹಿಂದೆ ಶಿರೂರು ಭೂಕುಸಿತದಲ್ಲಿ ತನ್ನ ಮಾಲೀಕರನ್ನು ಕಳೆದುಕೊಂಡಿದ್ದ ಅನಾಥ ಶ್ವಾನಕ್ಕೆ ಉತ್ತರಕನ್ನಡದ ಜಿಲ್ಲೆಯ ಎಸ್'ಪಿ ಮನೆಯಲ್ಲಿ ಆಶ್ರಯ ಸಿಕ್ಕಿದ್ದು, ಈ ಶ್ವಾನ ಇದೀಗ ಎಸ್ಪಿ ನಿವಾಸಕ್ಕೆ ಭೇಟಿ ನೀಡುವ ವಿಐಪಿಗಳಿಗೆ ಫೇವರಿಟ್ ಆಗಿದೆ.

ಜುಲೈ.16ರಂದು ಶಿರೂರಿನಲ್ಲಿ ಭೂಕುಸಿತ ಉಂಟಾದಾಗ ಶ್ವಾನ ತನ್ನ ಮಾಲೀಕರನ್ನು ಕಳೆದುಕೊಂಡಿತ್ತು. ಬಳಿಕ ಮಾಲೀಕನಿಗಾಗಿ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸುತ್ತಿತ್ತು. ಈ ದೃಶ್ಯ ಹಲವರ ಕರುಳು ಹಿಂಡುವಂತೆ ಮಾಡಿತ್ತು. ಗುಡ್ಡ ಕುಸಿತದಲ್ಲಿ ಶ್ವಾನದ ಮಾಲೀಕರು ಸಾವನ್ನಪ್ಪಿದ್ದು, ನಾಯಿ ಅನಾಥವಾಗಿತ್ತು.

ಕೆಲ ಸ್ಥಳೀಯರು ಹಲವಾರು ಪ್ರಾಣಿ ಹಕ್ಕುಗಳ ಸಂಘಟನೆಗಳಿಗೆ ಕರೆ ಮಾಡಿ ದತ್ತು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ, ಯಾರೂ ಮುಂದೆ ಬಂದಿರಲಿಲ್ಲ. ನಂತರ ಉತ್ತರ ಕನ್ನಡ ಜಿಲ್ಲೆಯ ಎಸ್ಪಿ.ಎಂ.ನಾರಾಯಣ್ ಅವರು ಶ್ವಾನವನ್ನು ದತ್ತು ಪಡೆದು, ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಶ್ವಾನಕ್ಕೆ ನಿಯಮಿತ ಸ್ನಾನ, ಆಹಾರ ನೀಡಿ, ಆರೈಕೆ ಮಾಡಲಾಗುತ್ತಿದೆ.

ಇದೀಗ ಎಸ್ಪಿ ಮನೆಗೆ ಬರುವ ಅನೇಕ ಗಣ್ಯರು ಶ್ವಾನವನ್ನು ಇಷ್ಟ ಪಡುತ್ತಿದ್ದು, ಅದರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ್, ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ, ಸ್ಥಳೀಯ ಶಾಸಕ ಸತೀಶ್ ಸೈಲ್ ಮತ್ತು ಸಚಿವ ಮಂಕಾಳ್ ವೈದ್ಯ ಸೇರಿ ಹಲವರು ಶ್ವಾನದೊಂದಿಗೆ ಸೆಲ್ಫೀ ತೆಗೆದುಕೊಂಡಿದ್ದಾರೆಂದು ಎಸ್ಪಿ ಹೇಳಿದ್ದಾರೆ.

ನಾನು ಇಲ್ಲಿಯೇ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ, ನಾಯಿ ಇಲ್ಲಿಯೇ ಇರುವಂತೆ ನೋಡಿಕೊಳ್ಳುತ್ತೇನೆಂದು ನಾರಾಯಣ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಂಧನ ಬೆಲೆ ಸೇರಿದಂತೆ ಉಕ್ರೇನ್ ಸಂಘರ್ಷದ ಪ್ರತಿಕೂಲ ಪರಿಣಾಮ ಜಾಗತಿಕ ದಕ್ಷಿಣ ದೇಶಗಳ ಮೇಲೆ ಬೀರುತ್ತಿದೆ: UNGA ಯಲ್ಲಿ ಭಾರತ ವಿಷಾದ

ನಾನು ಹೇಳಿದ್ರೂ ಕೇಳೋಲ್ವಾ, ಎಷ್ಟು ಧೈರ್ಯ ನಿನಗೆ? ಮಹಿಳಾ IPS ಅಧಿಕಾರಿ ಜೊತೆ ಅಜಿತ್ ಪವಾರ್ ವಾಗ್ವಾದ; ವಿಡಿಯೋ ವೈರಲ್

MUDA ಕೇಸ್: ಸಿಎಂಗೆ ಕ್ಲೀನ್ ಚಿಟ್ ನೀಡಿದ್ದ ದೇಸಾಯಿ ಆಯೋಗ ವರದಿಗೆ ಸಂಪುಟ ಅನುಮೋದನೆ, ಅಧಿಕಾರಿಗಳು-ಅಕ್ರಮ ಫಲಾನುಭವಿಗಳಿಂದ ನಷ್ಟ ವಸೂಲಿಗೆ ನಿರ್ಧಾರ

ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ನಿರ್ಧಾರ: ಇಡೀ ಜಗತ್ತು ತಂತ್ರಜ್ಞಾನವನ್ನು ಆಧರಿಸಿ ವೇಗವಾಗಿ ನಡೆಯುತ್ತಿದ್ದರೆ, ಕಾಂಗ್ರೆಸ್ ಹೆಬ್ಬೆಟ್ಟಿನ ದಿನಗಳ ನೆನಪಿಸಲು ಹೊರಟಿದೆ..!

ಬೆಂಗಳೂರಿನಲ್ಲಿ ಈದ್ ಮಿಲಾದ್ ಸಂಭ್ರಮ; ನಗರದ ಹಲವಡೆ ಸಂಚಾರ ಬದಲಾವಣೆ, ಪರ್ಯಾಯ ಮಾರ್ಗಗಳು ಹೀಗಿವೆ...

SCROLL FOR NEXT