ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ತ್ರಿಕೋನ ಪ್ರೇಮ ಸಾವಿನಲ್ಲಿ ಅಂತ್ಯ; ಚಲಿಸುತ್ತಿದ್ದ ರೈಲಿನ ಕೆಳಗೆ ತಳ್ಳಿ ಯುವಕನನ್ನು ಕೊಲೆ ಮಾಡಿದ ಸ್ನೇಹಿತರು!

ಪುನೀತ್ ಇತ್ತೀಚೆಗೆ ಇಸ್ಮಾಯಿಲ್ ನನ್ನು ತನ್ನ ಗೆಳತಿಗೆ ಪರಿಚಯಿಸಿದರು. ಆದರೆ ಇಸ್ಮಾಯಿಲ್ ಆಕೆಯ ಸಂಖ್ಯೆಯನ್ನು ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದನು. ಇದು ಪುನೀತ್ ನನ್ನು ಕೆರಳಿಸಿತು.

ಬೆಂಗಳೂರು: ಬಳಿ 20 ವರ್ಷದ ಯುವಕನೊಬ್ಬನನ್ನು ಆತನ ಇಬ್ಬರು ಸ್ನೇಹಿತರು ಚಲಿಸುವ ರೈಲಿನಿಂದ ಮುಂದೆ ತಳ್ಳಿ ಕೊಲೆ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡನೆಕುಂಡಿಯಲ್ಲಿ ನಡೆದಿದೆ.

ಮೃತನನ್ನು ವಿಜಯಪುರದ ಇಸ್ಮಾಯಿಲ್ ಪಟವೇಗರ್ ಎಂದು ಗುರುತಿಸಲಾಗಿದೆ. ಚಿತ್ರದುರ್ಗದ ಪುನೀತ್ ಮತ್ತು ಪ್ರತಾಪ್ ಆರೋಪಿಗಳು. ಪೊಲೀಸರು ಪುನೀತ್ ಎಂಬಾತನನ್ನು ಬಂಧಿಸಿದ್ದು, ಪ್ರತಾಪ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೂವರೂ ಬೈಯಪ್ಪನಹಳ್ಳಿಯಲ್ಲಿ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸಿಸುತ್ತಿದ್ದರು ಮತ್ತು ಖಾಸಗಿ ಕಂಪನಿಯೊಂದರ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಪುನೀತ್ ಇತ್ತೀಚೆಗೆ ಇಸ್ಮಾಯಿಲ್ ನನ್ನು ತನ್ನ ಗೆಳತಿಗೆ ಪರಿಚಯಿಸಿದರು. ಆದರೆ ಇಸ್ಮಾಯಿಲ್ ಆಕೆಯ ಸಂಖ್ಯೆಯನ್ನು ತೆಗೆದುಕೊಂಡು ಮಾತನಾಡಲು ಪ್ರಾರಂಭಿಸಿದನು. ಇದು ಪುನೀತ್ ನನ್ನು ಕೆರಳಿಸಿತು. ತಡರಾತ್ರಿ ಮದ್ಯಪಾನದ ಪಾರ್ಟಿಯ ನಂತರ, ಬೆಳಗಿನ ಜಾವ 3.30 ರ ಸುಮಾರಿಗೆ ದೊಡ್ಡನೆಕುಂಡಿಯ ರೈಲ್ವೆ ಹಳಿಗಳ ಬಳಿ ಪುನೀತ್ ಮತ್ತು ಪ್ರತಾಪ್ ನಡುವೆ ಜಗಳವಾಯಿತು.

ಪುನೀತ್ ಮತ್ತು ಪ್ರತಾಪ್ ಇಸ್ಮಾಯಿಲ್ ಸಮೀಪಿಸುತ್ತಿರುವ ರೈಲಿನ ಮುಂದೆ ತಳ್ಳಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಇಸ್ಮಾಯಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ, ಇಸ್ಮಾಯಿಲ್ ಶವವನ್ನು ಅಪಘಾತದಂತೆ ಬಿಂಬಿಸಲು ಹಳಿಗಳ ಮೇಲೆ ಇಟ್ಟಿದ್ದಾರೆ ಎನ್ನಲಾಗಿದೆ.

ಭಾನುವಾರ ಬೆಳಿಗ್ಗೆ ಶವವನ್ನು ನೋಡಿದ ರೈಲ್ವೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಹಳಿಗಳಿಂದ 10 ಅಡಿ ದೂರದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದರಿಂದ ಇದು ಅಪಘಾತವಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸತ್ತ ವ್ಯಕ್ತಿಯ ಕೊನೆಯ ಫೋನ್ ಕರೆ ಆರೋಪಿಗಳಲ್ಲಿ ಒಬ್ಬರಿಗೆ ಹೋಗಿತ್ತು.

ವಶಕ್ಕೆ ಪಡೆದು ಪುನೀತ್ ನನ್ನು ವಿಚಾರಿಸಿದಾ ತನ್ನ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಕಾರಣಕ್ಕೆ ಇಸ್ಮಾಯಿಲ್ ನನ್ನ ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್ ಮಾಡುವಾಗ ಇಸ್ಮಾಯಿಲ್ ರೈಲಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಾನು ಮತ್ತು ಪ್ರತಾಪ್ ಪೊಲೀಸರಿಗೆ ಹೇಳಲು ಯೋಜಿಸಿದ್ದೆವು ಎಂದು ಪುನೀತ್ ಒಪ್ಪಿಕೊಂಡಿದ್ದಾನೆ. ಇಸ್ಮಾಯಿಲ್ ಪುನೀತ್ ಮತ್ತು ಪ್ರತಾಪ್ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು!

'ಧೈರ್ಯ ಇದ್ದರೆ ಈಗ ಮುಟ್ಟಿ..': ಅಮೆರಿಕಕ್ಕೆ ರಷ್ಯಾ ಸವಾಲು; ಅಣ್ವಸ್ತ್ರ ನೌಕೆಗಳ ನಿಯೋಜನೆ, US ಹಡುಗುಗಳ ಮುಳುಗಿಸಲು ಕರೆ!

RCB ಅಭಿಮಾನಿಗಳಿಗೆ ತೀವ್ರ ನಿರಾಸೆ: ಚಿನ್ನಸ್ವಾಮಿಗಿಲ್ಲ IPL ಭಾಗ್ಯ?, ಹೊಸ ತವರು ಮೈದಾನ ಬಹುತೇಕ ಫಿಕ್ಸ್!

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಈಗ ಮಹಾರಾಷ್ಟ್ರ ಚುನಾವಣೆಯಲ್ಲಿ ಸ್ಪರ್ಧೆ!

ನಟಿ ಜಯಮಾಲ, ಸಾ.ರಾ ಗೋವಿಂದುಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ; ಎಂ.ಎಸ್ ಸತ್ಯುಗೆ ಪುಟ್ಟಣ್ಣ ಕಣಗಾಲ್ ಅವಾರ್ಡ್

SCROLL FOR NEXT