ಈಜಿಪುರ 
ರಾಜ್ಯ

ಈಜಿಪುರ ಮೇಲ್ಸೇತುವೆ: ಸೇಂಟ್ ಜಾನ್ಸ್ ಆಸ್ಪತ್ರೆಯ ಭೂಸ್ವಾಧೀನ ತ್ವರಿತಗೊಳಿಸಲು ರಾಮಲಿಂಗಾ ರೆಡ್ಡಿ ಆಗ್ರಹ

ಆದರೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಭೂಸ್ವಾಧೀನ ಆತಂಕವಾಗಿದೆ. ಏಕೆಂದರೆ ಆಸ್ಪತ್ರೆ ಆಡಳಿತವು ಟಿಡಿಆರ್ ಸೂತ್ರಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಪ್ರಾಜೆಕ್ಟ್ ನಿರ್ಣಾಯಕ ಭಾಗದ ಶೇಕಡಾ 20 ರಷ್ಟು ಈ ಭಾಗದಲ್ಲಿದೆ ಎಂದು ಎಂಜಿನಿಯರ್ ಒಬ್ಬರು ಹೇಳಿದ್ದಾರೆ.

ಬೆಂಗಳೂರು: ಈಜಿಪುರ ಮೇಲ್ಸೆತುವೆಗಾಗಿ 160 ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದ್ದು, 430 ಕ್ಕೂ ಹೆಚ್ಚು ನಿರ್ಮಾಣಗಳನ್ನು ತಯಾರಿಸಲಾಗಿದೆ. ಈಜಿಪುರ ಮೇಲ್ಸೇತುವೆ ಯೋಜನೆಯು ಶೇಕಡಾ 65 ರಷ್ಟು ಪೂರ್ಣಗೊಂಡಿದೆ ಎಂದು ವರದಿಯಾಗಿದೆ.

ಆದರೆ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಭೂಸ್ವಾಧೀನ ಇನ್ನೂ ಕಳವಳಕಾರಿಯಾಗಿದೆ, ಏಕೆಂದರೆ ಆಸ್ಪತ್ರೆ ಆಡಳಿತವು ಟಿಡಿಆರ್ ಸೂತ್ರಕ್ಕೆ ಇನ್ನೂ ಒಪ್ಪಿಗೆ ನೀಡಿಲ್ಲ. ಈ ಪ್ರಾಜೆಕ್ಟ್ ನಿರ್ಣಾಯಕ ಭಾಗದ ಶೇಕಡಾ 20 ರಷ್ಟು ಈ ಭಾಗದಲ್ಲಿದೆ ಎಂದು ಎಂಜಿನಿಯರ್ ಒಬ್ಬರು ಹೇಳಿದ್ದಾರೆ.

ಸಾರಿಗೆ ಸಚಿವ ಮತ್ತು ಶಾಸಕ ರಾಮಲಿಂಗಾ ರೆಡ್ಡಿ ಅವರು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದಾರೆ.

ಸೇಂಟ್ ಜಾನ್ಸ್ ಆವರಣದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಆಗ್ನೇಯ ಬೆಂಗಳೂರಿನ ಪೂರ್ವ ಮತ್ತು ಪಶ್ಚಿಮಕ್ಕೆ ಸುಲಭವಾಗಿ ಸಂಪರ್ಕಿಸುವ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.

ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ನಾನು ಒತ್ತಡ ಹೇರುತ್ತಿದ್ದೇನೆ, ವಾರಾಂತ್ಯದಲ್ಲಿ ವೈಯಕ್ತಿಕವಾಗಿ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ರೆಡ್ಡಿ ಹೇಳಿದರು.

ದೊಮ್ಮಲೂರು ಮತ್ತು ಕೇಂದ್ರೀಯ ಸದನದಿಂದ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು 7.5 ಮೀಟರ್ ಸರ್ವೀಸ್ ರಸ್ತೆಗೆ ತಿರುಗಿಸಲಾಗುವುದು ಎಂದು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ. ಈಜಿಪುರ ಮುಖ್ಯರಸ್ತೆಯ ಒಳ ವರ್ತುಲ ರಸ್ತೆ ಜಂಕ್ಷನ್‌ನಿಂದ ಕೇಂದ್ರೀಯ ಸದನ ಜಂಕ್ಷನ್‌ವರೆಗೆ ಕೈಗೊಂಡಿರುವ 2.5 ಕಿ.ಮೀ. ಉದ್ದದ ಮೇಲ್ಸೇತುವೆಯಾಗಿದೆ.

ಕೆಲವು ತಿಂಗಳ ಹಿಂದೆ ನಿಧಾನಗತಿಯ ಕೆಲಸದ ಬಗ್ಗೆ ಏಜೆನ್ಸಿಗೆ ಎಚ್ಚರಿಕೆ ನೀಡಲಾಗಿತ್ತು. ಶ್ರೀನಿವಾಗಿಲು ಜಂಕ್ಷನ್‌ನಿಂದ ಸುಖ್ ಸಾಗರ್ ಹೋಟೆಲ್ ಜಂಕ್ಷನ್‌ವರೆಗಿನ ಕೇಂದ್ರ-ಮಧ್ಯಮ ಕಾಂಕ್ರೀಟೀಕರಣ ಕಾರ್ಯವನ್ನು ಎಜೆನ್ಸಿ ಕೈಗೆತ್ತಿಕೊಂಡಿದೆ. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸುವುದಾಗಿ ಮತ್ತು ಮುಂದಿನ ಕೆಲವು ವಾರಗಳಲ್ಲಿ ಯೋಜನೆಯ ವೇಗ ಹೆಚ್ಚಿಸುವ ಭರವಸೆ ನೀಡಿದೆ.

ಮೊದಲು ಟೆಂಡರ್ ಪಡೆದು ಯೋಜನೆಯನ್ನು ಪ್ರಾರಂಭಿಸಿದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ನಂತರ, ಹಲವಾರು ಸಮಸ್ಯೆಗಳಿಂದಾಗಿ ಅದನ್ನು ಕೈಬಿಟ್ಟಿತ್ತು. ನಂತರ 204 ಕೋಟಿ ರೂ.ಗಳ ಯೋಜನೆಯನ್ನು 2024 ರಲ್ಲಿ ಬಿಎಸ್‌ಪಿಸಿಎಲ್‌ಗೆ ಹಸ್ತಾಂತರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ದೇಶದಲ್ಲೇ ಮೊದಲು: ಉದ್ಯೋಗಸ್ಥ ಮಹಿಳೆಯರಿಗೆ ಗುಡ್ ನ್ಯೂಸ್; ವೇತನ ಸಹಿತ 'ಋತುಚಕ್ರ ರಜೆ'ಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ!

Exclusive: ಬಿಹಾರದಲ್ಲಿ ಕಾಂಗ್ರೆಸ್​ಗೆ 57 ಸ್ಥಾನ ಸಾಧ್ಯತೆ, ಹೊಸ ಮಿತ್ರಪಕ್ಷಕ್ಕೆ ಎರಡು ಸ್ಥಾನ

ನ. 25 ರಂದು ಪ್ರಧಾನಿ ಮೋದಿಯಿಂದ ರಾಮ ಮಂದಿರದ ಮೇಲೆ 21 ಅಡಿ ಎತ್ತರದ ಧರ್ಮ ಧ್ವಜಾರೋಹಣ

'ಮೂರ್ನಾಲ್ಕು ದಿನದಲ್ಲಿ ಡಿಸ್ಚಾರ್ಜ್ ಆಗ್ತಾರೆ': ದೇವೇಗೌಡರ ಆರೋಗ್ಯದ ಕುರಿತು ಎಚ್.ಡಿ ಕುಮಾರಸ್ವಾಮಿ ಹೇಳಿಕೆ

SCROLL FOR NEXT