ಕೊಲೆಯಾದ ಬಾಲಕ ಮತ್ತು ಮಾತೂರ್  
ರಾಜ್ಯ

ಮಕ್ಕಳ ಜಗಳ ಕೊಲೆಯಲ್ಲಿ ಅಂತ್ಯ: 8 ವರ್ಷದ ಬಾಲಕನ ಹತ್ಯೆಗೈದ ನೆರೆಮನೆಯ ಸೆಕ್ಯುರಿಟಿ ಗಾರ್ಡ್

ರಮಾನಂದ ಎಂಬ 8 ವರ್ಷದ ಬಾಲಕ ನೆರೆಮನೆಯ ಹೆಣ್ಣುಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರಿಗೆ ಹೊಡೆದಿದ್ದಾನೆ, ಇದು ಒಂದು ವಾರಕ್ಕೂ ಹೆಚ್ಚು ಕಾಲ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು.

ಬೆಂಗಳೂರು: ಇಬ್ಬರು ಮಕ್ಕಳ ಆಟ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿಹಾರ ಮೂಲದ ಆರೋಪಿ ಚಂದೇಶ್ವರ್ ಮಾತೂರ್ (36ವ) ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನಡೆದ ಘಟನೆಯೇನು?

ರಮಾನಂದ ಎಂಬ 8 ವರ್ಷದ ಬಾಲಕ ನೆರೆಮನೆಯ ಹೆಣ್ಣುಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಅವರಿಗೆ ಹೊಡೆದಿದ್ದಾನೆ, ಇದು ಒಂದು ವಾರಕ್ಕೂ ಹೆಚ್ಚು ಕಾಲ ಕುಟುಂಬಗಳ ನಡುವೆ ಜಗಳಕ್ಕೆ ಕಾರಣವಾಯಿತು. ಆರೋಪಿ ಸೆಕ್ಯುರಿಟಿ ಗಾರ್ಡ್ ಹುಡುಗನನ್ನು ಕೊಂದು, ಶವವನ್ನು ಗೋಣಿ ಚೀಲದಲ್ಲಿ ತುಂಬಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಯಸಂದ್ರ ಕೆರೆಯ ದಡದಲ್ಲಿ ಎಸೆದಿದ್ದಾನೆ.

ರಮಾನಂದ ಕುಟುಂಬವು ರಾಯಸಂದ್ರದ ದೊಡ್ಡಮರ ರಸ್ತೆಯಲ್ಲಿ ವಾಸಿಸುತ್ತಿದೆ. ಅವರ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು ತಾಯಿ ಅಪಾರ್ಟ್‌ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದರು. ಪೋಷಕರು ಅವನನ್ನು ಶಾಲೆಗೆ ಸೇರಿಸಿರಲಿಲ್ಲ. ತಂದೆ ಮಾತೂರ್ ಆಗ್ನೇಯ ಬೆಂಗಳೂರಿನಲ್ಲಿರುವ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದನು.

ಮಾತೂರ್ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳೊಂದಿಗೆ ರಮಾನಂದನ ಮನೆಯ ಎದುರಿನ ಮನೆಯಲ್ಲಿ ವಾಸಿಸುತ್ತಿದ್ದ. ಎರಡೂ ಕುಟುಂಬಗಳು ಬಿಹಾರ ಮೂಲದವರು. ರಮಾನಂದ ಆಟವಾಡುವಾಗ ಮಾತೂರ್‌ನ ಹೆಣ್ಣುಮಕ್ಕಳೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನು ಅವರಿಗೆ ಹೊಡೆಯುತ್ತಿದ್ದನಂತೆ.

ತನ್ನ ಮಕ್ಕಳಿಗೆ ಹೊಡೆಯಬೇಡ ಎಂದು ಮಾತೂರ್ ಬಾಲಕನಿಗೆ ಹಲವಾರು ಬಾರಿ ಎಚ್ಚರಿಸಿದ್ದನು. ಮಕ್ಕಳ ನಡುವೆ ಆಗಾಗ್ಗೆ ನಡೆಯುತ್ತಿದ್ದ ಜಗಳಗಳು ಅಂತಿಮವಾಗಿ ಕುಟುಂಬಗಳ ನಡುವೆ ಜಗಳಗಳಾಗಿ ಬೆಳೆದವು.

ಪೋಷಕರು ಇಬ್ಬರೂ ಹಗಲಿನಲ್ಲಿ ಕೆಲಸಕ್ಕೆ ಹೋಗಿದ್ದರಿಂದ, ಮಕ್ಕಳು ಮನೆಯಲ್ಲಿಯೇ ಇದ್ದರು, ಆಗಾಗ್ಗೆ ಒಟ್ಟಿಗೆ ಆಟವಾಡುತ್ತಿದ್ದರು ಮತ್ತು ಜಗಳವಾಡುತ್ತಿದ್ದರು, ಸಂಜೆ ಹಿಂತಿರುಗಿದಾಗ ಪೋಷಕರ ನಡುವೆ ಜಗಳಗಳಿಗೆ ಕಾರಣವಾಗುತ್ತಿತ್ತು.

ಮೇ 6 ರಂದು, ಪಾನಮತ್ತನಾಗಿ ಬಂದಿದ್ದ ಮಾತೂರ್, ರಮಾನಂದನೊಂದಿಗೆ ಪ್ರೀತಿಯಿಂದ ಮಾತನಾಡಿ ಸಂಜೆ 6.40 ರ ಸುಮಾರಿಗೆ ಅವನನ್ನು ವಾಕಿಂಗ್ ಗೆಂದು ಕರೆದೊಯ್ದನು. ನಂತರ ರಾಯಸಂದ್ರ ಕೆರೆ ಬಳಿ ಹುಡುಗನನ್ನು ಕತ್ತು ಹಿಸುಕಿ, ಶವವನ್ನು ಗೋಣಿಚೀಲದಲ್ಲಿ ತುಂಬಿಸಿ, ಮನೆಗೆ ಹಿಂದಿರುಗುವ ಮೊದಲು ಕೆರೆಯ ಬಳಿ ಶವವನ್ನು ಎಸೆದು ಬಂದಿದ್ದನು.

ಬಾಲಕನ ಪೋಷಕರು ಎಷ್ಟು ಹುಡುಕಿದರೂ ಸಿಗಲಿಲ್ಲ. ಮರುದಿನ, ಕುಟುಂಬಗಳು ತೀವ್ರ ಜಗಳವಾಡಿದವು, ಸ್ಥಳೀಯ ನಿವಾಸಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಎರಡೂ ಕುಟುಂಬಗಳನ್ನು ವಿಚಾರಣೆಗೆ ಕರೆತಂದರು.

ರಮಾನಂದನ ಪೋಷಕರು ಮಾತೂರ್ ತಮ್ಮ ಮಗನನ್ನು ಅಪಹರಿಸಿದ್ದಾನೆ ಎಂದು ಶಂಕಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಾತೂರ್ ಹುಡುಗನೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ನಂತರ ಅವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT