ಸಾಂದರ್ಭಿಕ ಚಿತ್ರ 
ರಾಜ್ಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: 21 ವರ್ಷಗಳಿಂದ ಬಡ್ತಿಗಾಗಿ ಕಾಯುತ್ತಿರುವ 500 ಸೂಪರ್ ವೈಸರ್ಸ್ !

ರಾಜ್ಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ಇತರ ಸರ್ಕಾರಿ ಯೋಜನೆಗಳನ್ನು ತಲುಪಿಸುತ್ತಾರೆ, ಅಂಗನವಾಡಿ ಕಾರ್ಯಕರ್ತರನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ತರಬೇತಿ ನೀಡುತ್ತಾರೆ.

ಬೆಂಗಳೂರು: 2004 ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸುಮಾರು 500 ಮೇಲ್ವಿಚಾರಕರಿಗೆ ಇದೂವರೆಗೂ ಒಂದೇ ಒಂದು ಬಡ್ತಿ ಸಿಕ್ಕಿಲ್ಲ, ಅವರಲ್ಲಿ 100 ಕ್ಕೂ ಹೆಚ್ಚು ಜನರು ಕೆಲವು ತಿಂಗಳುಗಳಲ್ಲಿ ನಿವೃತ್ತರಾಗಲಿದ್ದಾರೆ.

ಈ ಮೇಲ್ವಿಚಾರಕರು ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಂತಹ ಸರ್ಕಾರಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ತಲುಪಿಸುತ್ತಾರೆ, ರಾಜ್ಯಾದ್ಯಂತ ಮಹಿಳೆಯರು ಮತ್ತು ಮಕ್ಕಳಿಗೆ ಇತರ ಸರ್ಕಾರಿ ಯೋಜನೆಗಳನ್ನು ತಲುಪಿಸುತ್ತಾರೆ, ಅಂಗನವಾಡಿ ಕಾರ್ಯಕರ್ತರನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ತರಬೇತಿ ನೀಡುತ್ತಾರೆ.

ಅವರನ್ನು ಕ್ಷೇತ್ರಮಟ್ಟದ ಕಾರ್ಯಕರ್ತರು ಮತ್ತು ಉನ್ನತ ಅಧಿಕಾರಿಗಳ ನಡುವಿನ ಕೊಂಡಿ ಎಂದು ಪರಿಗಣಿಸಲಾಗುತ್ತದೆ. ಇವರುಗಳು ಯೋಜನೆಯ ಅನುಷ್ಠಾನ ವರದಿಯನ್ನು ರಚಿಸಿ ಇಲಾಖೆಗೆ ಸಲ್ಲಿಸುತ್ತಾರೆ. ಇವರ ಅಡಿಯಲ್ಲಿ ಬರುವ 25 ಅಂಗನವಾಡಿಗಳನ್ನು ಮೇಲ್ವಿಚಾರಣೆ ಮಾಡಬೇಕಾಗಿದೆ, ಅವರಲ್ಲಿ ಹಲವರು ಕೆಲವು ತಾಲ್ಲೂಕುಗಳಲ್ಲಿ 100 ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಒಂದೇ ರೀತಿಯ ವೇತನ ಶ್ರೇಣಿಯನ್ನು ಪಡೆಯುತ್ತಿದ್ದಾರೆ.

ಕರ್ನಾಟಕ ಕೇಡರ್ ಮತ್ತು ಸೇವಾ ನಿಯಮಗಳ ಅಡಿಯಲ್ಲಿ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿಗಳು, ಸಹಾಯಕ ಮಕ್ಕಳ ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ , ಕಾರ್ಯಕ್ರಮ ಅಧಿಕಾರಿ (PO) ಮತ್ತು ಉಪ ನಿರ್ದೇಶಕ (DD) ಆಗಿ ನೇಮಕಗೊಂಡವರು ವರ್ಷಗಳಲ್ಲಿ ಬಡ್ತಿಗಳನ್ನು ಪಡೆದಿದ್ದಾರೆ. ರಾಜ್ಯಾದ್ಯಂತ ಸುಮಾರು 500 ಮೇಲ್ವಿಚಾರಕರು ಬಡ್ತಿಗಾಗಿ ಕಾಯುತ್ತಿದ್ದಾರೆ ಎಂದು ಚಿತ್ರದುರ್ಗದ ಮೇಲ್ವಿಚಾರಕಿಯೊಬ್ಬರು ಹೇಳಿದರು.

ಸಿ ಮೋಟಮ್ಮ ಸಚಿವೆಯಾಗಿದ್ದಾ2004 ರಲ್ಲಿ ನನ್ನಂತೆ ನೂರಾರು ಮಂದಿ ಸೇವೆಗೆ ಸೇರಿದರು. "ಅಂದಿನಿಂದ, ಭಾಗೀರಥಿ ಗೌಡ, ಉಮಾಶ್ರೀ, ಜಯಮಾಲಾ ಮತ್ತು ಶಶಿಕಲಾ ಜೊಲ್ಲೆ ಸೇರಿದಂತೆ ಎಂಟು ಸಚಿವರನ್ನು ನಾವು ನೋಡಿದ್ದೇವೆ. ನಮ್ಮ ಸಮಸ್ಯೆಗಳನ್ನು ಯಾರೂ ಪರಿಹರಿಸಿಲ್ಲ. ಈ ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.

ಸಚಿವರು ಇದನ್ನು ಅಧ್ಯಯನ ಮಾಡುವುದಾಗಿ ಮತ್ತು ಅಧಿಕಾರಿಗಳು ಮತ್ತು ಮೇಲ್ವಿಚಾರಕರ ನಿಯೋಗದೊಂದಿಗೆ ಸಭೆ ಕರೆಯುವುದಾಗಿ ಹೇಳಿದ್ದಾರೆಂದು ದಾವಣಗೆರೆಯ ಮಹಿಳಾ ಮೇಲ್ವಿಚಾರಕಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಶೇ. 25 ರಷ್ಟು ನೇಮಕಾತಿ ಮಾಡಿಕೊಳ್ಳಲು ಮತ್ತು ಉಳಿದ ಶೇ. 75 ರಷ್ಟು ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಲು ಇಲಾಖೆ ಚಿಂತನೆ ನಡೆಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರನ್ನು ಮೇಲ್ವಿಚಾರಕರನ್ನಾಗಿ ಬಡ್ತಿ ನೀಡಲು ಇಲಾಖೆ ಉದ್ದೇಶಿಸಿದ್ದು, ಎಫ್‌ಸಿ ಫೈಲ್‌ಗಳನ್ನು ತೆರವುಗೊಳಿಸಿ ನೇಮಕಾತಿ ಪೂರ್ಣಗೊಂಡ ನಂತರ, ಬಡ್ತಿಗಾಗಿ ಕಾಯುತ್ತಿರುವ ಮೇಲ್ವಿಚಾರಕರನ್ನು ಹಿರಿಯ ಮೇಲ್ವಿಚಾರಕರನ್ನಾಗಿ ಬಡ್ತಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ: ICT ತೀರ್ಪು

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

'ಆಪರೇಷನ್ ಸಿಂಧೂರ ಕೇವಲ 88 ಗಂಟೆಗಳ ಟ್ರೇಲರ್ ಅಷ್ಟೇ’, ಪಾಕಿಸ್ತಾನ ಅವಕಾಶ ನೀಡಿದರೆ...'

ವಂಚನೆ ಪ್ರಕರಣ: ಅಲ್ ಫಲಾಹ್ ವಿವಿ ಅಧ್ಯಕ್ಷರ ಸಹೋದರನ ಬಂಧನ

Delhi blast Case: ಹುಂಡೈ I20 ಕಾರು ಮಾಲೀಕ ಅಮೀರ್ ರಶೀದ್ ಅಲಿ 10 ದಿನ NIA ಕಸ್ಟಡಿಗೆ!

SCROLL FOR NEXT