ನಿವೃತ್ತ ಸೇನಾಧಿಕಾರಿ ದಂಪತಿಯೊಂದಿಗೆ ವಾಗ್ವಾದಕ್ಕಿಳಿದ ಮುಸ್ಲಿಂ ಯುವಕರ ಗುಂಪು  
ರಾಜ್ಯ

'ನೀನು ಮುಸ್ಲಿಂ,ಪಾಕಿಸ್ತಾನಿ, ಭಯೋತ್ಪಾದಕ' ಎಂದು ನಿವೃತ್ತ ಸೇನಾಧಿಕಾರಿ ಪತ್ನಿ ಅವಮಾನ ಮಾಡಿದ ಆರೋಪ': ತರಾಟೆಗೆ ತೆಗೆದುಕೊಂಡ ಯುವಕರಿಗೆ ಕ್ಷಮೆಯಾಚನೆ-Video

ದಂಪತಿ ಆ ವ್ಯಕ್ತಿಗೆ “ನೀನು ಮುಸ್ಲಿಂ, ನೀನು ಪಾಕಿಸ್ತಾನಿ, ನೀನು ಭಯೋತ್ಪಾದಕ” ಎಂದು ಹೇಳಿದರೆಂದು ಆರೋಪಿಸಲಾಗಿದೆ. ಇದರಿಂದ ಆ ವ್ಯಕ್ತಿ ಕೋಪಗೊಂಡು ಅಲ್ಲಿಂದ ತೆರಳಿ, ಬಳಿಕ ಬೇರೆಯವರೊಂದಿಗೆ ಮರಳಿ ಬಂದು ಅವರನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಅಬ್ಬಿಗೆರೆಯಲ್ಲಿ ಆತಂಕಕಾರಿ ಘಟನೆ ಬೆಳಕಿಗೆ ಬಂದಿದ್ದು ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಬ್ಬ ಮಹಿಳೆ ಮತ್ತು ಅವರ ಪತಿ ( ನಿವೃತ್ತ ಭಾರತೀಯ ಸೇನಾ ಅಧಿಕಾರಿ) ಒಬ್ಬ ಮುಸ್ಲಿಂ ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪ ಎದುರಿಸುತ್ತಿದ್ದು, ಸ್ಥಳೀಯವಾಗಿ ಉದ್ವಿಗ್ನತೆ ಉಂಟಾಗಿದೆ. ಈ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ, ದಂಪತಿ ಆ ವ್ಯಕ್ತಿಗೆ “ನೀನು ಮುಸ್ಲಿಂ, ನೀನು ಪಾಕಿಸ್ತಾನಿ, ನೀನು ಭಯೋತ್ಪಾದಕ” ಎಂದು ಹೇಳಿದರೆಂದು ಆರೋಪಿಸಲಾಗಿದೆ. ಇದರಿಂದ ಆ ವ್ಯಕ್ತಿ ಕೋಪಗೊಂಡು ಅಲ್ಲಿಂದ ತೆರಳಿ, ಬಳಿಕ ಬೇರೆಯವರೊಂದಿಗೆ ಮರಳಿ ಬಂದು ಅವರನ್ನು ಪ್ರಶ್ನಿಸಿದ್ದಾರೆ.

ವಿಡಿಯೋದಲ್ಲಿ, ದಂಪತಿ ತಮ್ಮ ಅಪಾರ್ಟ್‌ಮೆಂಟ್ ಬಾಗಿಲಿನ ಬಳಿ ನಿಂತಿರುವುದು ಕಂಡುಬರುತ್ತದೆ. ಮುಸ್ಲಿಂ ವ್ಯಕ್ತಿ ಹಾಗೂ ಇತರ 3–4 ಮಂದಿ ಅವರ ಮುಂದೆ ನಿಂತು ನಿವೃತ್ತ ಸೇನಾ ಅಧಿಕಾರಿಯನ್ನು ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ. ಮಾತುಕತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅವಹೇಳನಕಾರಿ ಹೇಳಿಕೆಗಳಿಗೆ ಕಠಿಣ ವಿರೋಧ ವ್ಯಕ್ತವಾಗಿದೆ.

ಬಿಳಿ ಅಂಗಿ ಧರಿಸಿದ್ದ ಒಬ್ಬ ವ್ಯಕ್ತಿ ನಿವೃತ್ತ ಅಧಿಕಾರಿಯನ್ನು ಗಟ್ಟಿಯಾಗಿ ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ. ಇದು ನಿಮ್ಮ ತಂದೆಯ ದೇಶವೇ ಹೇಳಿ ಅಂಕಲ್. ಇದು ನಿಮ್ಮ ತಂದೆಯ ದೇಶವೇ ಇಲ್ಲ, ಇದು ಎಲ್ಲರ ದೇಶ ಎಂದು ಹೇಳುತ್ತಾರೆ. ನಿಮ್ಮ ಪತ್ನಿ ‘ನೀನು ಮುಸ್ಲಿಂ, ನೀನು ಭಯೋತ್ಪಾದಕ’ ಎಂದು ಹೇಳಲು ಏನು ಅಧಿಕಾರ ನಿಮಗೆ ಇದೆ ಎಂದು ಕೇಳುತ್ತಾರೆ.

ಇನ್ನೊಬ್ಬ ವ್ಯಕ್ತಿ “ಇದು ನಿಮ್ಮ ಉತ್ತರ ಭಾರತವಲ್ಲ, ಇದು ಕರ್ನಾಟಕ” ಎಂದು ಹೇಳುತ್ತಾರೆ.

ಬಿಳಿ ಅಂಗಿಯ ವ್ಯಕ್ತಿ ನಿವೃತ್ತ ಅಧಿಕಾರಿಯ ವೃತ್ತಿಯನ್ನು ಉಲ್ಲೇಖಿಸಿ, ನೀವು ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೀರಿ, ಭಾರತೀಯ ಸೇನೆಯಲ್ಲಿ ಇದ್ದೀರಿ. ಹಾಗಾದರೆ ನಿಮ್ಮಲ್ಲಿ ದೇಶಭಕ್ತಿ ಹೆಚ್ಚು ಇರಬೇಕು. ಹಾಗಿದ್ದರೂ ನಿಮ್ಮ ಪತ್ನಿ ಯಾರಿಗಾದರೂ ‘ನೀನು ಮುಸ್ಲಿಂನಾ? ನೀನು ಭಯೋತ್ಪಾದಕನಾ?’ ಎಂದು ಹೇಗೆ ಹೇಳಬಹುದು?” ಎಂದು ಪ್ರಶ್ನಿಸುತ್ತಾರೆ.

ಇಲ್ಲಿ ಎಲ್ಲರೂ ಧರ್ಮನಿರಪೇಕ್ಷ ಮನೋಭಾವ ಹೊಂದಿದ್ದಾರೆ. ನಿಮ್ಮ ಕೆಟ್ಟ ಚಿಂತನೆಗಳಿಂದ ಇಲ್ಲಿ ಅಶಾಂತಿ ಸೃಷ್ಟಿಸಬೇಡಿ. ಇಲ್ಲಿ ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತ ಎಲ್ಲರೂ ಒಂದೇ. ನೀವು ಮತ್ತು ನಿಮ್ಮಂತಹವರು ಇಲ್ಲಿ ಬಂದು ಧರ್ಮ, ಜಾತಿ ಆಧಾರದಲ್ಲಿ ಜನರನ್ನು ವಿಭಜಿಸಬೇಡಿ ಎಂದು ಎಚ್ಚರಿಕೆ ನೀಡಿದರು.

ಧರ್ಮದ ಬಗ್ಗೆ ಮಾತನಾಡುವ ಮೊದಲು ಯೋಚಿಸಿ ಮಾತನಾಡಿ, ಇದು ನಿಮ್ಮ ಮೊದಲ ಮತ್ತು ಕೊನೆಯ ಎಚ್ಚರಿಕೆ. ಎಲ್ಲ ವಿಷಯಗಳಿಗೂ ಕ್ಷಮೆ ಕೇಳಿ. ಮತ್ತೆ ಏನಾದರೂ ನಡೆದರೆ, ನಿಮ್ಮ ಅಪಾರ್ಟ್‌ಮೆಂಟ್‌ಗೆ ಬಂದು ರಸ್ತೆಗೆ ಎಳೆದು ಅವಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಾತಿನ ಚಕಮಕಿ ನಂತರ, ದಂಪತಿ ತಮ್ಮ ಹೇಳಿಕೆಗಳಿಗೆ ಕ್ಷಮೆ ಕೇಳಿದ್ದು, ಪರಿಸ್ಥಿತಿ ಶಮನಗೊಂಡಿದೆ. ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಬಹುದಾಗಿದ್ದ ಘಟನೆ ನಿಯಂತ್ರಣಕ್ಕೆ ಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Tamilnadu & West Bengal Election 2026 Live Updates | 9 ಗಂಟೆ ವೇಳೆಗೆ ತಮಿಳುನಾಡಿನಲ್ಲಿ ಶೇ. 17.69, ಪಶ್ಚಿಮ ಬಂಗಾಳದಲ್ಲಿ ಶೇ.18.76ರಷ್ಟು ಮತದಾನ

US-Iran war:: ಅಮೆರಿಕಾ ನೌಕಾ ದಿಗ್ಭಂಧನ ಮುಂದುವರಿದರೆ ಹಾರ್ಮುಜ್ ಜಲಸಂಧಿ ತೆರೆಯಲ್ಲ; ಇರಾನ್ ಕಠಿಣ ನಿಲುವು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ

ಇಂದು SSLC ರಿಸಲ್ಟ್: 8.6 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ, ಹೈಕೋರ್ಟ್ ಆದೇಶ ಹಿನ್ನೆಲೆ ಹಿಂದಿ ಗ್ರೇಡ್'ಗೆ ಕೊಕ್..!

ಕದನ ವಿರಾಮ ಒಪ್ಪಂದಕ್ಕೆ ಬೆಲೆ ಇಲ್ಲವೇ?: ಲೆಬನಾನ್‌ ಮೇಲೆ ಮುಂದುವರೆದ ಇಸ್ರೇಲ್ ದಾಳಿ, ಪತ್ರಕರ್ತೆ ಸೇರಿ ಐವರ ಸಾವು..!

ಕಬ್ಬಡ್ಡಿ ಪಂದ್ಯದ ವೇಳೆ ಬೆಟ್ಟಿಂಗ್: ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ, ಈಗ ತಮಾಷೆನೂ ಮಾಡುವಂತಿಲ್ಲ‌ ಎಂಬಂತಾಗಿದೆ; ಗೃಹ ಸಚಿವ ಪರಮೇಶ್ವರ್

SCROLL FOR NEXT