ಪೊಂಗಲ್‌ನಲ್ಲಿ ಹುಳು ಪತ್ತೆ 
ರಾಜ್ಯ

ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆ ಪೊಂಗಲ್‌ನೊಳಗೆ ಹುಳು ಪತ್ತೆ!

ಉಪಾಹಾರಕ್ಕಾಗಿ ಆರ್ಡರ್ ಮಾಡಿದ ಪೊಂಗಲ್ ಒಳಗೆ ಹುಳು ಪತ್ತೆಯಾಗಿದೆ. ದೂರು ನೀಡಿದ ನಂತರ ಕೆಫೆ ಸಿಬ್ಬಂದಿ ಆರಂಭದಲ್ಲಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಜನಪ್ರಿಯ ರಾಮೇಶ್ವರಂ ಕೆಫೆಯ ಔಟ್‌ಲೆಟ್‌ನಲ್ಲಿ ಗುರುವಾರ ಬೆಳಿಗ್ಗೆ ಗ್ರಾಹಕನೊಬ್ಬನಿಗೆ ನೀಡಿದ ಖಾದ್ಯದೊಳಗೆ ಹುಳು ಪತ್ತೆಯಾಗಿದೆ.

ಗ್ರಾಹಕನ ಪ್ರಕಾರ, ಉಪಾಹಾರಕ್ಕಾಗಿ ಆರ್ಡರ್ ಮಾಡಿದ ಪೊಂಗಲ್ ಒಳಗೆ ಹುಳು ಪತ್ತೆಯಾಗಿದೆ. ದೂರು ನೀಡಿದ ನಂತರ ಕೆಫೆ ಸಿಬ್ಬಂದಿ ಆರಂಭದಲ್ಲಿ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಆಹಾರದೊಳಗಿನ ಹುಳು ಮತ್ತು ಸಿಬ್ಬಂದಿ ಸದಸ್ಯರ ಪ್ರತಿಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ ನಂತರವೇ ಅವರು ಕ್ಷಮೆಯಾಚಿಸಲು ಪ್ರಾರಂಭಿಸಿದರು. ನಂತರ ಸಿಬ್ಬಂದಿ ಗ್ರಾಹಕರಿಗೆ 300 ರೂ.ಗಳ ಪೂರ್ಣ ಮರುಪಾವತಿಯನ್ನು ನೀಡಿದ್ದಾರೆ.

ಘಟನೆಯ ವಿಡಿಯೋದಲ್ಲಿ ಗ್ರಾಹಕರು ಪೊಂಗಲ್‌ನೊಳಗಿದ್ದ ಹುಳವನ್ನು ಚಮಚದಲ್ಲಿ ಎತ್ತಿ ತೋರಿಸಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಕೆಫೆ ಮಾಲೀಕರಿಗೆ ದೂರು ನೀಡುವ ಸಾಧ್ಯತೆಯ ಬಗ್ಗೆ ಇನ್ನೊಬ್ಬ ಗ್ರಾಹಕರೊಂದಿಗೆ ಚರ್ಚಿಸುವುದು ಸೆರೆಯಾಗಿದೆ.

ಸಿಬ್ಬಂದಿಯೊಬ್ಬರು ನೀವು ಅನುಚಿತ ರೀತಿಯಲ್ಲಿ ಮಾತನಾಡಿದ್ದೀರ ಎಂದು ಕೇಳುತ್ತಿರುವುದು ಕೇಳಿಬಂದಿದೆ. ಈ ಸಂಬಂಧ ಕೆಫೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ ಬ್ರ್ಯಾಂಡ್ ಆಗಿದ್ದು, ರೆಸ್ಟೋರೆಂಟ್‌ಗಳ ಸರಪಣಿಯನ್ನು ಹೊಂದಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ, ಹೈದರಾಬಾದ್‌ನಲ್ಲಿರುವ ಅದರ ಮಳಿಗೆಗಳಲ್ಲಿ ಹಲವಾರು ಅವಧಿ ಮೀರಿದ ಮತ್ತು ತಪ್ಪಾಗಿ ಲೇಬಲ್ ಮಾಡಲಾದ ಆಹಾರ ಪದಾರ್ಥಗಳು ಪತ್ತೆಯಾಗಿದ್ದವು. ತೆಲಂಗಾಣದ ಆಹಾರ ಸುರಕ್ಷತಾ ಇಲಾಖೆಯು ಅವುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿತ್ತು. ಇದರಲ್ಲಿ ಮಾರ್ಚ್ 2024 ರಲ್ಲಿ ಅವಧಿ ಮುಗಿದ 100 ಕಿಲೋ ಉದ್ದಿನ ಬೇಳೆ, ಹಾಗೆಯೇ 10 ಕಿಲೋ ಅವಧಿ ಮುಗಿದ ಮೊಸರು ಮತ್ತು ಎಂಟು ಲೀಟರ್ ಅವಧಿ ಮುಗಿದ ಹಾಲು ಇತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರದಲ್ಲಿ NDA ಅಧಿಕಾರ ಹಂಚಿಕೆ ಸೂತ್ರ ಅಂತಿಮ: ಯಾರಿಗೆ ಎಷ್ಟು ಸಚಿವ ಖಾತೆ?

ಸಚಿವ ಸಂಪುಟ ಪುನಾರಚನೆಗೆ ಸಿದ್ದು ಸಿದ್ಧತೆ ಬೆನ್ನಲ್ಲೇ ಹೈಕಮಾಂಡ್ ಭೇಟಿಯಾದ ಡಿಕೆ ಬ್ರದರ್ಸ್: ಚರ್ಚೆ ಕುರಿತು ತೀವ್ರ ಕೂತೂಹಲ

ಬೆಳಗಾವಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕೃಷ್ಣಮೃಗಗಳ ಮಾರಣಹೋಮ: ಸಾವಿನ ಸಂಖ್ಯೆ 29ಕ್ಕೆ ಏರಿಕೆ, ಆತಂಕದ ವಾತಾವರಣ ನಿರ್ಮಾಣ

ಇಂದಿನಿಂದ ಐತಿಹಾಸಿಕ ಕಡಲೆಕಾಯಿ ಪರಿಷೆ: 5 ದಿನಗಳ ಹಬ್ಬಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಬಿಹಾರ: ನೂತನ ಸರ್ಕಾರ ರಚನೆಯ ಸರ್ಕಸ್; ಟಿಕೆಟ್ ಹಂಚಿಕೆ ಮಾದರಿಯಲ್ಲೇ ಖಾತೆ ಹಂಚಿಕೆಗೆ NDA ಸೂತ್ರ !

SCROLL FOR NEXT