ದಿನೇಶ್ ಗುಂಡೂರಾವ್  
ರಾಜ್ಯ

ಹೆಣ್ಣು ಭ್ರೂಣ ಲಿಂಗ ಪತ್ತೆ: ಆಂಧ್ರದಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳ ರಹಸ್ಯ ಕಾರ್ಯಾಚರಣೆ ಯಶಸ್ವಿ!

ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಮಂಡ್ಯ ಜಿಲ್ಲೆ ಮಳವಳ್ಳಿಯ 30 ವರ್ಷದ ಮಹಿಳೆ ಆಂಧ್ರದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳಲು ಮುಂದಾಗಿದ್ದರು.

ಬೆಂಗಳೂರು: ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡವು ಆಂಧ್ರ ಪ್ರದೇಶದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕದ ಗರ್ಭಿಣಿಯರು ನೆರೆಯ ರಾಜ್ಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ.

ಇಲಾಖೆಯ ಕಾರ್ಯಾಚರಣೆಯ ಬಗ್ಗೆ ಮಾಧ್ಯಮಗಳಿಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಮಾಜ ಜಾಗೃತರಾಗಬೇಕು ಎಂದರು. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮುರು ತಾಲ್ಲೂಕಿನ ಬಾಷಾ ನರ್ಸಿಂಗ್ ಹೋಂ ಮೇಲೆ ಕರ್ನಾಟಕ ಮತ್ತು ಆಂಧ್ರದ ವೈದ್ಯರ ತಂಡ ಕಾರ್ಯಾಚರಣೆ ನಡೆಸಿದಾಗ, ಭ್ರೂಣ ಹತ್ಯೆ ನಡೆಸುತ್ತಿರುವುದು ಖಚಿತಪಟ್ಟಿದೆ.

ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಮಂಡ್ಯ ಜಿಲ್ಲೆ ಮಳವಳ್ಳಿಯ 30 ವರ್ಷದ ಮಹಿಳೆ ಅಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳಲು ಮುಂದಾಗಿದ್ದರು. ರಾಜ್ಯದ ‘ಪಿಸಿ ಆ್ಯಂಡ್ ಪಿಎನ್‌ಡಿಟಿ’ಯ ನೋಡಲ್ ಅಧಿಕಾರಿ ಡಾ. ವಿವೇಕ್ ದೊರೈ ಹಾಗೂ ಆಂಧ್ರಪ್ರದೇಶದ ಡಾ. ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ನೇತೃತ್ವದ ತಂಡ ಇದೇ 21ರಂದು ಈ ಕಾರ್ಯಾಚರಣೆ ನಡೆಸಿದೆ.

ಈ ಕಾರ್ಯಾಚರಣೆ ಬಗ್ಗೆ ವಿವರ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಳವಳ್ಳಿಯ 30 ವರ್ಷದ ಮಹಿಳೆ ಮೂರು ಹೆಣ್ಣು ಮಕ್ಕಳನ್ನು ಹೊಂದಿದ್ದ ಕಾರಣ, ಅಕ್ರಮವಾಗಿ ಏಜೆಂಟ್ ಮೂಲಕ ಭ್ರೂಣ ಲಿಂಗ ಪತ್ತೆ ಮಾಡಿಸಿಕೊಂಡಿದ್ದರು. ಆ ವೇಳೆ ಐದು ತಿಂಗಳ ಗರ್ಭಿಣಿಯಾಗಿದ್ದರು. ಇನ್ನೊಂದು ಮಗುವು ಹೆಣ್ಣು ಎನ್ನುವುದು ತಿಳಿದ ಕಾರಣ, ಆಂಧ್ರ ಪ್ರದೇಶದ ಏಜೆಂಟ್ ಮೂಲಕ ಗರ್ಭಪಾತ ಮಾಡಿಸಿಕೊಳ್ಳಲು ಮುಂದಾಗಿದ್ದರು. ಈ ಏಜೆಂಟ್‌ನನ್ನು ಪತ್ತೆ ಮಾಡಿದ ಇಲಾಖೆ ಅಧಿಕಾರಿಗಳು, ರಹಸ್ಯ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕಟುಕರನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.. ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, "ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸರ್ಕಾರ, ಇಲಾಖೆಯಿಂದ ಏನೆಲ್ಲಾ ಪ್ರಯತ್ನಗಳನ್ನು ಮಾಡಲು ಸಾಧ್ಯವೋ ಅದನ್ನ ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ.

ಹೆಣ್ಣು ಭ್ರೂಣ ಹತ್ಯೆ ಒಂದು ಸಾಮಾಜಿಕ ಪಿಡುಗು. ನಮ್ಮ ಸಮಾಜ ಈ ಬಗ್ಗೆ ಜಾಗ್ರತರಾಗುವುದು ಮುಖ್ಯ. ಸಂಪೂರ್ಣವಾಗಿ ಹೆಣ್ಣು ಭ್ರೂಣ ಹತ್ಯೆ ತೊಡೆದುಹಾಕಲು ಸಾಮಾಜಿಕ ಬದಲಾವಣೆ ಆಗುವುದು ಮುಖ್ಯ ಎಂದರು. ತನಿಖೆಯ ಸಮಯದಲ್ಲಿ ಒಬ್ಬ ವ್ಯಕ್ತಿ ತನ್ನ ಪತಿಗೆ ಲಿಂಗ ಭ್ರೂಣ ಪತ್ತೆ ಏಜೆಂಟ್‌ನ ಫೋನ್ ಸಂಖ್ಯೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಪತಿ ಏಜೆಂಟ್ ಅನ್ನು ಸಂಪರ್ಕಿಸಿದರು, ಅವರು ಆಗಸ್ಟ್ 31, 2025 ರಂದು ಆಂಧ್ರಪ್ರದೇಶದ ಗುಂತಕಲ್ ಬಸ್ ನಿಲ್ದಾಣದಲ್ಲಿ ಭೇಟಿಯಾಗಲು ಸೂಚಿಸಿದರು. ಅಕ್ರಮ ಪರೀಕ್ಷೆಗಳನ್ನು ಭಾನುವಾರದಂದು ಮಾತ್ರ ಮಾಡಲಾಗುತ್ತಿತ್ತು. ದಂಪತಿಗಳು ಗೊತ್ತುಪಡಿಸಿದ ಸ್ಥಳಕ್ಕೆ ಹೋದಾಗ, ಸೀತಮ್ಮ ಎಂಬ ಮಹಿಳಾ ಏಜೆಂಟ್ ಗರ್ಭಿಣಿ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಲಿಂಗ ಪತ್ತೆ ಮಾಡುವ ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ದರು ಮತ್ತು ನಂತರ ಭ್ರೂಣವು ಹೆಣ್ಣು ಎಂದು ಪತಿಗೆ ತಿಳಿಸಿದರು.

ಗರ್ಭಪಾತ ಮಾಡಿಸಲು ಆಸಕ್ತಿ ಇದೆಯೇ ಎಂದು ಏಜೆಂಟ್ ವಿಚಾರಿಸಿದ್ದಾರೆ. ದೃಢೀಕರಣದ ನಂತರ, ವೈದ್ಯಕೀಯ ಗರ್ಭಪಾತ ಮಾಡಲು ಹೆಚ್ಚುವರಿಯಾಗಿ 20,000 ರೂ.ಗಳನ್ನು ಕೇಳಿದ್ದಾರೆ. ಹೀಗಾಗಿ ದಂಪತಿ ಗರ್ಭಪಾತ ಮಾಡಿಸಲು ನಿರಾಕರಿಸಿ ಮಳವಳ್ಳಿಯಲ್ಲಿರುವ ತಮ್ಮ ಕೆಲಸದ ಸ್ಥಳಕ್ಕೆ ಮರಳಿದರು.

ತನಿಖೆಯ ಆಧಾರದ ಮೇಲೆ, ಕರ್ನಾಟಕ ಮತ್ತು ಆಂಧ್ರಪ್ರದೇಶ ಅಧಿಕಾರಿಗಳು ಸೆಪ್ಟೆಂಬರ್ 21, 2025 ರಂದು ಜಂಟಿ ರಹಸ್ಯ ಕಾರ್ಯಾಚರಣೆಗೆ ಯೋಜಿಸಿದರು. ಶಸ್ತ್ರಚಿಕಿತ್ಸೆ ನಡೆಯಬೇಕಿದ್ದ ಆಸ್ಪತ್ರೆ ಆಂಧ್ರಪ್ರದೇಶದಲ್ಲಿದೆ. ಈ ಆಸ್ಪತ್ರೆ ಬಳ್ಳಾರಿ, ರಾಯಚೂರು ಮತ್ತು ವಿಜಯನಗರ ಜಿಲ್ಲೆಗಳ ಬಳಿಯಿದ್ದು ಕರ್ನಾಟಕದ ಗಡಿಗೆ ಹತ್ತಿರದಲ್ಲಿದೆ.

ಕಾರ್ಯಾಚರಣೆಯ ಸಮಯದಲ್ಲಿ, ನಿಯಂತ್ರಿತ ವ್ಯವಸ್ಥೆಯ ಭಾಗವಾಗಿ ದಂಪತಿಗೆ 9,000 ರೂ.ಗಳನ್ನು ನೀಡಲಾಯಿತು. ಅಲ್ಟ್ರಾಸೌಂಡ್ ನಂತರ, ಏಜೆಂಟ್ ಸೀತಮ್ಮ ದಂಪತಿಗಳಿಂದ 7,500 ರೂ.ಗಳನ್ನು ಸಂಗ್ರಹಿಸಿ, 2,000 ರೂ.ಗಳನ್ನು ಮೆಡಿಕಲ್ ಸ್ಟೋರ್‌ಗೆ ಪಾವತಿಸಿ, 5,500 ರೂ.ಗಳನ್ನು ತನಗಾಗಿ ಉಳಿಸಿಕೊಂಡು, 1,500 ರೂ.ಗಳನ್ನು ದಂಪತಿಗಳ ಬಳಿಯೇ ಬಿಟ್ಟರು. ಆರೋಗ್ಯ ಅಧಿಕಾರಿಗಳು ಹಣದ ವಹಿವಾಟನ್ನು ಪರಿಶೀಲಿಸಿದರು.

ಅಗತ್ಯವಿದ್ದರೆ ಗುಂಟಕಲ್‌ನ ತಿಲಕ್ ನಗರದಲ್ಲಿರುವ ಡಾ. ಬೇಬಿ ಗರ್ಭಪಾತ ಮಾಡುತ್ತಿದ್ದರು ಎಂದು ಸೀತಮ್ಮ ಬಹಿರಂಗಪಡಿಸಿದರು. ನಂತರ ಎಲ್ಲಾ ಪುರಾವೆಗಳನ್ನು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ಆಂಧ್ರಪ್ರದೇಶ ರಾಜ್ಯ ನೋಡಲ್ ಅಧಿಕಾರಿ ಡಾ. ಕೆ.ವಿ.ಎನ್.ಎಸ್. ಅನಿಲ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಹೋರಾಟ ನಡೆಸುತ್ತೇವೆಂದ ಸಿಎಂ ಸಿದ್ದರಾಮಯ್ಯ

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

SCROLL FOR NEXT