ಇಬ್ರಾಹಿಂ ಹಾಗೂ ಯುವತಿ 
ರಾಜ್ಯ

ಹಾವೇರಿಯಲ್ಲೂ ಲವ್​ ಜಿಹಾದ್​ ಸದ್ದು: ಬೆಳಗ್ಗೆ ಎಂಗೇಜ್​​ಮೆಂಟ್, ರಾತ್ರಿಯೇ ಇಬ್ರಾಹಿಂ ಜತೆ ಯುವತಿ ಎಸ್ಕೇಪ್​!

ಇಂದು ಬೆಳಗ್ಗೆ ಮಗಳ ನಿಶ್ಚಿತಾರ್ಥ ಮಾಡಲು ಸಜ್ಜಾಗಿದ್ದ ಕುಟುಂಬಕ್ಕೆ ದೊಡ್ಡ ಆಘಾತ ಎದುರಾಗಿದೆ. ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಧ್ಯರಾತ್ರಿಯೇ ನಾಪತ್ತೆಯಾಗಿದ್ದು, ಎಂಗೇಜ್​ಮೆಂಟ್ ಮುರಿದು ಬಿದ್ದಿದೆ.

ಹಾವೇರಿ: ದೇಶದ ಪ್ರಮುಖ ಟೆಕ್ ಕಂಪನಿ ಟಿಸಿಎಸ್ ನಲ್ಲಿ ಲವ್​ ಜಿಹಾದ್ ಕರ್ಮಕಾಂಡಗಳು ಬಯಲಾದ ಬೆನ್ನಲ್ಲೇ ಈಗ ಹಾವೇರಿಯಲ್ಲೂ ಲವ್ ಜಿಹಾದ್ ಆರೋಪಗಳು ಕೇಳಿ ಬಂದಿವೆ.

ಇಂದು ಬೆಳಗ್ಗೆ ಮಗಳ ನಿಶ್ಚಿತಾರ್ಥ ಮಾಡಲು ಸಜ್ಜಾಗಿದ್ದ ಕುಟುಂಬಕ್ಕೆ ದೊಡ್ಡ ಆಘಾತ ಎದುರಾಗಿದೆ. ನಿಶ್ಚಿತಾರ್ಥ ಮಾಡಿಕೊಳ್ಳಬೇಕಿದ್ದ ಯುವತಿ ಮಧ್ಯರಾತ್ರಿಯೇ ನಾಪತ್ತೆಯಾಗಿದ್ದು, ಎಂಗೇಜ್​ಮೆಂಟ್ ಮುರಿದು ಬಿದ್ದಿದೆ.

ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು‌ ಎಂಬಾತ ನಮ್ಮ ಮನೆಯ ಹುಡುಗಿಯನ್ನ ಪುಸಲಾಯಿಸಿ ಕರೆದೊಯ್ದು ಲವ್ ಜಿಹಾದ್​ಗೆ ಯತ್ನಿಸಿದ್ದಾನೆ ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೋಷಕರು ತಮ್ಮ ಮಗಳ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ಮೇ 11ಕ್ಕೆ ಮದುವೆ ಡೇಟ್ ಕೂಡ ಫಿಕ್ಸ್ ಆಗಿತ್ತು. ಆದ್ರೆ ಹಸೆಮಣೆ ಏರಬೇಕಿದ್ದ ಯುವತಿ ರಾತ್ರೋ ರಾತ್ರಿ ಪರಾರಿಯಾಗಿ ಮನೆ ಮಂದಿಗೆ ಶಾಕ್​ ಕೊಟ್ಟಿದ್ದಾಳೆ.

ಹಾನಗಲ್ ತಾಲೂಕಿನ ಶಂಕ್ರಿಕೊಪ್ಪದ ಗ್ರಾಮದ ಹಿಂದೂ ಯುವತಿ ಶಂಕ್ರಮ್ಮ ಎಂಬಾಕೆಯನ್ನ ಮುಸ್ಲಿಂ ಯುವಕ ಇಬ್ರಾಹಿಂ ಎಂಬಾತನೇ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ.

ಮತ್ತೊಂದೆಡೆ ಇದು ಪಕ್ಕಾ ಲವ್ ಜಿಹಾದ್ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ರಾತ್ರಿ ನಿಶ್ಚಿತಾರ್ಥದ ಹುಡುಗನ ಜತೆ ಪೋನ್ ನಲ್ಲಿ ಮಾತನಾಡಿದ್ದ ಯುವತಿ ಬೆಳಗ್ಗೆ ಆಗುವಷ್ಟರಲ್ಲಿ ನಾಪತ್ತೆಯಾಗಿದ್ದಾಳೆ. ಮನೆ ಹಿಂಬದಿ ಬಾಗಿಲಿನಿಂದ ಬಂದ ಇಬ್ರಾಹಿಂ ಆಕೆಯನ್ನ ಕರೆದೊಯ್ದು ಆರೋಪ ಕೇಳಿಬಂದಿದೆ. ನಮ್ಮ ಮಗಳು ಬೇಕು ಎಂದು ಪೊಲೀಸ್ ಠಾಣೆ ಮುಂದೆ ತಾಯಿ ಕಣ್ಣೀರು ಹಾಕಿದ್ದಾರೆ.

ಈ ಸಂಬಂಧ ಅಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TMC ಅಂತರ್ಯುದ್ಧ: ಸಂಸದೆ ಸತಾಬ್ದಿ ರಾಯ್ ಜೊತೆ ಸೇರಿ ಬಿಜೆಪಿ ನಾಯಕರನ್ನು ಭೇಟಿಯಾದ 20ನೇ ಬಂಡಾಯ ಸಂಸದ ಸುದೀಪ್!

24 ಗಂಟೆಯಲ್ಲೇ ಅಮೆರಿಕ ಜೊತೆ ಇರಾನ್ ಶಾಂತಿ ಒಪ್ಪಂದ ಹೇಳಿಕೆ: Pak ಪಿಎಂ ಶಹಬಾಜ್ ವಿರುದ್ಧ Iran ಕೆಂಡ!

Dharmasthalaಕ್ಕೆ ಕಳಂಕ ತರಲು 200 ಕೋಟಿ ಡೀಲ್: ಚಿನ್ನಯ್ಯ ಬ್ರೈನ್ ಮ್ಯಾಪಿಂಗ್ ಗೆ ಗಿರೀಶ್ ಮಟ್ಟಣ್ಣನವರ್ ಆಗ್ರಹ

1st ODI: Shubman Gill ಎಡವಟ್ಟು, ಆಫ್ಘನ್ ಬ್ಯಾಟರ್ ಗೆ ಜೀವದಾನ, Rahmanullah Gurbaz ಐತಿಹಾಸಿಕ ದಾಖಲೆ

ನೈಜೀರಿಯಾದಲ್ಲಿ ಕೊಕೇನ್ ಕಳ್ಳಸಾಗಣೆ: 11 ಭಾರತೀಯ ನಾವಿಕರು ಶಿಕ್ಷೆಗೆ ಗುರಿ

SCROLL FOR NEXT