ಕರ್ನಾಟಕ ವಿಶ್ವವಿದ್ಯಾಲಯ 
ರಾಜ್ಯ

ಕಾರು ಚಾಲಕನ ನಿವೃತ್ತಿಯ ದಿನದಂದು ತಾವೇ ಕಾರು ಚಲಾಯಿಸಿದ ಕರ್ನಾಟಕ ವಿವಿ ರಿಜಿಸ್ಟ್ರಾರ್!

ಸುಮಾರು ಎಂಟು ವರ್ಷಗಳ ಕಾಲ ಅವರು ಹಲವಾರು ರಿಜಿಸ್ಟ್ರಾರ್‌ಗಳಿಗೆ ರುದ್ರಪ್ಪ ಅವರು ಚಾಲಕರಾಗಿ ಸೇವೆ ಸಲ್ಲಿಸಿದ್ದು, ಆ ಪೈಕಿ ನಿಜಲಿಂಗಪ್ಪ ಮಟ್ಟಿಹಾಳ್ ಕೂಡ ಒಬ್ಬರು.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಮತ್ತು ಕುಲಸಚಿವರಿಗೆ ಸುಮಾರು 23 ವರ್ಷಗಳ ಕಾಲ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದ ರುದ್ರಪ್ಪ ಅವರು ನವೆಂಬರ್ 29 ರಂದು ನಿವೃತ್ತರಾದಾಗ ಅವರಿಗೆ ಭಾವನಾತ್ಮಕ ಅಚ್ಚರಿಯೊಂದು ಕಾದಿತ್ತು.

ಕುಲಸಚಿವ (ಮೌಲ್ಯಮಾಪನ) ನಿಜಲಿಂಗಪ್ಪ ಮಟ್ಟಿಹಾಳ್ ಅವರು ರುದ್ರಪ್ಪ ಮತ್ತು ಅವರ ಕುಟುಂಬವನ್ನು ತಾವೇ ಕಾರು ಚಲಾಯಿಸಿಕೊಂಡು ಮನೆಗೆ ಕರೆದೊಯ್ದಿದ್ದಾರೆ. ಇದು ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಸ್ಮರಣೀಯ ಕ್ಷಣವಾಗಿದೆ.

ರುದ್ರಪ್ಪ ಅವರನ್ನು ಆರಂಭದಲ್ಲಿ ಮಾಜಿ ರಿಜಿಸ್ಟ್ರಾರ್ ರಜನೀಶ್ ಗೋಯಲ್ ಅವರ ಅವಧಿಯಲ್ಲಿ ತಾತ್ಕಾಲಿಕ ಆಧಾರದ ಮೇಲೆ ನೇಮಿಸಲಾಯಿತು. ಅವರು ಮಾಜಿ ಉಪಕುಲಪತಿಗಳಾದ ಎಎಂ ಪಠಾಣ್, ಎಂ ಖಾಜಾಪೀರ್, ಎಸ್‌ಕೆ ಸೈದಾಪುರ್, ಎಚ್‌ಬಿ ವಾಲಿಕರ್ ಮತ್ತು ಹಂಗಾಮಿ ಉಪಕುಲಪತಿ ಎ ಮುರಿಗೆಪ್ಪ ಅವರ ಅಧಿಕೃತ ಚಾಲಕರಾಗಿ ಕೆಲಸ ಮಾಡಿದ್ದಾರೆ.

ಸುಮಾರು ಎಂಟು ವರ್ಷಗಳ ಕಾಲ ಅವರು ಹಲವಾರು ರಿಜಿಸ್ಟ್ರಾರ್‌ಗಳಿಗೆ ಚಾಲಕರಾಗಿ ಸೇವೆ ಸಲ್ಲಿಸಿದ್ದು, ಆ ಪೈಕಿ ನಿಜಲಿಂಗಪ್ಪ ಮಟ್ಟಿಹಾಳ್ ಕೂಡ ಒಬ್ಬರು. ರುದ್ರಪ್ಪ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಗೌರವಿಸುವ ಸಲುವಾಗಿ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಕರೆದೊಯ್ದಿದ್ದಾರೆ.

22 ವರ್ಷ ಮತ್ತು ಒಂಬತ್ತು ತಿಂಗಳ ಸೇವೆಯ ನಂತರ, ರುದ್ರಪ್ಪ ನವೆಂಬರ್ 29 ರಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ನಿವೃತ್ತರಾದರು.

'ಐದು ಉಪಕುಲಪತಿಗಳು ಮತ್ತು ಆರು ರಿಜಿಸ್ಟ್ರಾರ್‌ಗಳಿಗೆ (ಮೌಲ್ಯಮಾಪನ) ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿದೆ. ನಾನು ಕೆಲಸ ಮಾಡಿದ ಪ್ರತಿಯೊಬ್ಬ ಅಧಿಕಾರಿಯು ತನ್ನನ್ನು ಬಹಳ ಪ್ರೀತಿ, ಗೌರವದಿಂದ ನಡೆಸಿಕೊಂಡರು' ಎಂದು ರುದ್ರಪ್ಪ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!

IPL 2026: ನಿರಾಶೆಯಾಗಿದೆ.. ಆದ್ರೆ ಮತ್ತೆ ಸೂರ್ಯೋದಯವಾಗುತ್ತದೆ: RCB ಬಳಿಕ ಭಾವುಕ ಶ್ರೇಯಸ್ ಅಯ್ಯರ್ ಹೇಳಿಕೆ!

IPL 2026: 'It’s okay ಮತ್ತೆ ಈ ರೀತಿ ಮಾಡ್ಬೇಡ': 49 ಎಂದು ಗೇಲಿ ಮಾಡಿದ್ದ ಪಂಜಾಬ್ ಗೆ ಬಟ್ಟೆ ಸುತ್ತಿ ಹೊಡೆದ RCB

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ; ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

SCROLL FOR NEXT