ಬೆಂಗಳೂರು ಆಟೋ ಚಾಲಕ (ಸಾಂದರ್ಭಿಕ ಚಿತ್ರ) 
ರಾಜ್ಯ

Bengaluru: 'ಕೋಟಿ-ಕೋಟಿ ಮೌಲ್ಯದ 2 ಮನೆ, ತಿಂಗಳಿಗೆ 3 ಲಕ್ಷ ರೂ ಸಂಪಾದನೆ'; ಆಟೋ ಡ್ರೈವರ್ ಕಥೆ ಕೇಳಿ ಬೇಸ್ತು ಬಿದ್ದ ಪ್ರಯಾಣಿಕ!

ಎಂಜಿನಿಯರ್ ಆಕಾಶ್ ಆನಂದನಿ ಎಂಬುವವರು ಈ ಕುತೂಹಲಕಾರಿ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಕ್ಟೋಬರ್ 4 ರಂದು ಆನಂದನಿ ಹತ್ತಿದ್ದ ಆಟೋ ಚಾಲಕನೊಂದಿಗೆ ಮಾತುಕತೆ ನಡೆಸಿದಾಗ ಈ ಕುತೂಹಲಕಾರಿ ಕಥೆ ಅನಾವರಣವಾಗಿದೆ.

ಬೆಂಗಳೂರು: ಬೆಂಗಳೂರಿನ ಆಟೋ ಚಾಲಕರ ಕುರಿತಂತೆ ದಿನಕ್ಕೊಂದು ಕಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ... ಕೆಲವು ಸಕಾರಾತ್ಮಕ ಕಥೆಗಳಾದರೆ ಕೆಲವು ನಕರಾತ್ಮಕವಾಗಿರುತ್ತವೆ. ಆದರೆ ಇಲ್ಲೊಬ್ಬ ಚಾಲಕ ತನ್ನ ಸಂಪಾದನೆ ಮೂಲಕ ಇಂಟರ್ನೆಟ್ ನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಎಂಜಿನಿಯರ್ ಆಕಾಶ್ ಆನಂದನಿ ಎಂಬುವವರು ಈ ಕುತೂಹಲಕಾರಿ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಕ್ಟೋಬರ್ 4 ರಂದು ಆನಂದನಿ ಹತ್ತಿದ್ದ ಆಟೋ ಚಾಲಕನೊಂದಿಗೆ ಮಾತುಕತೆ ನಡೆಸಿದಾಗ ಈ ಕುತೂಹಲಕಾರಿ ಕಥೆ ಅನಾವರಣವಾಗಿದೆ.

ಆಟೋ ಹತ್ತಿ ಚಾಲಕನ ಕೈಯಲ್ಲಿದ್ದ ಆ್ಯಪಲ್ ವಾಚ್ ಮತ್ತು ಏರ್‌ಪಾಡ್‌ಗಳನ್ನು ನೋಡಿದ ಆನಂದನಿ ಆಟೋ ಚಾಲಕನ ಮಾತಿಗೆಳೆದಿದ್ದಾರೆ. ಈ ವೇಳೆ ಚಾಲಕ ವಾರಾಂತ್ಯದಲ್ಲಿ ವಾಹನ ಚಲಾಯಿಸುತ್ತಿರುವುದಾಗಿ ಹೇಳಿದರು.

'ಬೆಂಗಳೂರು ಹುಚ್ಚು ಹಿಡಿಸಿದೆ. ಆಟೋ ವ್ಯಾಪಾರಿ ಭಯ್ಯಾ ತನಗೆ 4-5 ಕೋಟಿ ಬೆಲೆಬಾಳುವ 2 ಮನೆಗಳಿವೆ, ಎರಡೂ ಬಾಡಿಗೆ ರೂಪದಲ್ಲಿ ತಿಂಗಳಿಗೆ ಸುಮಾರು 2-3 ಲಕ್ಷ ಗಳಿಸುತ್ತವೆ.

ಇಷ್ಟು ಮಾತ್ರವಲ್ಲದೇ AI ಆಧಾರಿತ ಸ್ಟಾರ್ಟ್‌ಅಪ್‌ನಲ್ಲಿ ಹೂಡಿಕೆ ಕೂಡ ಹೊಂದಿದ್ದಾರೆ' ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಪೋಸ್ಟ್ ಅಪ್ಲೋಡ್ ಆದ ಕೆಲವೇ ಗಂಟೆಗಳಲ್ಲಿ 1,300 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 58,000 ವೀಕ್ಷಣೆಗಳನ್ನು ಗಳಿಸಿದೆ.

ನೆಟ್ಟಿಗರು ಕಮೆಂಟ್ ಗಳ ಸುರಿಮಳೆ

ಇನ್ನು ಈ ಪೋಸ್ಟ್ ಗೆ ನೆಟ್ಟಿಗರಿಂದ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಇದನ್ನು ಕಲ್ಪಿತ ಕಥೆ ಎಂದು ಟೀಕಿಸಿದ್ದು, ಮತ್ತೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ "ಬೆಂಗಳೂರು ಸ್ಟಾರ್ಟ್‌ಅಪ್ ರಾಜಧಾನಿಯಾಗಲು ಇದೇ ಕಾರಣ - ಆಟೋ ಚಾಲಕರು ಸಹ ಹೂಡಿಕೆದಾರರು!" ಎಂದು ಹಲವರು ಹುಬ್ಬೇರಿಸಿದ್ದಾರೆ.

ಮತ್ತೆ ಕೆಲವರು ಇದು ಸಾಧ್ಯ.. ಬೆಂಗಳೂರಿನಲ್ಲಿ ಒಂಟಿತನವು ಒಂದು ಪ್ರಮುಖ ಸಮಸ್ಯೆಯಾಗಿದೆ. ಇಲ್ಲಿ ಕೆಲವು ಹೆಚ್ಚು ಗಳಿಸುವ ಜನರು ಅದನ್ನು ಸೋಲಿಸಲು ಹವ್ಯಾಸವಾಗಿ ಟ್ಯಾಕ್ಸಿಗಳನ್ನು ಓಡಿಸುತ್ತಾರೆ. ಹಣಕ್ಕಾಗಿ ಅಲ್ಲ. ನಾನು ಅಂತಹ ಅನೇಕ ಪ್ರಕರಣಗಳನ್ನು ಕೇಳಿದ್ದೇನೆ" ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆ; ಭೂಕುಸಿತದಲ್ಲಿ ಮಕ್ಕಳು ಸೇರಿ ಕನಿಷ್ಠ 20 ಮಂದಿ ಸಾವು

ರಿಷಬ್ ಶೆಟ್ಟಿ ದೃಶ್ಯಕಾವ್ಯಕ್ಕೆ ಬಹುಪರಾಕ್: 4ನೇ ದಿನಕ್ಕೆ ಜಗತ್ತಿನಾದ್ಯಂತ 300 ಕೋಟಿ ಕಲೆಕ್ಷನ್ ದಾಖಲೆ ಬರೆದ 'ಕಾಂತಾರ'!

World cup 2025: ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್: Pak'ಗೆ 248 ರನ್ ಟಾರ್ಗೆಟ್ ನೀಡಿದ ಭಾರತ!

India-Pakistan ಪಂದ್ಯದ ವೇಳೆ ಹೈಡ್ರಾಮಾ: ಮೊದಲು ನಾಟೌಟ್ ನಂತರ Out ಘೋಷಣೆ; 4ನೇ ಅಂಪೈರ್ ಜೊತೆ Pak ನಾಯಕಿ ವಾಗ್ವಾದ, Video

22 ವರ್ಷಗಳ ನಂತರ ಬಿಹಾರ ಮತದಾರರ ಪಟ್ಟಿ 'ಶುದ್ಧೀಕರಿಸಲಾಗಿದೆ'; ದೇಶಾದ್ಯಂತ ವಿಸ್ತರಣೆ: CEC

SCROLL FOR NEXT