ಬಲೂನು ಮಾರಾಟದಲ್ಲಿ ತೊಡಗಿರುವ ವಲಸಿಗರ ಕುಟುಂಬ  
ರಾಜ್ಯ

ಬಲೂನ್ ಮಾರುತ್ತಿದ್ದ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ: ದೂರು ದಾಖಲಿಸಲು ಆಧಾರ್, ಪಡಿತರ ಚೀಟಿಗಳಿಲ್ಲದೆ ವಲಸಿಗರ ಪರದಾಟ!

ಹಲವು ವರ್ಷಗಳಿಂದ, ಕಲಬುರಗಿಯ 50 ಕ್ಕೂ ಹೆಚ್ಚು ಕುಟುಂಬಗಳು ದಸರಾ ಸಮಯದಲ್ಲಿ ಮೈಸೂರನ್ನು ತಮ್ಮ ತಾತ್ಕಾಲಿಕ ಮನೆಯನ್ನಾಗಿ ಮಾಡಿಕೊಂಡಿವೆ. ಅವರು ತಮ್ಮ ಮಕ್ಕಳ ಜೊತೆ ವರ್ಣರಂಜಿತ ಬಲೂನ್‌ಗಳು ಮತ್ತು ಆಟಿಕೆ ಸಾಮಾನುಗಳನ್ನು ಬೀದಿ ಬದಿಗಳಲ್ಲಿ ಮಾರಾಟ ಮಾಡುತ್ತಾರೆ.

ಮೈಸೂರು: ಮೈಸೂರಿನಲ್ಲಿ ಎಂಟು ವರ್ಷದ ವಲಸೆ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಗರವನ್ನೇ ಬೆಚ್ಚಿಬೀಳಿಸಿದೆ. ಆದರೆ ಕಲ್ಯಾಣ ಕರ್ನಾಟಕದ ಜನರಿಗೆ ಪ್ರತಿದಿನವೂ ಬದುಕು ಹೋರಾಟವಾಗಿದೆ.

ಹಲವು ವರ್ಷಗಳಿಂದ, ಕಲಬುರಗಿಯ 50 ಕ್ಕೂ ಹೆಚ್ಚು ಕುಟುಂಬಗಳು ದಸರಾ ಸಮಯದಲ್ಲಿ ಮೈಸೂರನ್ನು ತಮ್ಮ ತಾತ್ಕಾಲಿಕ ಮನೆಯನ್ನಾಗಿ ಮಾಡಿಕೊಂಡಿವೆ. ಅವರು ತಮ್ಮ ಮಕ್ಕಳ ಜೊತೆ ವರ್ಣರಂಜಿತ ಬಲೂನ್‌ಗಳು ಮತ್ತು ಆಟಿಕೆ ಸಾಮಾನುಗಳನ್ನು ಬೀದಿ ಬದಿಗಳಲ್ಲಿ ಮಾರಾಟ ಮಾಡುತ್ತಾರೆ.

ಆದರೆ ಈ ಕುಟುಂಬಗಳಲ್ಲಿ ಅನೇಕರಿಗೆ ರಾಜ್ಯ ಸರ್ಕಾರ ನೀಡುವ ಆಧಾರ್, ಪಡಿತರ ಚೀಟಿಗಳು ಅಥವಾ ಜನನ ಪ್ರಮಾಣಪತ್ರಗಳು ಸೇರಿದಂತೆ ಯಾವುದೇ ದಾಖಲೆಗಳಿಲ್ಲ. ಇದರಿಂದಾಗಿ, ಅವರು ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.

ನಾವು 13 ವರ್ಷಗಳಿಂದ ಮೈಸೂರಿಗೆ ಬಂದು ಬಲೂನ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ" ಎಂದು ಹೊಸಮನಿ ಹೇಳುತ್ತಾರೆ, ಅವರು ಕನಿಷ್ಠ 20 ರಿಂದ 30 ಕುಟುಂಬಗಳೊಂದಿಗೆ ದಸರಾ ಹಬ್ಬದ ಸಮಯದಲ್ಲಿ ಮೈಸೂರಿಗೆ ಬಂದು ಶಿಬಿರ ಹೂಡುತ್ತಾರೆ.

ನಮ್ಮ ಬಗ್ಗೆ ಯಾರಿಗೂ ತಿಳಿದಿಲ್ಲ, ಯಾರೂ ನಮ್ಮನ್ನು ಲೆಕ್ಕಿಸುವುದಿಲ್ಲ. ನಾವು ಕಲಬುರಗಿಯ ಸರ್ವೇ ಕಚೇರಿಯ ಬಳಿ ಇರುತ್ತೇವೆ, ಇನ್ನೂ ಕೆಲವರು ಅಫ್ಜಲ್‌ಪುರದ ಟೆಂಟ್‌ಗಳಲ್ಲಿ ವಾಸಿಸುತ್ತೇವೆ. ನಮ್ಮಲ್ಲಿ ಹೆಚ್ಚಿನವರು ದಾಖಲೆಗಳನ್ನು ಹೊಂದಿಲ್ಲ ಮತ್ತು ನಾವು ಆಧಾರ್‌ಗಾಗಿ ಪ್ರಯತ್ನಿಸಿದಾಗ ನಮಗೆ 3,000 ರೂ. ಪಾವತಿಸಲು ಕೇಳಲಾಯಿತು" ಎಂದು ಅವರು ಹೇಳಿದರು.

"ಗುರುತಿನ ಪುರಾವೆ ಒದಗಿಸುವುದು ಕಡ್ಡಾಯವಾಗಿರುವುದರಿಂದ ಎಫ್‌ಐಆರ್ ಗಾಗಿ ದೂರು ದಾಖಲಿಸುವುದು ಸಹ ಕಷ್ಟಕರವಾಗಿರುತ್ತದೆ" ಎಂದು ಗುಂಪಿನ ಮತ್ತೊಬ್ಬ ಸದಸ್ಯರು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ದಾಖಲೆಗಳನ್ನು ಒದಗಿಸುವುದು ಎಷ್ಟು ಕಷ್ಟಕರವಾಗಿತ್ತು ಎಂದು ಹೇಳಿದರು. ಸರ್ಕಾರದ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಕೂಡ ಅವರಿಗೆ ತಲುಪುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT