ಸಾಂದರ್ಭಿಕ ಚಿತ್ರ 
ರಾಜ್ಯ

ಗುಪ್ತಚರ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ 30 ಮಂದಿಗೆ ವಂಚನೆ: ಬೆಂಗಳೂರಿನಲ್ಲಿ ಇಬ್ಬರ ಬಂಧನ

ಆರೋಪಿಗಳು ಬೀದರ್‌ನ ವೇಣುಗೋಪಾಲ್ (38) ಮತ್ತು ಆಂಧ್ರಪ್ರದೇಶದ ಅರವಿಂದ್ ನಾಯ್ಡು (36). ಆರೋಪಿಗಳು ವಂಚನೆಗೆ ಬಳಸಿದ್ದ 'ರಾ' ಸಂಸ್ಥೆಯ 86 ಲೆಟರ್‌ಹೆಡ್‌, 6 ಗುರುತಿನ ಚೀಟಿ, 6 ನಕಲಿ ನೇಮಕಾತಿ ಪತ್ರ ಹಾಗೂ 9 ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ಆರ್&ಎಡಬ್ಲ್ಯೂ) ನಲ್ಲಿ ಗುಪ್ತಚರ ವಿಶೇಷ ಅಧಿಕಾರಿಗಳ ಉದ್ಯೋಗಗಳನ್ನು ಕೊಡಿಸುವುದಾಗಿ ಸುಮಾರು 30 ಜನರಿಗೆ ವಂಚನೆ ಮಾಡಿದ ಆರೋಪದ ಮೇಲೆ ಕೇಂದ್ರ ಅಪರಾಧ ಶಾಖೆ (ಸಿಸಿಬಿ) ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಬೀದರ್‌ನ ವೇಣುಗೋಪಾಲ್ (38) ಮತ್ತು ಆಂಧ್ರಪ್ರದೇಶದ ಅರವಿಂದ್ ನಾಯ್ಡು (36). ಆರೋಪಿಗಳು ವಂಚನೆಗೆ ಬಳಸಿದ್ದ 'ರಾ' ಸಂಸ್ಥೆಯ 86 ಲೆಟರ್‌ಹೆಡ್‌, 6 ಗುರುತಿನ ಚೀಟಿ, 6 ನಕಲಿ ನೇಮಕಾತಿ ಪತ್ರ ಹಾಗೂ 9 ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರವಿಂದ್ ಅವರನ್ನು ಟೀ ಸ್ಟಾಲ್‌ನಲ್ಲಿ ಭೇಟಿಯಾದ ವೇಣುಗೋಪಾಲ್ ತಾನು 'ರಾ' ಗುಪ್ತಚರ ವಿಶೇಷ ಅಧಿಕಾರಿ ಎಂದು ಪರಿಚಯಿಸಿಕೊಂಡು, ಬೆಂಗಳೂರಿನ ಕಚೇರಿಯೊಂದರಲ್ಲಿ ನಿಯೋಜನೆಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಅರವಿಂದ್‌ಗೆ ತಿಳಿಸಿದರು.

ಮೊದಲು, ವೇಣುಗೋಪಾಲ್ ಅರವಿಂದ್‌ನಿಂದ ಹಣ ಪಡೆದು ವಂಚಿಸಲು ಪ್ರಯತ್ನಿಸಿದರು. ಅರವಿಂದ್ ಇದನ್ನು ಅರಿತುಕೊಂಡರು, ಆದರೆ ನಂತರ ವೇಣುಗೋಪಾಲ್ ಜೊತೆ ಕೈಜೋಡಿಸಿ ಇಬ್ಬರು ಸೇರಿ ಬೇರೆಯವರನ್ನು ವಂಚಿಸಿದರು. ಇಬ್ಬರೂ ಒಟ್ಟಾಗಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಲು ಪ್ರಾರಂಭಿಸಿದರು, ಗುಪ್ತಚರ ಇಲಾಖೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ತಮಗೆ ಅಧಿಕಾರವಿದೆ ಎಂದು ಹೇಳಿದರು. ಅವರು ಪ್ರತಿ ಅಭ್ಯರ್ಥಿಯಿಂದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿದ್ದರು. ಇಬ್ಬರೂ ನಕಲಿ ನೇಮಕಾತಿ ಪತ್ರಗಳನ್ನು ನೀಡಿ, ಕೆಲವು ಅಭ್ಯರ್ಥಿಗಳಿಗೆ ಎರಡು ತಿಂಗಳಿಗೆ 10,000 ರೂ. ಸಂಬಳ ನೀಡಿ, ಹೆಚ್ಚಿನ ಉದ್ಯೋಗಾಕಾಂಕ್ಷಿಗಳನ್ನು ಕರೆತರುವಂತೆ ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರದ ಸಂತ್ರಸ್ತರೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ವೇಣುಗೋಪಾಲ್ ವಾಸಿಸುತ್ತಿದ್ದ ಗಾಂಧಿನಗರದ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಹಲವು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT