ಪೆರಾಜ ಸಮೀಪದ ದಕ್ಷಿಣ ಕನ್ನಡದಲ್ಲಿ ತೆರೆದ ಒಣ ಬಾವಿಗೆ ಮರಿಯಾನೆ ಬಿದ್ದಿತ್ತು. 
ರಾಜ್ಯ

ಮಂಗಳೂರು: 12 ಗಂಟೆ ರೋಚಕ ಕಾರ್ಯಾಚರಣೆ; 30 ಅಡಿ ಆಳದ ಬಾವಿಗೆ ಬಿದ್ದಿದ್ದ ಮರಿ ಆನೆ ರಕ್ಷಿಸಿದ್ದು ಹೇಗೆ? Video

ರಾತ್ರಿ ಸುಮಾರು 11.30ಕ್ಕೆ ನಮಗೆ ಮಾಹಿತಿ ಸಿಕ್ಕಿತು. ಸುತ್ತಮುತ್ತಲಿನ ಹೊಲಗಳಿಂದ ಗದ್ದಲ ಕೇಳಿಬಂತು. ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಮರಿಯಾನೆ ಬಾವಿಗೆ ಬಿದ್ದಿರುವುದನ್ನು ದೃಢಪಡಿಸಿದರು ಎಂದು ಅರಣ್ಯ ಉಪ ಸಂರಕ್ಷಕ ಆಂಟನಿ ಮರಿಯಪ್ಪ ಹೇಳಿದರು.

ಮಂಗಳೂರು: ಅಂದು ಭಾನುವಾರ ರಾತ್ರಿ, ಸುತ್ತಮುತ್ತಲ ಪರಿಸರ ಶಾಂತವಾಗಿತ್ತು, ನಿಶ್ಶಬ್ದವಾಗಿರುವ ಪುಮಲೆ ಸಂರಕ್ಷಿತ ಅರಣ್ಯದ ಪಕ್ಕ ಕೃಷಿ ಭೂಮಿಯಲ್ಲಿ ಆನೆಯ ಗದ್ದಲ ಶಬ್ದ ಕೇಳಿಬಂತು. ಸುಮಾರು 20ರಿಂದ 25 ವರ್ಷದ ವಯಸ್ಸಿನ ಮರಿಯಾನೆ ಪೆರಾಜ ಸಮೀಪದ ಅಡಿಕೆ ತೋಟದಲ್ಲಿರುವ ಸುಮಾರು 30 ಅಡಿ ಆಳದ ತೆರೆದ ಬಾವಿಗೆ ಬಿದ್ದಿತ್ತು. ಕಲ್ಚರ್ಪೆಯ ರಮೇಶ್ ನಾಯಕ್ ಅವರಿಗೆ ಸೇರಿದ ಈ ತೋಟ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದಿಂದ ಸುಮಾರು 6 ಕಿಮೀ ದೂರದಲ್ಲಿದೆ.

ಕತ್ತಲಿನಲ್ಲಿ ಕೇಳಿಬಂದ ಅಸಹಜ ಶಬ್ದಗಳು ತಕ್ಷಣವೇ ಅರಣ್ಯ ಸಿಬ್ಬಂದಿಗೆ ಎಚ್ಚರಿಕೆಯನ್ನು ನೀಡಿದವು. ಬೆಳಗ್ಗಾಗುವಷ್ಟರಲ್ಲಿ ಆನೆ ಜೀವ ಉಳಿಸಲು ಕಾರ್ಯಾಚರಣೆಗಿಳಿದರು.

ರಾತ್ರಿ ಸುಮಾರು 11.30ಕ್ಕೆ ನಮಗೆ ಮಾಹಿತಿ ಸಿಕ್ಕಿತು. ಸುತ್ತಮುತ್ತಲಿನ ಹೊಲಗಳಿಂದ ಗದ್ದಲ ಕೇಳಿಬಂತು. ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಆನೆ ಬಾವಿಗೆ ಬಿದ್ದಿರುವುದನ್ನು ದೃಢಪಡಿಸಿದರು ಎಂದು ಅರಣ್ಯ ಉಪ ಸಂರಕ್ಷಕ ಆಂಟನಿ ಮರಿಯಪ್ಪ ಹೇಳಿದರು.

ಕತ್ತಲಿನಲ್ಲಿ ತಕ್ಷಣ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಗದ ಕಾರಣ, ತಂಡವು ಬೆಳಗಿನವರೆಗೂ ಮರಿಯಾನೆ ಮೇಲೆ ಕಣ್ಣಿಟ್ಟಿತ್ತು. ರಾತ್ರಿ ಪೂರ್ತಿ ಸಿಬ್ಬಂದಿ ಎಚ್ಚರಿಕೆಯಿಂದ ಕಾವಲು ಕಾಯುತ್ತಾ, ಮರಿಯಾನೆ ಹೆಚ್ಚು ಆತಂಕಕ್ಕೆ ಒಳಗಾಗದಂತೆ ನೋಡಿಕೊಂಡರು.

ಬೆಳಗಾಗುತ್ತಿದ್ದಂತೆ ನಿಜವಾದ ಸವಾಲು ಗೊತ್ತಾಯಿತು. ಬಾವಿ ದುರ್ಗಮ ಪ್ರದೇಶದಲ್ಲಿ ಇದ್ದುದರಿಂದ ಸಾಮಾನ್ಯ ರಕ್ಷಣಾ ಕ್ರಮಗಳು ಕಷ್ಟಕರವಾಗಿದ್ದವು. ಬೆಳಗ್ಗೆ 6.30ರ ವೇಳೆಗೆ ದೊಡ್ಡ ಯಂತ್ರೋಪಕರಣಗಳನ್ನು ತರಿಸಿ, ಮರಿಯಾನೆ ಹೊರಬರುವ ಸುರಕ್ಷಿತ ಮಾರ್ಗವನ್ನು ರೂಪಿಸಲು ಪ್ರಾರಂಭಿಸಿದರು. ಮರಿಯಾನೆ ಸುಮಾರು 30 ಅಡಿ ಆಳದಲ್ಲಿ ಇದ್ದುದರಿಂದ, ಅದರ ಭುಜ ಮಟ್ಟದವರೆಗೆ ಮಣ್ಣನ್ನು ತೆಗೆದುಹಾಕಬೇಕಾಯಿತು ಎಂದು ಮರಿಯಪ್ಪ ಹೇಳಿದರು.

ಮರಿಯಾನೆ ಹೊರಬರಲು ಒಂದು ರ್ಯಾಂಪ್ ನಿರ್ಮಿಸಲಾಯಿತು, ಅರಣ್ಯದ ಕಡೆಗೆ ಹೋಗಲು ಒಂದು ಅಗ್ಗದ ಕಾಲುವೆ ತೋಡಲಾಯಿತು. ಮರಿಯಾನೆಗೆ ಸುರಕ್ಷಿತವಾಗಿ ಹೊರಬರುವ ದಾರಿ ಒದಗಿಸುವುದು ಮತ್ತು ಜನರ ಕಡೆಗೆ ಹೋಗದಂತೆ ತಡೆಯುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿತ್ತು.

ಆದರೆ, ಸಿದ್ಧಪಡಿಸಿದ ದಾರಿಯನ್ನು ಅನುಸರಿಸುವ ಬದಲು, ಆನೆ ಅಕಸ್ಮಿಕವಾಗಿ ಮುಂದೆ ಚಲಿಸಿತು. ಹಿಟಾಚಿ ಯಂತ್ರವನ್ನು ಚಾಲಕನು ತಕ್ಷಣ ಹಿಂಪಡೆಯಲು ಸಾಧ್ಯವಾಗಲಿಲ್ಲ. ಆನೆ ಯಂತ್ರವನ್ನು ದಾಟಿ ಹೊಲಗಳತ್ತ ಓಡಿ ರಸ್ತೆಯತ್ತಲೂ ಮುಂದಾಯಿತು.

ಅರಣ್ಯ ಸಿಬ್ಬಂದಿ, ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಅಕ್ರಮ ಬೇಟೆ ವಿರೋಧಿ ತಂಡದ ಸದಸ್ಯರು ತಕ್ಷಣ ಕ್ರಮ ಕೈಗೊಂಡು, ಪಟಾಕಿ ಸಿಡಿಸಿ ಎಚ್ಚರಿಕೆಯಿಂದ ಗುಂಡು ಹಾರಿಸಿ ಆನೆಯನ್ನು ಜನರಿಂದ ದೂರವಿಟ್ಟು ಮತ್ತೆ ಅರಣ್ಯದತ್ತ ಹಿಮ್ಮೆಟ್ಟಿಸಿದರು. ಆನೆ ಸುಮಾರು 500 ಮೀಟರ್ ದೂರ ನಡೆದು ಯಾವುದೇ ಗಾಯಗಳಿಲ್ಲದೆ ಅರಣ್ಯದಲ್ಲಿ ಅಡಗಿ ಹೋಯಿತು.

ಆನೆಗೆ ಆತಂಕ ಕಡಿಮೆಯಾದ ಬಳಿಕ ಅದು ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತದೆ. ಇಲ್ಲಿ ಅದೇ ನಡೆದಿದೆ. ಅದು ಬಂದ ದಾರಿಯನ್ನೇ ಮತ್ತೆ ಆಯ್ಕೆ ಮಾಡಿಕೊಂಡಿತು ಎಂದು ಮರಿಯಪ್ಪ ಹೇಳಿದರು.

ಈ ರಕ್ಷಣಾ ಕಾರ್ಯ ಮಧ್ಯಾಹ್ನ 1 ಗಂಟೆ ವೇಳೆಗೆ ಪೂರ್ಣಗೊಂಡಿತು. ಸುಮಾರು 100 ಮಂದಿ ಸಿಬ್ಬಂದಿ — ಅರಣ್ಯ ಇಲಾಖೆ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ಸದಸ್ಯರು ಹಾಗೂ ಅರವಳಿಕೆಯೊಂದಿಗೆ ಬಂದ ಪಶುವೈದ್ಯರು — ಈ ಕಾರ್ಯದಲ್ಲಿ ಭಾಗವಹಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ETF ಸ್ಥಾಪನೆಯಾದ ನಂತರ ಇದು ನಡೆದ ಮೊದಲ ಕಾರ್ಯಾಚರಣೆ ಇದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್, ಲೆಬನಾನ್ ಕುರಿತು ಇಸ್ರೇಲ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ; ಇರಾನ್​​ನಿಂದ ಆರ್ಥಿಕ ಭಯೋತ್ಪಾದನೆ ಎಂದ ಸಾರ್!

ಇರಾನ್‌ನ ಬಂದರುಗಳ ದಿಗ್ಬಂಧನ ಕೈಬಿಡುವಂತೆ ಸೌದಿ ಅರೇಬಿಯಾ 'ಒತ್ತಡ': ಟ್ರಂಪ್ ನೀತಿಗೆ ಮಿತ್ರ ರಾಷ್ಟ್ರದಿಂದಲೇ ವಿರೋಧ!

ಪ. ಬಂಗಾಳ: ಮತದಾನಕ್ಕೆ ಕೆಲವೇ ದಿನ ಇರುವಂತೆಯೇ I-PAC ಸಹ-ಸಂಸ್ಥಾಪಕ ವಿನೇಶ್ ಚಾಂಡೆಲ್ ಬಂಧನ! ಯಾಕೆ ಗೊತ್ತಾ?

Strait of Hormuz: ಟ್ರಂಪ್ ದಿಗ್ಬಂಧನ ಮೀರಿ ಹಾರ್ಮುಜ್ ದಾಟಿದ ಚೀನಾ ಹಡಗು!

US-Iran Peace Talks: ಅಣ್ವಸ್ತ್ರ ವಿಚಾರದಲ್ಲಿ ಅಮೆರಿಕಾ ಕಠಿಣ ನಿಲುವು; ಮಾತುಕತೆಯಲ್ಲಿ ಪ್ರಗತಿ ಸಾಧಿಸಿದ್ದೇವೆ, ಮುಂದಿನ ನಿರ್ಧಾರ ಇರಾನ್'ಗೆ ಬಿಟ್ಟದ್ದು- ಜೆ.ಡಿ.ವ್ಯಾನ್ಸ್

SCROLL FOR NEXT