ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇನಲ್ಲಿ ಸರಿಯಾಗಿ ಒಂದು ವಾರದ ಹಿಂದೆ, ಆಗಸ್ಟ್ 8 ರಂದು KSRTC ಅಪಘಾತಕ್ಕೆ ಈಡಾಗಿ ಬಸ್ನ ಚಾಲಕ ಮತ್ತು ಕಂಡಕ್ಟರ್ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, 14 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಆದ್ರೆ, ಈ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕೇರಳ ಬಸ್ಗಳನ್ನೇ ಟಾರ್ಗೆಟ್ ಮಾಡಿ ಮೊಟ್ಟೆ ಎಸತ ನಡೆಯುತಿದೆಯಾ ಎನ್ನುವ ಪ್ರಶ್ನೆ ಮೂಡಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಆಗಸ್ಟ್ 8 ರ ಶನಿವಾರ ಮುಂಜಾನೆ ಕೇರಳಂ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಸೈನ್ ಬೋರ್ಡ್ಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಚಾಲಕ ಅರುಣ್ ಕುಮಾರ್ ಮತ್ತು ನಿರ್ವಾಹಕ ಮಿಥಿಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈಗ ಅಪಘಾತಕ್ಕೀಡಾದ ಆ ಬಸ್ನ ಚಾಸಿಸ್ ಮೇಲೆ ಒಡೆದ ಮೊಟ್ಟೆಯ ಅವಶೇಷಗಳು ಪತ್ತೆಯಾಗಿವೆ. ಆದ್ರೆ, ಇಲ್ಲೇ ಇರೋದು ನೋಡಿ ಟ್ವಿಸ್ಟ್!
ಆಗಸ್ಟ್ 8ರ ಮೊಟ್ಟೆ ಎಸತ ನಡೆದ ಜಾಗದಿಂದ ಕೇವಲ 2 ಕಿಲೋಮೀಟರ್ ವ್ಯಾಪ್ತಿಯಲ್ಲೇ ಆಗಸ್ಟ್ 12 ರ ಬುಧವಾರ ರಾತ್ರಿ ಸುಮಾರು 9 ಗಂಟೆಗೆ, ಬೆಂಗಳೂರಿನಿಂದ ಕೇರಳಂನ ಕಾಸರಗೋಡಿಗೆ ಹೊರಟಿದ್ದ ಕೇರಳಂ ಕೆಎಸ್ಆರ್ಟಿಸಿ ಬಿಡುಕ್ಸ್ ಬಸ್ ಬಿಡದಿ ಸಮೂಹದ ವಿಡುತಿ ಎಂಬಲ್ಲಿ ಚಲಿಸುತ್ತಿದ್ದಾಗ, ಎರಡು ಬೈಕ್ಗಳಲ್ಲಿ ಬಂದ ಐದು ಜನರ ಗ್ಯಾಂಗ್ ಬಸ್ನ ಮುಂಭಾಗದ ವಿಂಡ್ಶೀಲ್ಡ್ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.
ಆದ್ರೆ, ಮುಂಭಾಗದ ಗಾಜಿಗೆ ಮೊಟ್ಟೆ ಬಿದ್ದ ತಕ್ಷಣ ವೈಪರ್ ಆನ್ ಮಾಡಿದರೆ ಇಡೀ ಗಾಜು ಮಂಕಾಗಿ ರಸ್ತೆ ಕಾಣಿಸದಂತಾಗುತ್ತದೆ. ಇದನ್ನು ಅರಿತ ಚಾಲಕ ಸುರೇಶ್ ಅವರು ಗಾಜು ತೊಳೆಯದೆ, ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಬೆಳಕಿರುವ ಸುರಕ್ಷಿತ ಜಾಗಕ್ಕೆ ಬಸ್ ಕೊಂಡೊಯ್ದು ನಿಲ್ಲಿಸಿದ್ದಾರೆ. ಆದ್ರೆ, ಆಗಸ್ಟ್ 8ರಂದು ಅಪಘಾತ ನಡೆದ ವೇಳೆಯೂ ಚಾಲಕನ ಮುಖ ಅಥವಾ ಬಸ್ನ ಗಾಜಿಗೆ ಮೊಟ್ಟೆ ಎಸೆದು ದೃಷ್ಟಿ ಮರೆಸಿದ್ದರಿಂದಲೇ ಬಸ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
ಏತನ್ಮಧ್ಯೆ, ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ, ಕೇರಳಂ ಸಾರಿಗೆ ಸಚಿವ ಸಿ.ಪಿ. ಜಾನ್ ಅವರು, ಅಪಘಾತಕ್ಕೀಡಾದ ಬಸ್ನ ಚಾಸಿಸ್ ಮೇಲೆ ಒಡೆದ ಮೊಟ್ಟೆಯ ಅವಶೇಷಗಳು ಪತ್ತೆಯಾಗಿವೆ. ಹೀಗಾಗಿ ಈ ಪ್ರಕರಣವನ್ನು ಕೇವಲ ಸಾಧಾರಣ ಅಪಘಾತ ಎಂದು ಪರಿಗಣಿಸದೆ, ವಿಧಿವಿಜ್ಞಾನ ತನಿಖೆ ನಡೆಸಬೇಕು ಎಂದು ಸಿ.ಪಿ. ಜಾನ್ ಅವರು ಕರ್ನಾಟಕ ಸರ್ಕಾರವನ್ನು ವಿನಂತಿಸಿದ್ದಾರೆ. ಇದರೊಂದಿಗೆ, ಎಕ್ಸ್ಪ್ರೆಸ್ವೇನಲ್ಲಿ ರಾತ್ರಿ ವೇಳೆ ಚಲಿಸುವ ಬಸ್ಗಳನ್ನು ಅಡ್ಡಗಟ್ಟಿ ದರೋಡೆ ಮಾಡಲು ಇಂತಹ ಮೊಟ್ಟೆ ಎಸೆಯುವ ತಂತ್ರವನ್ನು ದರೋಡೆಕೋರರು ಬಳಸುತ್ತಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಚಾಲಕರ ದೃಷ್ಟಿ ಮರೆಮಾಚಿ ಅಪಘಾತ ಉಂಟುಮಾಡುವ ಕೃತ್ಯವಾಗಿರಬಹುದು ಎಂದು ಕೇರಳಂ ಕೆಎಸ್ಆರ್ಟಿಸಿ ಬಿಡದಿ ಪೊಲೀಸರಿಗೆ ದೂರು ನೀಡಿದೆ.