ಪೊಂಗಲ್‌ನಲ್ಲಿ ಹುಳು ಪತ್ತೆ 
ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆ ಪೊಂಗಲ್‌ನೊಳಗೆ ಹುಳು ಪತ್ತೆ!

ಉಪಾಹಾರಕ್ಕಾಗಿ ಆರ್ಡರ್ ಮಾಡಿದ ಪೊಂಗಲ್ ಒಳಗೆ ಹುಳು ಪತ್ತೆಯಾಗಿದೆ. ದೂರು ನೀಡಿದ ನಂತರ ಕೆಫೆ ಸಿಬ್ಬಂದಿ ಆರಂಭದಲ್ಲಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯ ಔಟ್‌ಲೆಟ್‌ನಲ್ಲಿ ಗುರುವಾರ ಬೆಳಿಗ್ಗೆ ಗ್ರಾಹಕನೊಬ್ಬನಿಗೆ ನೀಡಿದ ಖಾದ್ಯದೊಳಗೆ ಹುಳು ಪತ್ತೆಯಾಗಿದೆ.

ಗ್ರಾಹಕನ ಪ್ರಕಾರ, ಉಪಾಹಾರಕ್ಕಾಗಿ ಆರ್ಡರ್ ಮಾಡಿದ ಪೊಂಗಲ್ ಒಳಗೆ ಹುಳು ಪತ್ತೆಯಾಗಿದೆ. ದೂರು ನೀಡಿದ ನಂತರ ಕೆಫೆ ಸಿಬ್ಬಂದಿ ಆರಂಭದಲ್ಲಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಆಹಾರದೊಳಗಿನ ಹುಳು ಮತ್ತು ಸಿಬ್ಬಂದಿ ಸದಸ್ಯರ ಪ್ರತಿಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರವೇ ಅವರು ಕ್ಷಮೆಯಾಚಿಸಲು ಪ್ರಾರಂಭಿಸಿದರು. ನಂತರ ಸಿಬ್ಬಂದಿ ಗ್ರಾಹಕರಿಗೆ 300 ರೂ.ಗಳ ಪೂರ್ಣ ಮರುಪಾವತಿಯನ್ನು ನೀಡಿದ್ದಾರೆ.

ಘಟನೆಯ ವಿಡಿಯೋದಲ್ಲಿ ಗ್ರಾಹಕರು ಪೊಂಗಲ್‌ನೊಳಗಿದ್ದ ಹುಳವನ್ನು ಚಮಚದಲ್ಲಿ ಎತ್ತಿ ತೋರಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಕೆಫೆ ಮಾಲೀಕರಿಗೆ ದೂರು ನೀಡುವ ಸಾಧ್ಯತೆಯ ಬಗ್ಗೆ ಇನ್ನೊಬ್ಬ ಗ್ರಾಹಕರೊಂದಿಗೆ ಚರ್ಚಿಸುವುದು ಸೆರೆಯಾಗಿದೆ.

ಸಿಬ್ಬಂದಿಯೊಬ್ಬರು ನೀವು ಅನುಚಿತ ರೀತಿಯಲ್ಲಿ ಮಾತನಾಡಿದ್ದೀರ ಎಂದು ಕೇಳುತ್ತಿರುವುದು ಕೇಳಿಬಂದಿದೆ. ಈ ಸಂಬಂಧ ಕೆಫೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ ಬ್ರ್ಯಾಂಡ್ ಆಗಿದ್ದು, ರೆಸ್ಟೋರೆಂಟ್‌ಗಳ ಸರಪಣಿಯನ್ನು ಹೊಂದಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ, ಹೈದರಾಬಾದ್‌ನಲ್ಲಿರುವ ಅದರ ಮಳಿಗೆಗಳಲ್ಲಿ ಹಲವಾರು ಅವಧಿ ಮೀರಿದ ಮತ್ತು ತಪ್ಪಾಗಿ ಲೇಬಲ್ ಮಾಡಲಾದ ಆಹಾರ ಪದಾರ್ಥಗಳು ಪತ್ತೆಯಾಗಿದ್ದವು. ತೆಲಂಗಾಣದ ಆಹಾರ ಸುರಕ್ಷತಾ ಇಲಾಖೆಯು ಅವುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿತ್ತು. ಇದರಲ್ಲಿ ಮಾರ್ಚ್ 2024 ರಲ್ಲಿ ಅವಧಿ ಮುಗಿದ 100 ಕಿಲೋ ಉದ್ದಿನ ಬೇಳೆ, ಹಾಗೆಯೇ 10 ಕಿಲೋ ಅವಧಿ ಮುಗಿದ ಮೊಸರು ಮತ್ತು ಎಂಟು ಲೀಟರ್ ಅವಧಿ ಮುಗಿದ ಹಾಲು ಇತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!