ಮೂಲಗಳು ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವುದನ್ನು ದೃಢಪಡಿಸಿದರೂ, ಅವು ಎಷ್ಟು ವ್ಯಕ್ತಿಗಳಿಗೆ ಸೇರಿರಬಹುದು ಎಂಬುದನ್ನು ಬಹಿರಂಗಪಡಿಸಲಿಲ್ಲ. 
ರಾಜ್ಯ

ಧರ್ಮಸ್ಥಳದ ಬಂಗ್ಲೆಗುಡ್ಡ ಬಳಿ SIT ಶೋಧ ಮುಂದುವರಿಕೆ, ಮಹೇಶ್ ತಿಮರೋಡಿ ವಿರುದ್ಧ ಕೇಸು ದಾಖಲು, ಮಾನವ ಹಕ್ಕು ಆಯೋಗ ಮೊರೆ

ಶೋಧದ ಸಮಯದಲ್ಲಿ ಹಗ್ಗ, ವಾಕಿಂಗ್ ಸ್ಟಿಕ್, ಗುರುತಿನ ಚೀಟಿ ಮತ್ತು ವಿಷದ ಬಾಟಲಿಯನ್ನು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಮಂಗಳೂರು: ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ನಿನ್ನೆ ನಡೆಸಿದ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಧರ್ಮಸ್ಥಳ ದೇವಾಲಯದ ಸ್ನಾನಗೃಹದ ಬಳಿಯ ಬಂಗ್ಲೆಗುಡ್ಡೆಯ ಅರಣ್ಯ ಪ್ರದೇಶದ ಐದು ಸ್ಥಳಗಳಲ್ಲಿ ಮಾನವ ಅವಶೇಷ ಪತ್ತೆಯಾಗಿದೆ. ಇಂದು ಕೂಡ ಎಸ್ ಐಟಿ ಶೋಧ ಮುಂದುವರಿಯಲಿದೆ.

ಶೋಧದ ಸಮಯದಲ್ಲಿ ಹಗ್ಗ, ವಾಕಿಂಗ್ ಸ್ಟಿಕ್, ಗುರುತಿನ ಚೀಟಿ ಮತ್ತು ವಿಷದ ಬಾಟಲಿಯನ್ನು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ. 2012 ರಲ್ಲಿ ಅತ್ಯಾಚಾರ ಮತ್ತು ಕೊಲೆಯಾದ 17 ವರ್ಷದ ಬಾಲಕಿ ಸೌಜನ್ಯಳ ಚಿಕ್ಕಪ್ಪ ವಿಠಲ್ ಗೌಡ ಅವರ ಇತ್ತೀಚಿನ ವೀಡಿಯೊ ಹೇಳಿಕೆಯ ನಂತರ ಈ ಬೆಳವಣಿಗೆ ನಡೆದಿದೆ.

ಮಾನವ ಹಕ್ಕುಗಳ ಆಯೋಗ ಸಂಪರ್ಕಿಸಿದ ಮಹೇಶ್ ತಿಮರೋಡಿ

ಆಗಸ್ಟ್ 31 ರಂದು ನಡೆದ ಮಹಜರು ಸಮಯದಲ್ಲಿ ಮಗುವಿನ ಅವಶೇಷಗಳು ಸೇರಿದಂತೆ ಹಲವಾರು ಮಾನವ ಅವಶೇಷಗಳನ್ನು ನೋಡಿದ್ದೇವೆ ಎಂದು ವಿಠಲ್ ಗೌಡ ವೀಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಪ್ರಮುಖ ಸಾಕ್ಷಿ-ದೂರುದಾರರು ಪೊಲೀಸರಿಗೆ ಸಲ್ಲಿಸಿದ ಮಾನವ ತಲೆಬುರುಡೆಯನ್ನು ಬಂಗ್ಲೆಗುಡ್ಡೆ ಕಾಡಿನಿಂದ ವಿಠಲ್ ಗೌಡ ಹೊರತೆಗೆದಿದ್ದಾರೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ ನಂತರ ಅವರನ್ನು ಸ್ಥಳ ಪರಿಶೀಲನೆಗೆ ಕರೆದೊಯ್ಯಲಾಯಿತು.

ಧರ್ಮಸ್ಥಳ ದೇವಸ್ಥಾನದ ನೈರ್ಮಲ್ಯ ಕಾರ್ಮಿಕನಾಗಿರುವ ಸಾಕ್ಷಿ-ದೂರುದಾರ, 20 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ಮತ್ತು ಹಿಂಸಾಚಾರಕ್ಕೆ ಒಳಗಾದವರ ಶವಗಳನ್ನು ಹೂಳಿದ್ದೇನೆ ಎಂದು ಪೊಲೀಸರಿಗೆ ಮೊದಲು ದೂರು ನೀಡಿದ್ದರು.

ನಿನ್ನೆ ಎಸ್‌ಐಟಿ ಸದಸ್ಯರು, ಅಪರಾಧ ದೃಶ್ಯ ಅಧಿಕಾರಿಗಳು ಮತ್ತು ಅರಣ್ಯ ಮತ್ತು ಕಂದಾಯ ಇಲಾಖೆಗಳ ಸಿಬ್ಬಂದಿ ಸೇರಿದಂತೆ 50 ಕ್ಕೂ ಹೆಚ್ಚು ಸಿಬ್ಬಂದಿಗಳ ತಂಡ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿತು. ಐದು ಗುಂಪುಗಳಾಗಿ ವಿಂಗಡಿಸಲಾದ ತಂಡಗಳು ಬೆಳಗ್ಗೆ 11.30 ರ ಸುಮಾರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಸಂಜೆ 6.30 ರವರೆಗೆ ಮುಂದುವರೆಯಿತು, ಉಪ್ಪಿನ ಚೀಲಗಳು, ಪಿವಿಸಿ ಪೈಪ್‌ಗಳು, ಬಕೆಟ್‌ಗಳು ಮತ್ತು ಇತರ ವಸ್ತುಗಳನ್ನು ಅರಣ್ಯ ಪ್ರದೇಶಕ್ಕೆ ಸಾಗಿಸಲಾಗಿತ್ತು.

ಹೊಸದಾಗಿ ಪತ್ತೆಯಾದ ಸ್ಥಳಗಳು ವಿಠಲ ಗೌಡ ಅವರ ಸಹಾಯದಿಂದ ಹಿಂದಿನ ಮಹಜರ್ ನಡೆಸಲಾಗಿದ್ದ ಪ್ರದೇಶಕ್ಕೆ ಸಮೀಪದಲ್ಲಿವೆ ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆಯನ್ನು ಬಿಗಿ ಭದ್ರತೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸ್ಥಳಕ್ಕೆ ಪ್ರವೇಶಿಸಲು ಅವಕಾಶ ನೀಡದೆ ನಡೆಸಲಾಯಿತು.

ಮಾನವ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವುದನ್ನು ಮೂಲಗಳು ದೃಢಪಡಿಸಿದರೂ, ಅವಶೇಷಗಳು ಎಷ್ಟು ವ್ಯಕ್ತಿಗಳದ್ದಾಗಿವೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ. ವಿಧಿವಿಜ್ಞಾನ ವರದಿ ಮಾತ್ರ ಬಲಿಪಶುಗಳ ಸಂಖ್ಯೆ, ಅವರ ವಯಸ್ಸು ಮತ್ತು ಸಾವಿಗೆ ಕಾರಣವನ್ನು ನಿಖರವಾಗಿ ತಿಳಿಸಬಹುದು ಎಂದು ಅವರು ಹೇಳಿದರು.

ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲು

ವಿಶೇಷ ತನಿಖಾ ತಂಡದ (SIT) ತನಿಖಾಧಿಕಾರಿ ಸಲ್ಲಿಸಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಗಸ್ಟ್ 26 ರಂದು, ವಾರೆಂಟ್‌ನೊಂದಿಗೆ ಎಸ್‌ಐಟಿ ಅಧಿಕಾರಿಗಳು ಉಜಿರೆ ಗ್ರಾಮದಲ್ಲಿರುವ ಮಹೇಶ್ ತಿಮರೋಡಿ ಅವರ ಮನೆಯನ್ನು ಶೋಧಿಸಿ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಎಸ್‌ಪಿ ಅರುಣ್ ಕೆ ಹೇಳಿದ್ದಾರೆ. ನಂತರ ಎಸ್‌ಐಟಿ ಅಧಿಕಾರಿ ಎಸ್‌ಪಿಗೆ ದೂರು ಸಲ್ಲಿಸಿದರು.

ಪರಿಶೀಲನೆಯ ನಂತರ, ಮಂಗಳವಾರ, ಬೆಳ್ತಂಗಡಿ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25(1)(1-A) ಮತ್ತು 25(1)(1-B)(a) ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಮಧ್ಯೆ, ಮಹೇಶ್ ತಿಮರೋಡಿ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದು, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ದೌರ್ಜನ್ಯ, ರಾಜಕೀಯ ಗುರಿ ಮತ್ತು ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

CEC 'ಮತ ಕಳ್ಳರ ರಕ್ಷಕ', ಕರ್ನಾಟಕದ ಆಳಂದ ಕ್ಷೇತ್ರದಲ್ಲಿ 6,000 ಮತದಾರರ ಹೆಸರು ಡಿಲೀಟ್: ರಾಹುಲ್ ಗಾಂಧಿ ಆರೋಪ

ಉತ್ತರಾಖಂಡ ಮೇಘಸ್ಫೋಟ: ಚಮೋಲಿ ಜಿಲ್ಲೆಯಲ್ಲಿ ಹತ್ತು ಮಂದಿ ನಾಪತ್ತೆ, ಸಂಪರ್ಕ ಕಳೆದುಕೊಂಡ ಗ್ರಾಮಗಳು

ಉಕ್ರೇನ್ ಯುದ್ಧ ಪರಿಹರಿಸಲು ಸಹಾಯಕ್ಕೆ ಭಾರತ ಸಿದ್ಧವಿದೆ: ಪುಟಿನ್ ಗೆ ಪ್ರಧಾನಿ ಮೋದಿ ಭರವಸೆ

MUDA Scam: ಮುಡಾ ಮಾಜಿ ಅಧಿಕಾರಿ ದಿನೇಶ್ ಕುಮಾರ್ 9 ದಿನ ED ವಶಕ್ಕೆ

ಹಣಕಾಸು ಸ್ವಾತಂತ್ರ್ಯಕ್ಕೆ 7 ಸರಳ ನಿಯಮಗಳು! (ಹಣಕ್ಲಾಸು)

SCROLL FOR NEXT