ರಸ್ತೆ ಗುಂಡಿಗೆ ಪೂಜೆ ಮಾಡಿದ ನಿವಾಸಿಗಳು 
ರಾಜ್ಯ

Bengaluru: 'ರಸ್ತೆ ಗುಂಡಿ'ಗೆ ಸ್ಥಳೀಯರ ಪೂಜೆ, ವಿನೂತನ ಪ್ರತಿಭಟನೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದ ಬೇಸತ್ತ ಬೆಂಗಳೂರಿನ ನಾಗರಿಕರ ಗುಂಪೊಂದು ಶನಿವಾರ (ಸೆಪ್ಟೆಂಬರ್ 27, 2025) ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಪದೇ ಪದೇ ಸರ್ಕಾರ ವಿಫಲವಾಗುತ್ತಿರುವುದನ್ನು ವಿರೋಧಿಸಿ ನಗರದ ನಿವಾಸಿಗಳು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಹೌದು.. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳಿಂದ ಬೇಸತ್ತ ಬೆಂಗಳೂರಿನ ನಾಗರಿಕರ ಗುಂಪೊಂದು ಶನಿವಾರ (ಸೆಪ್ಟೆಂಬರ್ 27, 2025) ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ಗುಂಡಿಗಳು ಯಾವುದೇ ಜೀವವನ್ನು ಬಲಿ ತೆಗೆದುಕೊಳ್ಳದಂತೆ ಅವುಗಳಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

ನಗರದ ನಾಗರಿಕ ಸಂಸ್ಥೆಗಳು ಬೆಂಗಳೂರಿನಾದ್ಯಂತ ರಸ್ತೆಗುಂಡಿಗಳನ್ನು ಮುಚ್ಚಲು ಪ್ರಾರಂಭಿಸಿದ ಬೆನ್ನಲ್ಲೇ ನಿವಾಸಿಗಳ ಪ್ರತಿಭಟನೆ ನಡೆದಿರುವುದು ಗಮನ ಸೆಳೆದಿದೆ. ರಸ್ತೆಗುಂಡಿ ವಿಚಾರವಾಗಿ ನಗರದ ಇತರ ಭಾಗಗಳಲ್ಲಿ ಈ ಹಿಂದೆ ಇಂತಹ ಸಾಂಕೇತಿಕ ಪ್ರತಿಭಟನೆಗಳನ್ನು ನಡೆಸಲಾಗಿದ್ದರೂ, ಭಾರತಿನಗರ ನಿವಾಸಿಗಳ ವೇದಿಕೆಯು ಗುಂಡಿಯನ್ನು ದೇವರಂತೆ ಪರಿಗಣಿಸಿ ಅದಕ್ಕೆ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿದೆ.

ನಗರದ ವೆಬ್‌ಸ್ಟರ್ ರಸ್ತೆಯಲ್ಲಿ ಸುಮಾರು 20–25 ಸದಸ್ಯರು ಒಟ್ಟುಗೂಡಿ ರಸ್ತೆ ಗುಂಡಿಯನ್ನು ಚೆಂಡು ಹೂ ಮತ್ತು ಗುಲಾಬಿ ದಳಗಳಿಂದ ಅಲಂಕರಿಸಿ ಧಾರ್ಮಿಕ ಪಠಣಗಳೊಂದಿಗೆ ಪೂಜಾ ಆಚರಣೆ ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿ ಪೂಜಾರಿಯನ್ನೂ ಸಹ ನೇಮಿಸಿ ಹೋಮ ಮಾಡಿಸಿದ್ದಾರೆ.

ನಿವಾಸಿಗಳ ವೇದಿಕೆಯ ಅಧ್ಯಕ್ಷ ಸುರೇಂದ್ರ ರವಿ ಮಾತನಾಡಿ, "ಕಾಕ್ಸ್ ಟೌನ್ ಒಂದರಲ್ಲೇ ಸುಮಾರು 100 ರಸ್ತೆ ಗುಂಡಿಗಳಿವೆ ಮತ್ತು ಇಲ್ಲಿಯವರೆಗೆ ನಡೆಸಲಾದ ದುರಸ್ತಿಗಳು ಕಳಪೆಯಾಗಿವೆ. ಗುಂಡಿಗಳು ತುಂಬಿದ ಕೆಲವೇ ದಿನಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತವೆ. ಇದು ನಾಗರಿಕ ಸಂಸ್ಥೆಯ ಕಳಪೆ ಗುಣಮಟ್ಟದ ಕೆಲಸವನ್ನು ಎತ್ತಿ ತೋರಿಸುತ್ತದೆ. ಈ ಪ್ಯಾಚ್‌ವರ್ಕ್ ವಿಧಾನವು ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿಲ್ಲ" ಎಂದು ಹೇಳಿದರು.

ಅಂತೆಯೇ ಮಾಧ್ಯಮಗಳಲ್ಲಿ ವರದಿಯಾದರೆ ಮತ್ತು ಸಾರ್ವಜನಿಕ ಟೀಕೆಗಳು ಬಂದಾಗ ಮಾತ್ರ ನಾಗರಿಕ ಸಂಸ್ಥೆ ದುರಸ್ತಿಗೆ ಮುಂದಾಗುತ್ತದೆಯೇ ಹೊರತು ಆಡಳಿತವು ತನ್ನದೇ ಆದ ಉಪಕ್ರಮದಲ್ಲಿ ದುರಸ್ತಿ ಕಾರ್ಯ ಮಾಡುತ್ತಿಲ್ಲ. ಬದಲಾಗಿ ಪ್ರತಿಭಟನೆ ಬಂದಾಗ ಮಾತ್ರ ಕಾರ್ಯನಿರ್ವಹಿಸುವುದು ದುರದೃಷ್ಟಕರ. ಈ ಪ್ರದೇಶದಲ್ಲಿ ಹಲವಾರು ಜನರು ರಸ್ತೆ ಗುಂಡಿಗಳಿಂದ ಗಾಯಗೊಂಡಿದ್ದಾರೆ" ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ನಿವಾಸಿಗಳು ಸ್ವತಃ ಗುಂಡಿಗಳನ್ನು ತುಂಬುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ, ನಾಗರಿಕ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಅದನ್ನು ಮುಂದುವರಿಸಲು ಯೋಜಿಸಿದ್ದಾರೆ. ನಾವು ಹತಾಶೆಯಿಂದ 'ಗುಂಡಿ ದೇವರುಗಳಿಗೆ' 'ಹೋಮ ಪೂಜೆ' ಮಾಡಿದ್ದೇವೆ, ಅದು ನಮ್ಮನ್ನು ಗಾಯ ಅಥವಾ ಸಾವಿನಿಂದ ರಕ್ಷಿಸುತ್ತದೆ ಎಂದು ನಂಬಿದ್ದೇವೆ. ಅದನ್ನು ಮೀರಿ, ನಾವು ಸಾಧ್ಯವಾದಷ್ಟು ಗುಂಡಿಗಳನ್ನು ನಾವೇ ತುಂಬುವುದನ್ನು ಮುಂದುವರಿಸುತ್ತೇವೆ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಹಗಲು ದರೋಡೆ: 7 ಕೋಟಿ ಕದ್ದ ಖದೀಮರು; 4 ಶಂಕಿತರ ಫೋಟೋ, ಡಿಜಿ-ಐಜಿಪಿಗೆ ಪರಮೇಶ್ವರ್ ತಾಕೀತು!

ದಾಖಲೆಯ 10ನೇ ಬಾರಿಗೆ ಬಿಹಾರದ ಸಿಎಂ ಆಗಿ ನಿತೀಶ್ ನಾಳೆ ಪ್ರಮಾಣವಚನ: BJPಯ ಸಾಮ್ರಾಟ್ ಚೌಧರಿ, ವಿಜಯ್ ಸಿನ್ಹಾ DCM!

ದೆಹಲಿಯ JNU ಗೆ ಶೃಂಗೇರಿ ಶ್ರೀಗಳ ಭೇಟಿ: ಕ್ಯಾಂಪಸ್ ನಲ್ಲಿ ವಿದ್ಯಾರಣ್ಯ ಮೂರ್ತಿಗೆ ಮಾಲಾರ್ಪಣೆ, VIKAS ಕುರಿತು ಉಪನ್ಯಾಸ; Video

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

ಶಬರಿಮಲೆಯಲ್ಲಿ ಜನದಟ್ಟಣೆ: ಅಯ್ಯಪ್ಪ ಭಕ್ತರ ಸುರಕ್ಷಿತ, ಸುಗಮ ಸಂಚಾರಕ್ಕಾಗಿ ಕೇರಳಕ್ಕೆ ಕರ್ನಾಟಕ ಸರ್ಕಾರ ಮನವಿ!

SCROLL FOR NEXT