ಶರಣ್ಯ ಅವರ ತಾಯಿಯ ಜೊತೆ ಡಿಕೆ ಶಿವಕುಮಾರ್ 
ರಾಜ್ಯ

ಕೇರಳ ಮೂಲದ ಶರಣ್ಯ ಪತ್ತೆ: ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಂದನೆ

ವೇದಿಕೆಯಿಂದಲೇ ರಾಜ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಾಚರಣೆ ಮಾಹಿತಿ ಪಡೆದ ಶಿವಕುಮಾರ್ ಅವರು, ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದರು.

ತಿರುವನಂತಪುರ: ತೊಡಗಿನ ತಡಿಯಂಡಮೊಳ್ ಅರಣ್ಯದಲ್ಲಿ ಚಾರಣ ಮಾಡುವಾಗ ನಾಪತ್ತೆಯಾಗಿದ್ದ ಕೇರಳ ಮೂಲದ ಶರಣ್ಯ ಅವರ ತಾಯಿಯ ಮನವಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಂದಿಸಿದ್ದು, ಈಕೆಯ ಪತ್ತೆಯಾಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಜ್ಯದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ನಂತರ ಶರಣ್ಯ ಅವರನ್ನು ಭಾನುವಾರ ಸಂಜೆ ಪತ್ತೆ ಮಾಡಲಾಗಿದೆ.

ಸಧ್ಯ ಕೇರಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ನಿರತರಾಗಿರುವ ಡಿ.ಕೆ. ಶಿವಕುಮಾರ್ ಅವರನ್ನು ಶರಣ್ಯ ಅವರ ತಾಯಿ ಒರ್ಕಟ್ಟೇರಿಯಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದ ವೇಳೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಮಗಳ ನಾಪತ್ತೆ ವಿಚಾರವನ್ನು ತಿಳಿಸಿದರು.

ವೇದಿಕೆಯಿಂದಲೇ ರಾಜ್ಯದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕಾರ್ಯಾಚರಣೆ ಮಾಹಿತಿ ಪಡೆದ ಶಿವಕುಮಾರ್ ಅವರು, ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದರು.

ಶರಣ್ಯ ಪತ್ತೆಯಾಗಿರುವ ವಿಚಾರವಾಗಿ ತಿರುವನಂತಪುರದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಶಿವಕುಮಾರ್ ಅವರು ಮಾತನಾಡಿದ್ದು, “ಕಳೆದ ಎರಡು ದಿನಗಳಿಂದ ಕೇರಳಂನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ. ನಿನ್ನೆ ಮಧ್ಯಾಹ್ನ ಪ್ರಚಾರ ಮಾಡುವಾಗ ಕೊಡಗಿನ ಅರಣ್ಯದಲ್ಲಿ ಟ್ರೆಕಿಂಗ್ ಗೆ ತೆರಳಿ ನಾಪತ್ತೆಯಾಗಿದ್ದ ಶರಣ್ಯ ಅವರ ತಾಯಿ ನನ್ನನ್ನು ಭೇಟಿ ಮಾಡಿ ಆಕೆಯ ಪತ್ತೆಗೆ ಮನವಿ ಸಲ್ಲಿಸಿದ್ದರು. ನಾನು ತಕ್ಷಣವೇ ವೇದಿಕೆಯಲ್ಲೇ ನಮ್ಮ ರಾಜ್ಯದ ಅಧಿಕಾರಿಗಳು ಹಾಗೂ ಬುಡಕಟ್ಟು ನಾಯಕರನ್ನು ಸಂಪರ್ಕ ಮಾಡಿದೆ.

ನಿನ್ನೆ ಬೆಳಗ್ಗೆ ಕೂಡ ಮಾಧ್ಯಮ ಸ್ನೇಹಿತರು ಈ ವಿಚಾರವಾಗಿ ನನಗೆ ಪ್ರಶ್ನೆ ಮಾಡಿದ್ದರು. ದೇವರ ನಾಡಿನಲ್ಲಿ ನಾನಿದ್ದು, ಅಯ್ಯಪ್ಪಸ್ವಾಮಿ ಹಾಗೂ ತಾಯಿ ಚಾಮುಂಡೇಶ್ವರಿ ಕೃಪೆಯಿಂದ ನಮ್ಮ ಅರಣ್ಯ ಅಧಿಕಾರಿಗಳು, ಪೊಲೀಸರು ಹಾಗೂ ಬುಡಕಟ್ಟು ಜನರು ಸೇರಿ ಸುಮಾರು 170ಕ್ಕೂ ಜನರ ತಂಡ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿ, ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದ ಶರಣ್ಯ ಅವರನ್ನು ಪತ್ತೆ ಮಾಡಿದ್ದಾರೆ. ಒಂದು ದಿನ ಧಾರಾಕಾರ ಮಳೆಯ ನಡುವೆ ಊಟವಿಲ್ಲದೆ, ಕೇವಲ ನೀರು ಸೇವಿಸುತ್ತಾ ಕಾಲ ಕಳೆದಿದ್ದಾರೆ. ಕಾಡಿ‌ನಲ್ಲಿ ಸಿಲುಕಿದ್ದ ಈ ಹುಡುಗಿ ಬಹಳ ಧೈರ್ಯವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ನಿನ್ನೆ ಸಂಜೆಯೇ ಈಕೆಯ ಪತ್ತೆಯಾದ ಸುದ್ದಿ ಬಂದಿದ್ದು, ಈ ವಿಚಾರವನ್ನು ಬಹಳ ಸಂತೋಷದಿಂದ ಹಂಚಿಕೊಳ್ಳುತ್ತಿರುವೆ. ಈಕೆಯ ಪತ್ತೆಗೆ ಸಹಕರಿಸಿದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಇರಾನ್'ನಿಂದ ಡ್ರೋನ್-ಮಿಸೈಲ್ ದಾಳಿ; ಸೌದಿ ಅರೇಬಿಯಾದ ಅಲ್ ಜುಬೈಲ್ ಕೈಗಾರಿಕಾ ನಗರದಲ್ಲಿ ಭಾರೀ ಅಗ್ನಿ ಅವಘಡ, ಹೆಚ್ಚಿದ ಭೀತಿ

ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ; ಬಹುಶಃ ಆ ರಾತ್ರಿ ಇಂದೇ ಆಗಿರಬಹುದು: ಟ್ರಂಪ್ ಕೊನೇಯ ಎಚ್ಚರಿಕೆ

IPL 2026: ಮಳೆಯಿಂದಾಗಿ KKR ಮತ್ತು PBKS ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ 1 ಅಂಕ!

‘ಪೆಟ್ರೋಲ್‌ಗೆ ಬದಲಾಯಿಸಿಕೊಳ್ಳಿ’: ಆಟೋ LPG ಸಮಸ್ಯೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಲಹೆ

ನಮ್ಮ ನಾಯಕರನ್ನು ಹುಡುಕಿ ಹುಡುಕಿ ಕೊಂದಾಕ್ಷಣ ಇರಾನ್ ಶಕ್ತಿ ನಾಶ ಆದಂತಲ್ಲ: ಅಮೆರಿಕಕ್ಕೆ ಮೊಜ್ತಬಾ ಖಮೇನಿ ಎಚ್ಚರಿಕೆ

SCROLL FOR NEXT