ಸಂಗ್ರಹ ಚಿತ್ರ 
ರಾಜ್ಯ

ಭಟ್ಕಳದಲ್ಲಿ ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ಸ್ಕಿಟ್: ಸ್ವಯಂಪ್ರೇರಿತ ಪ್ರಕರಣ ದಾಖಲು

ವಿಡಿಯೋದಲ್ಲಿ “ಹಿಂದೂ ಮಹಿಳೆಯರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಅವರು ನಮ್ಮನ್ನು ಹಲವು ಬಾರಿ ಲೂಟಿ ಮಾಡಿದ್ದಾರೆ. ನಮ್ಮ ಜನರಿಗೆ ಬುದ್ಧಿ ಇಲ್ಲ' ಎಂಬಂತಹ ಆರೋಪಗಳನ್ನು ಮಾಡಿ, ಮತೀಯ ವೈರತ್ವವನ್ನು ಹೆಚ್ಚಿಸಲು ಯತ್ನಿಸಲಾಗಿದೆ.

ಭಟ್ಕಳ (ಉತ್ತರ ಕನ್ನಡ): ಭಟ್ಕಳದ ಮೀನು ಮಾರುಕಟ್ಟೆ ವಿವಾದಕ್ಕೆ ಧಾರ್ಮಿಕ ಬಣ್ಣ ಬಳಿಯುವ ಪ್ರಯತ್ನಗಳು ನಡೆಯುತ್ತಿದ್ದು, ಹಿಂದೂ ಮೀನುಗಾರ ಮಹಿಳೆಯರನ್ನು ಗುರಿಯಾಗಿಸಿ ಅಪಪ್ರಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹಿಂದೂ ಮೀನುಗಾರ ಮಹಿಳೆಯರ ವಿರುದ್ಧ ದ್ವೇಷ ಭಿತ್ತರಿಸುವ ಉದ್ದೇಶದಿಂದ ಮಕ್ಕಳಿಂದ ಒಂದು ಸ್ಕಿಟ್ ಮಾಡಿಸಿರುವ ಕಿಡಿಗೇಡಿಗಳು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

1,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ನ್ಯೂ ಫಿಶ್ ಮಾರ್ಕೆಟ್ ಡೈಲಿ ಅಪ್‌ಡೇಟ್ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಕೊಂಕಣಿ ಭಾಷೆಯ ಉಪಭಾಷೆಯಾದ ನವಯತಿಯಲ್ಲಿ ಈ ವಿಡಿಯೋ ಇದ್ದು, ವಿಡಿಯೋದಲ್ಲಿ “ಹಿಂದೂ ಮಹಿಳೆಯರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಅವರು ನಮ್ಮನ್ನು ಹಲವು ಬಾರಿ ಲೂಟಿ ಮಾಡಿದ್ದಾರೆ. ನಮ್ಮ ಜನರಿಗೆ ಬುದ್ಧಿ ಇಲ್ಲ' ಎಂಬಂತಹ ಆರೋಪಗಳನ್ನು ಮಾಡಿ, ಮತೀಯ ವೈರತ್ವವನ್ನು ಹೆಚ್ಚಿಸಲು ಯತ್ನಿಸಲಾಗಿದೆ.

ಸೌದಿ ಅರೇಬಿಯಾ ಅಥವಾ ದುಬೈನಂತಹ ಗಲ್ಫ್ ದೇಶಗಳಲ್ಲಿ ಈ ಸ್ಕಿಟ್ ಮಾಡಿಸಿ, ಭಟ್ಕಳದಲ್ಲಿ ಧರ್ಮಗಳ ನಡುವೆ ದ್ವೇಷ ಮೂಡಿಸಲು ಯತ್ನ ನಡೆಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಭಟ್ಕಶ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಭಟ್ಕಳದ ಹಳೇ ಬಸ್ ನಿಲ್ದಾಣದ ಬಳಿಯ ಹಳೇ ಮೀನು ಮಾರುಕಟ್ಟೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಹಲವು ವರ್ಷಗಳಿಂದ ಒಟ್ಟಿಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪುರಸಭೆಯು ಸಂತೆ ಮಾರುಕಟ್ಟೆಯ ಬಳಿ ಹೊಸ ಮೀನು ಮಾರುಕಟ್ಟೆ ನಿರ್ಮಿಸಿ, ಹಳೇ ಮಾರುಕಟ್ಟೆಯನ್ನು ನೆಲಸಮ ಮಾಡಿ ಅಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ಯೋಜಿಸಿತ್ತು.

ಪುರಸಭೆ ಅಧಿಕಾರಿಗಳು ಎಲ್ಲಾ ಮಾರಾಟಗಾರರಿಗೆ ಹೊಸ ಮಾರುಕಟ್ಟೆಗೆ ತೆರಳಲು ಸೂಚನೆ ನೀಡಿದರೂ, ಸ್ಥಳ ಮತ್ತು ವ್ಯವಸ್ಥೆಯ ಕೊರತೆಯಿಂದಾಗಿ ಹಲವು ಮೀನುಗಾರರು ಹಿಂಜರಿದರು. ಬದಲಿಗೆ, ಹಳೆಯ ಮಾರುಕಟ್ಟೆಯನ್ನೇ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಅವರು, ಮಾರುಕಟ್ಟೆಯನ್ನು ಕೆಡವಲಾಗುವುದಿಲ್ಲ ಎಂದು ಭರವಸೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕ್ ಭದ್ರತಾ ಪಡೆ ಪ್ರಧಾನ ಕಚೇರಿ ಹೊರಗೆ ಕಾರ್ ಬಾಂಬ್ ಸ್ಫೋಟ; ಕನಿಷ್ಠ 10 ಮಂದಿ ಸಾವು

ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ

ಜಿಲ್ಲಾ ಉಸ್ತುವಾರಿ ಸಚಿವರನ್ನು ಎಸಿ ಕೋಣೆಯಿಂದ ಹೊರ ಹಾಕಿ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ: ಸಿಎಂಗೆ ವಿಜಯೇಂದ್ರ ಆಗ್ರಹ

ಕರೂರ್ ಕಾಲ್ತುಳಿತದ ಬಗ್ಗೆ ವದಂತಿ: ಯೂಟ್ಯೂಬರ್ ಬಂಧನ; ಟಿವಿಕೆ ಕಾರ್ಯಕರ್ತರ ವಿರುದ್ಧ ಕೇಸ್

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್

SCROLL FOR NEXT