ಅಪಘಾತದಲ್ಲಿ ಜೆಸಿಬಿ ಚಾಲಕನ ರುಂಡ ಕಟ್ 
ರಾಜ್ಯ

ಭೀಕರ ಅಪಘಾತ: ರಿಪೇರಿಗೆ ನಿಂತಿದ್ದ JCBಗೆ ಕಾರು ಢಿಕ್ಕಿ, ಚಾಲಕನ ತಲೆ ಕಟ್; ಇಂಜಿನ್ ನಲ್ಲಿ ರುಂಡ ಪತ್ತೆ!

ಕಾರು ಢಿಕ್ಕಿಯಾದ ರಭಸಕ್ಕೆ ಸದಾನಂದ ತಲೆ ಕಟ್ ಆಗಿ ಕಾರಿನ ಎಂಜಿನ್ ಮೇಲೆ ಬಿದ್ದಿದೆ. ರುಂಡ-ಮುಂಡ ಬೇರೆಯಾಗಿ ಸದಾನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹುಬ್ಬಳ್ಳಿ: ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದ JCBಗೆ ಕಾರು ಢಿಕ್ಕಿಯಾದ ಪರಿಣಾಮ ಚಾಲಕನ ತಲೆ ಕಟ್ ಆದ ಧಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ-ಕುಂದಗೋಳ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ವೇಗದ ಕಾರು ಡಿಕ್ಕಿ ಹೊಡೆದ ಪರಿಣಾಮ ಜೆಸಿಬಿ ಆಪರೇಟರ್ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತ ಜೆಸಿಬಿ ಚಾಲಕನನ್ನು ಸದಾನಂದ ಕಟೇಗಾರ ಎಂದು ಗುರುತಿಸಲಾಗಿದೆ.

32 ವರ್ಷದ ಸದಾನಂದ ಕಟೇಗಾರ ಶೇರವಾಡ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಜೆಸಿಬಿ ಚಾಲಕನಾಗಿದ್ದ. ಏಪ್ರಿಲ್ 20, 2026 ರಂದು ಹುಬ್ಬಳ್ಳಿ-ಕುಂದಗೋಳ ರಸ್ತೆಯಲ್ಲಿ ಜೆಸಿಬಿ ಕೆಟ್ಟು ನಿಂತಿತ್ತು. ಹೀಗಾಗಿ ಸದಾನಂದ ರಸ್ತೆಬದಿಯಲ್ಲೇ ಅದರ ರಿಪೇರಿಕಾರ್ಯ ನಡೆಸುತ್ತಿದ್ದರು.

ಇದೇ ಸಂದರ್ಭದಲ್ಲೇ ವೇಗವಾಗಿ ಬಂದ ಕಾರೊಂದು ನೇರವಾಗಿ ಸದಾನಂದಗೆ ಢಿಕ್ಕಿಯಾಗಿದೆ. ಕಾರು ಢಿಕ್ಕಿಯಾದ ರಭಸಕ್ಕೆ ಸದಾನಂದ ತಲೆ ಕಟ್ ಆಗಿ ಕಾರಿನ ಎಂಜಿನ್ ಮೇಲೆ ಬಿದ್ದಿದೆ. ರುಂಡ-ಮುಂಡ ಬೇರೆಯಾಗಿ ಸದಾನಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾತ್ರವಲ್ಲದೇ ಕಾರಿನಲ್ಲಿದ್ದ ಐವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ದಿಗ್ಬಂಧನ ಧಿಕ್ಕರಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಸಂಗ್ರಹ; ಟ್ರಂಪ್'ಗೆ ಟೆಹ್ರಾನ್ ಡಿಚ್ಚಿ

Tamilnadu & West Bengal Election 2026 Live Updates |ಸಂಜೆ 5 ಗಂಟೆ ವೇಳೆಗೆ ತಮಿಳುನಾಡು ಶೇ. 81, ಪಶ್ಚಿಮ ಬಂಗಾಳ ಹಂತ-I ಶೇ.90 ಮತದಾನ

ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ: ಇರಾನ್ ಕೆಂಡಾಮಂಡಲ, ಮುಂದಿನ ನಡೆಯೇ ನಿಗೂಢ! ಏನಿದು ಹೊಸ ವಿವಾದ?

Indian Stock Market: ಇರಾನ್ ಸಂಘರ್ಷ, ತೈಲ ಬೆಲೆ ಏರಿಕೆ.. ಷೇರುಮಾರುಕಟ್ಟೆ ಕುಸಿತ, Sensex 852 ಅಂಕ ಇಳಿಕೆ

ಬೆಟ್ಟಿಂಗ್ ಪ್ರಕರಣಕ್ಕೆ ಹೈಕೋರ್ಟ್ ತಡೆ: ಗೃಹ ಸಚಿವ ಪರಮೇಶ್ವರ​​​ಗೆ ಬಿಗ್ ರಿಲೀಫ್!

SCROLL FOR NEXT