ಸಂಗ್ರಹ ಚಿತ್ರ 
ರಾಜ್ಯ

Poland ಉದ್ಯೋಗ ವೀಸಾ ಹೆಸರಿನಲ್ಲಿ 4.5 ಲಕ್ಷ ರೂಪಾಯಿ ವಂಚನೆ: ಪ್ರಕರಣ ದಾಖಲು

2023ರ ಜನವರಿಯಲ್ಲಿ ತನ್ನ ಅರ್ಹತೆಗೆ ತಕ್ಕ ಉದ್ಯೋಗಾವಕಾಶ ಪೋಲ್ಯಾಂಡ್‌ನಲ್ಲಿ ಇದೆ ಎಂಬ ಮಾಹಿತಿ ಲಭಿಸಿದ್ದು, ಅಲ್ಲಿ ಕೆಲಸಕ್ಕೆ ತೆರಳುವ ಉದ್ದೇಶವನ್ನು ಸ್ನೇಹಿತ ಶಿಜೋಗೆ ತಿಳಿಸಿದ್ದೆ.

ಮಂಗಳೂರು: ಪೋಲ್ಯಾಂಡ್‌ಗೆ ಉದ್ಯೋಗ ವೀಸಾ ಒದಗಿಸುವುದಾಗಿ ಭರವಸೆ ನೀಡಿ ರೂ.4.5 ಲಕ್ಷ ವಂಚಿಸಿರುವ ಆರೋಪದಡಿ ಕಡಬಾ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದೇಶದಲ್ಲಿ ಕೆಲಸ ಮಾಡುವ ಕನಸು ಕಂಡಿದ್ದ ವೆಲ್ಡರ್ ವೃತ್ತಿಯ ವ್ಯಕ್ತಿಯೊಬ್ಬ ಈ ಮೋಸಕ್ಕೆ ಬಲಿಯಾಗಿದ್ದಾರೆ. ದೂರುದಾರನ ಪ್ರಕಾರ, 2023ರ ಜನವರಿಯಲ್ಲಿ ತನ್ನ ಅರ್ಹತೆಗೆ ತಕ್ಕ ಉದ್ಯೋಗಾವಕಾಶ ಪೋಲ್ಯಾಂಡ್‌ನಲ್ಲಿ ಇದೆ ಎಂಬ ಮಾಹಿತಿ ಲಭಿಸಿದ್ದು, ಅಲ್ಲಿ ಕೆಲಸಕ್ಕೆ ತೆರಳುವ ಉದ್ದೇಶವನ್ನು ಸ್ನೇಹಿತ ಶಿಜೋಗೆ ತಿಳಿಸಿದ್ದೆ. ನಂತರ ನೇಲ್ಯಾಡಿಯಲ್ಲಿ ಕಚೇರಿ ನಡೆಸುತ್ತಿದ್ದ ಪೆರಂಬಿಲ್ ಜೋಸೆಫ್ ಮನೋಜ್ ಮತ್ತು ಸ್ಮಿತಾ ಮನೋಜ್ ಅವರನ್ನು ಪರಿಚಯವಾಗಿತು. ಇಬ್ಬರೂ ಪೋಲ್ಯಾಂಡ್‌ನಲ್ಲಿ ವೀಸಾ ವಿಭಾಗದ ಅಧಿಕಾರಿಗಳನ್ನು ಪರಿಚಯವಿರುವುದಾಗಿ ನಂಬಿಸಿದ್ದರು.

ಆರು ತಿಂಗಳೊಳಗೆ ಉದ್ಯೋಗ ವೀಸಾ ಕೊಡಿಸುವುದಾಗಿ ಭರವಸೆ ನೀಡಿ, ರೂ.5 ಲಕ್ಷ ಹಣ ಬೇಡಿಕೆ ಇಟ್ಟಿದ್ದಪು, ನಂತರ ವೀಸಾ ಪ್ರಕ್ರಿಯೆ ಆರಂಭಿಸುವ ನೆಪದಲ್ಲಿ ಮೊದಲಿಗೆ ರೂ,1 ಲಕ್ಷ ಹಣವನ್ನು ಪಡೆದಿದ್ದರು. ನಂತರ 2023ರ ಮಾರ್ಚ್‌ನಿಂದ ಸೆಪ್ಟೆಂಬರ್ ನಡುವೆ ಹಂತ ಹಂತವಾಗಿ ಇನ್ನೂ ರೂ.2.5 ಲಕ್ಷವನ್ನು ನೀಡಲಾಗಿತ್ತು.

2023ರ ಸೆಪ್ಟೆಂಬರ್‌ನಲ್ಲಿ ವೀಸಾ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸಂದರ್ಶನಕ್ಕಾಗಿ ಮುಂಬೈಗೆ ಹೋಗಬೇಕು ಎಂದು ತಿಳಿಸಿ, ಮತ್ತಷ್ಟು 1 ಲಕ್ಷ ರೂ. ಹಣವನ್ನು ಪಡೆದಿದ್ದರು. ಮುಂಬೈಗೆ ತೆರಳಿದ ಬಳಿಕ ಯಾವುದೇ ವೀಸಾ ಅರ್ಜಿಯೇ ಸಲ್ಲಿಕೆಯಾಗಿಲ್ಲ ಎಂಬುದು ತಿಳಿಯಿತು, ಬಳಿಕ ವಂಚನೆಗೊಳಗಾಗಿರುವುದು ತಿಳಿಯಿತು.

ಬಳಿಕ ಆರೋಪಿಗಳನ್ನು ಪ್ರಶ್ನಿಸಿದಾಗ, 2025ರ ಡಿಸೆಂಬರ್ ಒಳಗೆ ಹಣವನ್ನು ಮರಳಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, 2026ರ ಜನವರಿಯಿಂದ ಪೆರಂಬಿಲ್ ಜೋಸೆಫ್ ಮನೋಜ್ ಸಂಪರ್ಕಕ್ಕೆ ಸಿಗಲಿಲ್ಲ. ಸ್ಮಿತಾ ಮನೋಜ್'ನನ್ನು ಸಂಪರ್ಕಿಸಿದಾಗ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರು ಆಧರಿಸಿ ಕಡಬಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 417 (ಮೋಸ), ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

ಏತನ್ಮಧ್ಯೆ ವಿದೇಶ ಉದ್ಯೋಗ ಹಾಗೂ ವೀಸಾ ಒದಗಿಸುವುದಾಗಿ ಹೇಳುವ ಖಾಸಗಿ ಏಜೆಂಟ್‌ಗಳು ಮತ್ತು ದಲ್ಲಾಳಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅಧಿಕೃತ ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕವೇ ವೀಸಾ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

WPL 2026: ಡೆಲ್ಲಿ ತಂಡವನ್ನು ಮಣಿಸಿ ಸತತ 2ನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡ RCB; ಇತಿಹಾಸ ನಿರ್ಮಿಸಿದ ತಂಡ!

'ನೀವು ಎಷ್ಟೇ ಕಿರುಚಾಡಿದ್ರು, ನನ್ನ ಸಮಾಧಿ ತೋಡಲು ಸಾಧ್ಯವಿಲ್ಲ'; ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಮೋದಿ ಗುಡುಗು!

ವಾಷಿಂಗ್ ಟನ್ ಪೋಸ್ಟ್ ನ 300 ಪತ್ರಕರ್ತರ ಉದ್ಯೋಗ ಕಡಿತ; ನೌಕರಿ ಕಳೆದುಕೊಂಡ ಪುತ್ರನ ಬಗ್ಗೆ ಶಶಿ ತರೂರ್ ಹೇಳಿದ್ದೇನು?

Video: ಸ್ಪೀಕರ್ ಹಿಂದೆ ಅಡಗಿಕೊಂಡ ಪ್ರಧಾನಿ ಮೋದಿ; ಬೆದರಿಕೆ ಹೇಳಿಕೆ 'ಸಂಪೂರ್ಣ ಸುಳ್ಳು' ಎಂದ ಕಾಂಗ್ರೆಸ್

ಸತ್ಯಕ್ಕೆ ಹೆದರಿ, ಸುಳ್ಳಿನಲ್ಲಿ ಆಶ್ರಯ: ರಾಜ್ಯಸಭೆಯಲ್ಲಿನ ಪ್ರಧಾನಿ ಭಾಷಣದ ವಿರುದ್ಧ ರಾಹುಲ್ ಕಿಡಿ!

SCROLL FOR NEXT