ರಾಜ್ಯ

ಬೆಂಗಳೂರಿನಲ್ಲಿ 'ಆಪರೇಷನ್ ಅಭ್ಯಾಸ್' ಭಾಗವಾಗಿ ನಾಗರಿಕ ರಕ್ಷಣಾ ಮಾಕ್ ಡ್ರಿಲ್; ತುರ್ತು ಸನ್ನದ್ಧತೆಗೆ ತಯಾರಿ!

ಗೃಹ ಸಚಿವಾಲಯದ (MHA) ನಿರ್ದೇಶನದಂತೆ ಅಧಿಕಾರಿಗಳು ಇಂದು ನಗರದ ವಿವಿಧ ಸ್ಥಳಗಳಲ್ಲಿ 'ಆಪರೇಷನ್ ಅಭ್ಯಾಸ್' ಅಡಿಯಲ್ಲಿ ದೊಡ್ಡ ಪ್ರಮಾಣದ ನಾಗರಿಕ ರಕ್ಷಣಾ ಮಾಕ್ ಡ್ರಿಲ್ ನಡೆಸಿದರು.

ಬೆಂಗಳೂರು: ಗೃಹ ಸಚಿವಾಲಯದ (MHA) ನಿರ್ದೇಶನದಂತೆ ಅಧಿಕಾರಿಗಳು ಇಂದು ನಗರದ ವಿವಿಧ ಸ್ಥಳಗಳಲ್ಲಿ 'ಆಪರೇಷನ್ ಅಭ್ಯಾಸ್' ಅಡಿಯಲ್ಲಿ ದೊಡ್ಡ ಪ್ರಮಾಣದ ನಾಗರಿಕ ರಕ್ಷಣಾ ಮಾಕ್ ಡ್ರಿಲ್ ನಡೆಸಿದರು. ಎಂಎಚ್‌ಎ ಆದೇಶಿಸಿದ ರಾಷ್ಟ್ರವ್ಯಾಪಿ ಯುದ್ಧ ಸನ್ನದ್ಧತೆಯ ವ್ಯಾಯಾಮದ ಭಾಗವಾಗಿ ಈ ಕವಾಯತು ನಡೆಸಲಾಯಿತು.

ಅಧಿಕಾರಿಗಳ ಪ್ರಕಾರ, ವಿವಿಧ ಸ್ಥಳಗಳಲ್ಲಿ ಮಧ್ಯಾಹ್ನ 3.48ಕ್ಕೆ ಸೈರನ್ ಮೊಳಗಿದ ತಕ್ಷಣ, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಕಾರ್ಯಪ್ರವೃತ್ತವಾದವು. ಬೆಂಕಿಯ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಳು, ಅವಶೇಷಗಳ ಕೆಳಗಿನಿಂದ ಜನರನ್ನು ಹೊರತರುವುದು, ಎತ್ತರದ ಕಟ್ಟಡಗಳಿಂದ ಜನರನ್ನು ಸ್ಥಳಾಂತರಿಸುವುದು ಮತ್ತು ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಈ ಡ್ರಿಲ್ ನ ಭಾಗವಾಗಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ಕವಾಯತು ನಡೆಸಲಾಯಿತು.

"ಆಪರೇಷನ್ ಅಭ್ಯಾಸ್" ಎಂಬ ನಾಗರಿಕ ರಕ್ಷಣಾ ವ್ಯಾಯಾಮವನ್ನು ನಡೆಸಲು ಎಂಎಚ್‌ಎ ನಿರ್ದೇಶನದ ಪ್ರಕಾರ, ಮೊದಲ ಅಣಕು ಕವಾಯತು ನಡೆಸಲಾಯಿತು. ಬೆಂಗಳೂರು ಅಲ್ಲದೆ ರಾಯಚೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಇದೇ ರೀತಿಯ ವ್ಯಾಯಾಮಗಳನ್ನು ನಡೆಸಲಾಯಿತು. ಬೆಂಗಳೂರಿನಲ್ಲಿ ನಗರಾದ್ಯಂತ ಬ್ಲ್ಯಾಕ್‌ಔಟ್ ಅಣಕು ವ್ಯಾಯಾಮ ಇರಲಿಲ್ಲ. ಸಂಜೆ 6.40ರಿಂದ ಸಂಜೆ 7 ರವರೆಗೆ ನಡೆದ ಹಲಸೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕ್ಯಾಂಪಸ್‌ಗೆ ಮಾತ್ರ ಪ್ರದರ್ಶನಗಳನ್ನು ಸೀಮಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ರಕ್ಷಣಾ ಇಲಾಖೆ ಮತ್ತು ಗೃಹ ಇಲಾಖೆಯ ನಿರ್ದೇಶನದಡಿಯಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ಅಣಕು ಕಾರ್ಯಾಚರಣೆ ಮತ್ತು ಜಾಗೃತಿ ವ್ಯಾಯಾಮವನ್ನು ಆಯೋಜಿಸಲಾಗಿತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದು ಇದನ್ನು ಹಲಸೂರಿನಲ್ಲಿ ನಡೆಸಲಾಯಿತು ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT