ಸಾಂದರ್ಭಿಕ ಚಿತ್ರ 
ರಾಜ್ಯ

ಅಬಕಾರಿ ಲೈಸೆನ್ಸ್ ಇ-ಹರಾಜಿಗೆ ರಾಜ್ಯ ಸರ್ಕಾರದಿಂದ ಕರಡು ಅಧಿಸೂಚನೆ

ಕರ್ನಾಟಕದಲ್ಲಿ ಸುಮಾರು 588 ನಿಷ್ಕ್ರಿಯ ಅಬಕಾರಿ ಪರವಾನಗಿಗಳ ಪ್ರಸ್ತಾವಿತ ಎಲೆಕ್ಟ್ರಾನಿಕ್ ಹರಾಜಿನ ಕುರಿತು TNIE ತನ್ನ ಆಗಸ್ಟ್ 14 ರಂದು ವರದಿ ಪ್ರಕಟಿಸಿತ್ತು.

ಬೆಂಗಳೂರು: ಕರ್ನಾಟಕ ಅಬಕಾರಿ(ಪರವಾನಗಿಗಳ ಸಾಮಾನ್ಯ ಷರತ್ತುಗಳು) ತಿದ್ದುಪಡಿಗೆ ಪ್ರಸ್ತಾವಿತ ತಿದ್ದುಪಡಿಯ ಕುರಿತು 10 ದಿನಗಳ ಒಳಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

ರಾಜ್ಯಕ್ಕೆ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ(ARM)ಕ್ಕೆ ಸಹಾಯ ಮಾಡಲು ನಿಷ್ಕ್ರಿಯ/ಬಳಕೆಯಾಗದ ಪರವಾನಗಿಗಳ ಇ-ಹರಾಜಿಗಾಗಿ ನಿಯಮಗಳು, 1967, ಕರ್ನಾಟಕ ಅಬಕಾರಿ(ಬಿಯರ್ ಚಿಲ್ಲರೆ ಮಾರಾಟದ ಹಕ್ಕಿನ ಗುತ್ತಿಗೆ)ನಿಯಮಗಳು, 1976 ಮತ್ತು ಕರ್ನಾಟಕ ಅಬಕಾರಿ(ಭಾರತೀಯ ಮತ್ತು ವಿದೇಶಿ ಮದ್ಯದ ಮಾರಾಟ) ನಿಯಮಗಳು 1968 ಅಡಿಯಲ್ಲಿ ನಿಷ್ಕ್ರಿಯವಾಗಿರುವ ಅಬಕಾರಿ ಲೈಸೆನ್ಸ್ ಗಳನ್ನು ಹರಾಜು ಹಾಕಲು ಕರಡು ನಿಯಮಗಳನ್ನು ರಾಜ್ಯ ಹಣಕಾಸು ಇಲಾಖೆಯು ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಸುಮಾರು 588 ನಿಷ್ಕ್ರಿಯ ಅಬಕಾರಿ ಪರವಾನಗಿಗಳ ಪ್ರಸ್ತಾವಿತ ಎಲೆಕ್ಟ್ರಾನಿಕ್ ಹರಾಜಿನ ಕುರಿತು TNIE ತನ್ನ ಆಗಸ್ಟ್ 14 ರಂದು ವರದಿ ಪ್ರಕಟಿಸಿತ್ತು.

ಹರಾಜಿಗೆ ಒಳಗಾಗುವ ಸಾಧ್ಯತೆ ಇರುವ ಸುಮಾರು 588 ಪರವಾನಗಿಗಳಲ್ಲಿ 288 11-C (ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಚಿಲ್ಲರೆ ಮಾರಾಟ ಮಳಿಗೆ) ಪರವಾನಗಿಗಳಾಗಿವೆ ಎಂದು ಹೇಳಲಾಗುತ್ತಿದೆ. ನಂತರ 204 CL-2 (ಚಿಲ್ಲರೆ ಮದ್ಯದ ಅಂಗಡಿಗಳು) ಮತ್ತು 96 CL-9 (ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು) ಇವೆ” ಎಂದು ಹೆಸರು ಬಹಿರಂಗಪಡಿಸಲು ಬಯಸದ ಮೂಲಗಳು ತಿಳಿಸಿವೆ.

“ಈ ಪರವಾನಗಿಗಳನ್ನು ಯಾವುದೇ ಕಾರಣಕ್ಕಾಗಿ ನವೀಕರಿಸಲಾಗಿಲ್ಲ ಮತ್ತು ಅವು ನಿಷ್ಕ್ರಿಯವಾಗಿವೆ. ಹರಾಜಿನ ಹಿಂದಿನ ಕಾರಣವೆಂದರೆ ಅವುಗಳನ್ನು ಮತ್ತೆ ಮಾರುಕಟ್ಟೆಗೆ ತರುವುದು ಮತ್ತು ಸರ್ಕಾರಕ್ಕೆ ಸುಮಾರು 600 ಕೋಟಿ ರೂ.ಗಳ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ ಮಾಡುವುದು ಇದರ ಉದ್ದೇಶವಾಗಿದೆ” ಎಂದು ಮೂಲಗಳು ತಿಳಿಸಿವೆ.

ಇ-ಹರಾಜಿನ ಉದ್ದೇಶಕ್ಕಾಗಿ, ಸರ್ಕಾರವು CL2 ನ ನಾಮಕರಣವನ್ನು CL2A ನೊಂದಿಗೆ ಮತ್ತು CL9 ಅನ್ನು CL9A ನೊಂದಿಗೆ ಬದಲಾಯಿಸಿದೆ. ಪ್ರಸ್ತಾವಿತ ತಿದ್ದುಪಡಿಯನ್ನು ಕರ್ನಾಟಕ ಅಬಕಾರಿ ಕಾಯ್ದೆ, 1965 (ಕರ್ನಾಟಕ ಕಾಯ್ದೆ 21 ಆಫ್ 1966) ರ ಸೆಕ್ಷನ್ 71 ರ ಅಡಿಯಲ್ಲಿ ಮಾಡಲಾಗುತ್ತಿದೆ.

“ಸೆಪ್ಟೆಂಬರ್ 23 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಹತ್ತು ದಿನಗಳ ಅವಧಿ ಮುಗಿದ ನಂತರ ಈ ಕರಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮೇಲೆ ನಿರ್ದಿಷ್ಟಪಡಿಸಿದ ಅವಧಿ ಮುಗಿಯುವ ಮೊದಲು ಈ ಕರಡಿಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯಿಂದ ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ” ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Bihar Election Results 2025: ಮತ ಎಣಿಕೆ ಆರಂಭ, ಸತತ 5ನೇ ಬಾರಿ ಗೆಲುವಿನ ಉತ್ಸಾಹದಲ್ಲಿ ನಿತೀಶ್ ಕುಮಾರ್, ಬದಲಾವಣೆ ನಿರೀಕ್ಷೆಯಲ್ಲಿ ತೇಜಸ್ವಿ ಯಾದವ್

Bihar Election Results 2025: ಇಂದು ಬಿಹಾರ ಚುನಾವಣೆ ಮತ ಎಣಿಕೆ, ಕೆಲವೇ ಹೊತ್ತಿನಲ್ಲಿ ಭವಿಷ್ಯ ನಿರ್ಧಾರ; ಗೆಲುವಿನ 'ಹಾರ' ಯಾರ ಪಾಲು?

'ನಮಗೆ ಆತುರವಿಲ್ಲ, ಪಕ್ಷ ಕಟ್ಟಲು ರಕ್ತ -ಬೆವರು ಸುರಿಸಿದ್ದೇವೆ: ಅಧಿಕಾರಕ್ಕಾಗಿ ಇನ್ನೂ 5 ವರ್ಷ ಕಾಯುತ್ತೇವೆ; ಸಮ್ಮಿಶ್ರ ಸರ್ಕಾರ ಸೇರುವ ಪ್ರಶ್ನೆಯೇ ಇಲ್ಲ'

ನ.18ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತ: ತೇಜಸ್ವಿ ಯಾದವ್

ದೆಹಲಿ ಸ್ಫೋಟದಲ್ಲಿ ಜೈಶ್‍ನ 22 ವೈಟ್-ಕಾಲರ್ ಭಯೋತ್ಪಾದಕರು ಭಾಗಿ: ವಿಮಾನ ನಿಲ್ದಾಣಗಳಿಗೆ ಲುಕ್ಔಟ್ ಎಚ್ಚರಿಕೆ

SCROLL FOR NEXT