ನಾರಾಯಣ ಹೆಲ್ತ್ ಸಿಟಿ 
ರಾಜ್ಯ

Heart Transplants: ಬೆಂಗಳೂರಿನಲ್ಲಿ 12 ಗಂಟೆಗಳಲ್ಲಿ ಮೂರು ಹೃದಯ ಕಸಿ; ಮೂವರು ಯುವಕರ ಜೀವ ರಕ್ಷಣೆ!

ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ 30 ವಯಸ್ಸಿನ ಮೂವರು ಯುವಕರ ಜೀವವನ್ನು ಉಳಿಸಲಾಗಿದೆ. ಇವರೆಲ್ಲರೂ ಹೃದಯ ದಾನಿಗಳಿಗಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು: ನಾರಾಯಣ ಹೆಲ್ತ್ ಸಿಟಿ ವೈದ್ಯರು 12 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರು ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ವೈದ್ಯಕೀಯ ಇತಿಹಾಸದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಈ ಅಪರೂಪದ ಶಸ್ತ್ರಚಿಕಿತ್ಸೆಯಲ್ಲಿ 30 ವಯಸ್ಸಿನ ಮೂವರು ಯುವಕರ ಜೀವವನ್ನು ಉಳಿಸಲಾಗಿದೆ. ಇವರೆಲ್ಲರೂ ಹೃದಯ ದಾನಿಗಳಿಗಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿದ್ದರು ಎನ್ನಲಾಗಿದೆ.

ಶ್ವಾಸಕೋಶದಲ್ಲಿ ಹೆಚ್ಚಿನ ಒತ್ತಡದ ಹಂತದಲ್ಲಿದ್ದ ರೋಗಿಗಳಿಗೆ ಶೀಘ್ರದಲ್ಲೇ ಕಸಿ ಮಾಡುವುದು ಅಸಾಧ್ಯವಾಗಿತ್ತು. ಸಮಯಕ್ಕೆ ಸರಿಯಾಗಿ ಸೂಕ್ತ ಹೃದಯ ಪಡೆದಿರುವುದರಿಂದ ಅವರಿಗೆ ಜೀವನದಲ್ಲಿ ಹೊಸ ಅವಕಾಶ ದೊರೆತಂತಾಯಿತು ಎಂದು ವೈದ್ಯರು ಹೇಳಿದ್ದಾರೆ.

ನಗರದಾದ್ಯಂತ ಟೀಮ್‌ವರ್ಕ್: ಮೂರು ಬೇರೆ ಬೇರೆ ಆಸ್ಪತ್ರೆಗಳಾದ ಯಲಹಂಕದ ಸ್ಪರ್ಶ್ ಆಸ್ಪತ್ರೆ, ಹೆಬ್ಬಾಳದ ಅಸ್ಟರ್ CMI ಮತ್ತು ಹಳೆ ಮದ್ರಾಸ್ ರಸ್ತೆಯ ಮಣಿಪಾಲ್ ಆಸ್ಪತ್ರೆಯಿಂದ ದಾನಿಗಳ ದಾನಿಗಳ ಹೃದಯಗಳು ಬಂದವು. ಅವುಗಳನ್ನು ಗ್ರೀನ್ ಕಾರಿಡಾರ್ ವಿಶೇಷ ಸಂಚಾರ ಮುಕ್ತ ಮಾರ್ಗಗಳ ಮೂಲಕ ತ್ವರಿತವಾಗಿ ನಾರಾಯಣ ಹೆಲ್ತ್ ಸಿಟಿಗೆ ಕಳುಹಿಸಲಾಯಿತು. ಅಲ್ಲಿ ಹೃದಯ ವೈಫಲ್ಯದ ತಜ್ಞರು, ಕಸಿ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು, ಪರ್ಫ್ಯೂಷನಿಸ್ಟ್‌ಗಳು, ಕಸಿ ಸಂಯೋಜಕರು ಮತ್ತು ತುರ್ತು ಆರೈಕೆ ವೈದ್ಯರು ಒಟ್ಟಾಗಿ ಕೆಲಸ ಮಾಡಿದ್ದಾರೆ.

ಅವರ ಪ್ರಯತ್ನವನ್ನು ರಾಜ್ಯ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆಯಾದ ಜೀವಸಾರ್ಥಕಥೆ (SOTTO) ಬೆಂಬಲಿಸಿತು.ಇದು ಅಂಗಾಂಗ ಸುಗಮ ಸಾಗಾಟಕ್ಕೆ ನೆರವು ನೀಡಿತು. ಈ ಮೈಲಿಗಲ್ಲು ನಮ್ಮ ಕಸಿ ತಂಡದ ಕೌಶಲ್ಯ ಮತ್ತು ಸಾರ್ವಜನಿಕ ಬೆಂಬಲ ಮತ್ತು ಸಮಯೋಚಿತ ಸಮನ್ವಯದ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ದಾನಿಗಳ ಕುಟುಂಬಗಳು ಮಾಡಿದ ಉದಾತ್ತ ನೆರವಿನಿಂದ ಇದು ಸಾಧ್ಯವಾಗಿದೆ ಎಂದು ಹಿರಿಯ ಸಲಹೆಗಾರ ಹೃದಯ ಶಸ್ತ್ರಚಿಕಿತ್ಸಕ ಡಾ ವರುಣ್ ಶೆಟ್ಟಿ ಹೇಳಿದ್ದಾರೆ.

ಎಲ್ಲಾ ಮೂವರು ಯುವಕರ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿದ್ದು, ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ನಿಕಟ ಮೇಲ್ವಿಚಾರಣೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಯಶಸ್ಸು ನಾರಾಯಣ ಹೆಲ್ತ್‌ನ ಹೃದಯ ವೈಫಲ್ಯ ಮತ್ತು ಕಸಿ ಕಾರ್ಯಕ್ರಮದ ಬಲವನ್ನು ಸಾಬೀತುಪಡಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇದು ಭಾರತದಲ್ಲೇ ಅತಿ ದೊಡ್ಡದಾಗಿದೆ. ದಾನಿ ಕುಟುಂಬಗಳಿಗೆ ಆಸ್ಪತ್ರೆ ಕೃತಜ್ಞತೆ ಸಲ್ಲಿಸಿದೆ. ಅಂಗಾಂಗಗಳನ್ನು ದಾನ ಮಾಡುವ ಅವರ ನಿರ್ಧಾರವು ಮೂವರ ಕುಟುಂಬಗಳಿಗೆ ಬದುಕುವ ಭರವಸೆ ನೀಡಿದೆ. ಅಲ್ಲದೇ ಅಂಗಾಂಗ ದಾನವು ಹೇಗೆ ಜೀವಗಳನ್ನು ಉಳಿಸುತ್ತದೆ ಎಂಬುದನ್ನು ಎತ್ತಿ ತೋರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

SCROLL FOR NEXT