ರಸ್ತೆ ಗುಂಡಿಗೆ ಪೂಜೆ ಮಾಡಿದ ನಿವಾಸಿಗಳು 
ರಾಜ್ಯ

Bengaluru: 'ರಸ್ತೆ ಗುಂಡಿ'ಗೆ ಸ್ಥಳೀಯರ ಪೂಜೆ, ವಿನೂತನ ಪ್ರತಿಭಟನೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದ ಬೇಸತ್ತ ಬೆಂಗಳೂರಿನ ನಾಗರಿಕರ ಗುಂಪೊಂದು ಶನಿವಾರ (ಸೆಪ್ಟೆಂಬರ್ 27, 2025) ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಪದೇ ಪದೇ ಸರ್ಕಾರ ವಿಫಲವಾಗುತ್ತಿರುವುದನ್ನು ವಿರೋಧಿಸಿ ನಗರದ ನಿವಾಸಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹೌದು.. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದ ಬೇಸತ್ತ ಬೆಂಗಳೂರಿನ ನಾಗರಿಕರ ಗುಂಪೊಂದು ಶನಿವಾರ (ಸೆಪ್ಟೆಂಬರ್ 27, 2025) ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಗುಂಡಿಗಳು ಯಾವುದೇ ಜೀವವನ್ನು ಬಲಿ ತೆಗೆದುಕೊಳ್ಳದಂತೆ ಅವುಗಳಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

ನಗರದ ನಾಗರಿಕ ಸಂಸ್ಥೆಗಳು ಬೆಂಗಳೂರಿನಾದ್ಯಂತ ರಸ್ತೆಗುಂಡಿಗಳನ್ನು ಮುಚ್ಚಲು ಪ್ರಾರಂಭಿಸಿದ ಬೆನ್ನಲ್ಲೇ ನಿವಾಸಿಗಳ ಪ್ರತಿಭಟನೆ ನಡೆದಿರುವುದು ಗಮನ ಸೆಳೆದಿದೆ. ರಸ್ತೆಗುಂಡಿ ವಿಚಾರವಾಗಿ ನಗರದ ಇತರ ಭಾಗಗಳಲ್ಲಿ ಈ ಹಿಂದೆ ಇಂತಹ ಸಾಂಕೇತಿಕ ಪ್ರತಿಭಟನೆಗಳನ್ನು ನಡೆಸಲಾಗಿದ್ದರೂ, ಭಾರತಿನಗರ ನಿವಾಸಿಗಳ ವೇದಿಕೆಯು ಗುಂಡಿಯನ್ನು ದೇವರಂತೆ ಪರಿಗಣಿಸಿ ಅದಕ್ಕೆ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದೆ.

ನಗರದ ವೆಬ್‌ಸ್ಟರ್ ರಸ್ತೆಯಲ್ಲಿ ಸುಮಾರು 20–25 ಸದಸ್ಯರು ಒಟ್ಟುಗೂಡಿ ರಸ್ತೆ ಗುಂಡಿಯನ್ನು ಚೆಂಡು ಹೂ ಮತ್ತು ಗುಲಾಬಿ ದಳಗಳಿಂದ ಅಲಂಕರಿಸಿ ಧಾರ್ಮಿಕ ಪಠಣಗಳೊಂದಿಗೆ ಪೂಜಾ ಆಚರಣೆ ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿ ಪೂಜಾರಿಯನ್ನೂ ಸಹ ನೇಮಿಸಿ ಹೋಮ ಮಾಡಿಸಿದ್ದಾರೆ.

ನಿವಾಸಿಗಳ ವೇದಿಕೆಯ ಅಧ್ಯಕ್ಷ ಸುರೇಂದ್ರ ರವಿ ಮಾತನಾಡಿ, "ಕಾಕ್ಸ್ ಟೌನ್ ಒಂದರಲ್ಲೇ ಸುಮಾರು 100 ರಸ್ತೆ ಗುಂಡಿಗಳಿವೆ ಮತ್ತು ಇಲ್ಲಿಯವರೆಗೆ ನಡೆಸಲಾದ ದುರಸ್ತಿಗಳು ಕಳಪೆಯಾಗಿವೆ. ಗುಂಡಿಗಳು ತುಂಬಿದ ಕೆಲವೇ ದಿನಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಇದು ನಾಗರಿಕ ಸಂಸ್ಥೆಯ ಕಳಪೆ ಗುಣಮಟ್ಟದ ಕೆಲಸವನ್ನು ಎತ್ತಿ ತೋರಿಸುತ್ತದೆ. ಈ ಪ್ಯಾಚ್‌ವರ್ಕ್ ವಿಧಾನವು ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿಲ್ಲ" ಎಂದು ಹೇಳಿದರು.

ಅಂತೆಯೇ ಮಾಧ್ಯಮಗಳಲ್ಲಿ ವರದಿಯಾದರೆ ಮತ್ತು ಸಾರ್ವಜನಿಕ ಟೀಕೆಗಳು ಬಂದಾಗ ಮಾತ್ರ ನಾಗರಿಕ ಸಂಸ್ಥೆ ದುರಸ್ತಿಗೆ ಮುಂದಾಗುತ್ತದೆಯೇ ಹೊರತು ಆಡಳಿತವು ತನ್ನದೇ ಆದ ಉಪಕ್ರಮದಲ್ಲಿ ದುರಸ್ತಿ ಕಾರ್ಯ ಮಾಡುತ್ತಿಲ್ಲ. ಬದಲಾಗಿ ಪ್ರತಿಭಟನೆ ಬಂದಾಗ ಮಾತ್ರ ಕಾರ್ಯನಿರ್ವಹಿಸುವುದು ದುರದೃಷ್ಟಕರ. ಈ ಪ್ರದೇಶದಲ್ಲಿ ಹಲವಾರು ಜನರು ರಸ್ತೆ ಗುಂಡಿಗಳಿಂದ ಗಾಯಗೊಂಡಿದ್ದಾರೆ" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ನಿವಾಸಿಗಳು ಸ್ವತಃ ಗುಂಡಿಗಳನ್ನು ತುಂಬುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ, ನಾಗರಿಕ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಅದನ್ನು ಮುಂದುವರಿಸಲು ಯೋಜಿಸಿದ್ದಾರೆ. ನಾವು ಹತಾಶೆಯಿಂದ 'ಗುಂಡಿ ದೇವರುಗಳಿಗೆ' 'ಹೋಮ ಪೂಜೆ' ಮಾಡಿದ್ದೇವೆ, ಅದು ನಮ್ಮನ್ನು ಗಾಯ ಅಥವಾ ಸಾವಿನಿಂದ ರಕ್ಷಿಸುತ್ತದೆ ಎಂದು ನಂಬಿದ್ದೇವೆ. ಅದನ್ನು ಮೀರಿ, ನಾವು ಸಾಧ್ಯವಾದಷ್ಟು ಗುಂಡಿಗಳನ್ನು ನಾವೇ ತುಂಬುವುದನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Karur Stampede: 'ಭರಿಸಲಾಗದ ನಷ್ಟ'; ಮೃತರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರ ಘೋಷಿಸಿದ ನಟ ವಿಜಯ್

Karur Stampede: ಸಾವಿನ ಸಂಖ್ಯೆ 39ಕ್ಕೇರಿಕೆ, TVK ಮುಖ್ಯಸ್ಥ ನಟ Vijay ಬಂಧನಕ್ಕೆ ಆಗ್ರಹ, FIR ದಾಖಲು

ಧನ್ಯವಾದ ದೊಂದಿಗೆ ಹೀಗೊಂದು ಲಹರಿ: Dear ಉರಿಯಮ್ಮ/ಉರಿಯಪ್ಪನವರೇ; ಭಾನು ಮುಷ್ತಾಕ್ ಹೀಗೆ ಬರೆದಿದ್ದು ಯಾರಿಗೆ?

Asia Cup 2025 Final, IND vs PAK: ದುಬೈ ಹವಾಮಾನ- ಪಿಚ್ ವರದಿ, ಫೈನಲ್ ಪಂದ್ಯ ರದ್ದಾದರೆ ಪ್ರಶಸ್ತಿ ಯಾರಿಗೆ?

Asia Cup 2025: 'ಭಾರತವೇ ಗೆಲ್ಲುವ ಫೇವರಿಟ್.. ಆದರೆ..': ಪಾಕ್ ಮಾಜಿ ಕ್ರಿಕೆಟಿಗ Wasim Akram

SCROLL FOR NEXT