ಸಂಗ್ರಹ ಚಿತ್ರ 
ರಾಜ್ಯ

Valentine's Day 2026: ಈ ಬಾರಿ ಪ್ರೇಮಿಗಳ ದಿನಕ್ಕೆ ಬೆಂಗಳೂರಿನಿಂದ 6 ಕೋಟಿ ಗುಲಾಬಿ ರಫ್ತು..!

ಪ್ರೇಮಿಗಳ ದಿನದ ಹಿನ್ನೆಲೆ 2,700 ಮೆಟ್ರಿಕ್ ಟನ್ ತೂಕದ ಹೂವುಗಳನ್ನು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಕಳುಹಿಸಲಾಗಿದೆ.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರೇಮಿಗಳ ದಿನದ (ಫೆ.14) ಸಂದರ್ಭದಲ್ಲಿ ದಾಖಲೆಯ 6 ಕೋಟಿ ಗುಲಾಬಿ ಹೂವುಗಳನ್ನು ವಿವಿಧೆಡೆಗೆ ರಫ್ತು ಮಾಡಿದೆ.

ಪ್ರೇಮಿಗಳ ದಿನದಂದು ಹೂವುಗಳಿಗೆ ಬೇಡಿಕೆ ಹೆಚ್ಚಿರುವುದೇ ರಫ್ತು ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಕೆಐಎ ತಿಳಿಸಿದೆ.

ಪ್ರೇಮಿಗಳ ದಿನದ ಹಿನ್ನೆಲೆ 2,700 ಮೆಟ್ರಿಕ್ ಟನ್ ತೂಕದ ಹೂವುಗಳನ್ನು 26 ಅಂತಾರಾಷ್ಟ್ರೀಯ ಮತ್ತು 47 ದೇಶೀಯ ತಾಣಗಳಿಗೆ ಕಳುಹಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಹೂವುಗಳ ಸಂಖ್ಯೆಯಲ್ಲಿ ಶೇ.38 ಹಾಗೂ ತೂಕದಲ್ಲಿ ಶೇ.64 ರಷ್ಟು ಏರಿಕೆಯಾಗಿದೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಂಗಾಪುರ ಪ್ರಮುಖ ಗಮ್ಯಸ್ಥಾನವಾಗಿದ್ದು, ನಂತರ ಕೌಲಾಲಂಪುರ, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ಪ್ರಮುಖ ಮಾರುಕಟ್ಟೆಗಳಾಗಿವೆ. ಈ ಬಾರಿ ಲಾಸ್ ಏಂಜೆಲಿಸ್, ಲಂಡನ್ ಗ್ಯಾಟ್ವಿಕ್, ಡಲ್ಲಾಸ್, ಟೊರಾಂಟೋ ಮತ್ತು ಓರ್ಲ್ಯಾಂಡೋ ಹೊಸ ಗಮ್ಯಸ್ಥಾನಗಳಾಗಿ ಸೇರ್ಪಡೆಗೊಂಡಿವೆ.

ದೇಶೀಯ ಮಾರುಕಟ್ಟೆಯಲ್ಲಿ ದೆಹಲಿ ಮತ್ತು ಕೋಲ್ಕತಾ ಪ್ರಮುಖವಾಗಿ ಬೇಡಿಕೆಯನ್ನು ಹೊಂದಿದ್ದು, ಗುವಾಹಾಟಿ, ಮುಂಬೈ ಮತ್ತು ಜೈಪುರ ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೂಗಳನ್ನು ಸ್ವೀಕರಿಸಿವೆ.

ವಿಶೇಷವಾಗಿ ಕೋಲ್ಕತಾ, ಮುಂಬೈ, ಚಂಡೀಗಢ ಮತ್ತು ಲಖನೌ ನಗರಗಳಲ್ಲಿ ಕಳೆದ ವರ್ಷಕ್ಕಿಂತ 150 ಶೇಕಡಾ ಹೆಚ್ಚು ಬೆಳವಣಿಗೆ ಕಂಡುಬಂದಿದೆ.

BIAL ಅಧಿಕಾರಿಗಳ ಪ್ರಕಾರ, ಬಿಎಲ್ಆರ್ (ಬೆಂಗಳೂರು) ವಿಮಾನ ನಿಲ್ದಾಣದ ವಿಸ್ತೃತ ಸರಕು ಮೂಲಸೌಕರ್ಯವು ತಾಜಾತನ, ವೇಗ ಮತ್ತು ತಾಪಮಾನ ನಿಖರತೆಯನ್ನು ಖಚಿತಪಡಿಸುತ್ತದೆ. ಸುಧಾರಿತ ತಂತ್ರಜ್ಞಾನದೊಂದಿಗೆ ಸುಸಜ್ಜಿತವಾದ ಅತ್ಯಾಧುನಿಕ ಶೀತ ಸಂಗ್ರಹಣೆ ವ್ಯವಸ್ಥೆ, ರಿಯಲ್-ಟೈಮ್ ಟ್ರ್ಯಾಕಿಂಗ್ ಹಾಗೂ ತಾಪಮಾನ ನಿಯಂತ್ರಣ ತಂತ್ರಜ್ಞಾನಗಳಿಂದ ಹೂಗಳ ತಾಜಾತನವನ್ನು ಕಾಪಾಡಿಕೊಂಡು ವೇಗವಾಗಿ ರವಾನಿಸಲು ಸಾಧ್ಯವಾಗುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pak ಬಣ್ಣ ಬಯಲು: ಕಾಶ್ಮೀರ ರಕ್ತದೋಕುಳಿಗೆ 10,000 ಉಗ್ರರ ರವಾನಿಸಿದ್ದ: Hafiz Saeed ಪಾಪಕೃತ್ಯ ಬಹಿರಂಗಪಡಿಸಿದ ಮೌಲ್ವಿ, Video ವೈರಲ್

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆ: ನಕಲಿ ಪಿಂಚಣಿದಾರರಿಗೆ ಸರ್ಕಾರ ಶಾಕ್; 18 ಲಕ್ಷ ಖಾತೆಗಳು ತಾತ್ಕಾಲಿಕ ಸ್ಥಗಿತ, ವಂಚನೆಯಲ್ಲಿ ಬೆಂಗಳೂರೇ ನಂ.1..!

ತಮಿಳುನಾಡು ಜನತೆಗೆ CM ವಿಜಯ್ ಬಂಪರ್‌ ಗಿಫ್ಟ್;‌ ಸರ್ಕಾರಿ ನೌಕರರಿಗೆ 3ನೇ ಮಗುವಿಗೂ 1 ವರ್ಷ ಮಾತೃತ್ವ ರಜೆ; ಆರೋಗ್ಯ ವಿಮೆ 25 ಲಕ್ಷ ರೂ.ಗೆ ಹೆಚ್ಚಳ!

ಪುಣೆಯಲ್ಲಿ ಘೋರ ಕೃತ್ಯ: 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ; ಯುವಕನ ಬಂಧನ!

ಕೋಲ್ಕತ್ತಾದ ಹೊಟೇಲ್ ನಲ್ಲಿ ಭೀಕರ ಅಗ್ನಿ ಅವಘಡ: 9 ಮಂದಿ ಸಾವು, 6 ಜನರಿಗೆ ಗಾಯ-Video